ಬೀದರ್ ತಾಲೂಕಿನ ಬಗದಲ್ ಗ್ರಾಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ನಾಳೆ (ನ.9) ರಂದು ಕನ್ನಡದಲ್ಲಿ ʼಕುರ್ಆನ್ ಪ್ರವಚನʼ ಕಾರ್ಯಕ್ರಮ ನಡೆಯಲಿದೆ.
ಬಗದಲ್ ಗ್ರಾಮದ ಶೋಲಾಪುರಿ ಫಂಕ್ಸನ್ ಹಾಲ್ನಲ್ಲಿ ಪ್ರವಚನ ಕಾರ್ಯಕ್ರಮ ಜರುಗಲಿದ್ದು, ರಾಜ್ಯದ ಪ್ರಸಿದ್ಧ ಪ್ರವಚನಕಾರ ಮಂಗಳೂರಿನ ಜನಾಬ್ ಮುಹಮ್ಮದ್ ಕುಂಞ ಅವರು ಪ್ರವಚನ ನಡೆಸಲಿದ್ದಾರೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಮಾಅತೆ ಇಸ್ಲಾಮೀ ಹಿಂದ್ನ ಜನಾಬ್ ಫಯಿಮುದ್ದೀನ್ ಸಾಬ್, ಮಾಜಿ ಸಚಿವ ಬಂಡೆಪ್ಪ ಖಾಸೆಂಪುರ, ಮಾಜಿ ಶಾಸಕ ಅಶೋಕ ಖೇಣಿ, ಜಮಾಅತೆ ಉಲ್ಲಮ್ ಅಧ್ಯಕ್ಷ ಮೌಲಾನ್ ತಸ್ದಿಕ್ ನಡ್ವಿ ಸಾಬ್, ಬೆಮಳಖೇಡ್ ಹಿರೇಮಠದ ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ, ಆಣದೂರಿನ ಭಂತೆ ಸಂಘ ರಖೀತ್, ಬೀದರಿನ ಫಾದರ್ ಕ್ಲೇರಿ ಡಿಸೋಜಾ, ಶಾಹೀನ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಹಾಗೂ ಮುಖಂಡರಾದ ಚಂದ್ರಸಿಂಗ್ ನಸೀಮುದ್ದೀನ್ ಪಟೇಲ್, ಮುಜಾಯಿದ್ ಪಾಶಾ ಖುರೇಷಿ, ಮುಹಮ್ಮದ್ ಫೆರೋಜ್ ಖಾನ್, ರಫೀಕ್ ಅಹ್ಮದ್ ಗಾದಗಿ, ಇಕ್ಬಾಲ್ ಗಜಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ಬೀದರ್ | ಪಿಡಿಒ ಹುದ್ದೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ನಿಯೋಜನೆ
ಕನ್ನಡದಲ್ಲಿ ಒಂದು ದಿನದ ವಿಶೇಷ ಕುರ್ಆನ್ ಪ್ರವಚನವನ್ನು ಆಯೋಜಿಸಲಾಗಿದ್ದು, ಯಾವುದೇ ಜಾತಿ, ಮತ-ಭೇದಗಳಿಲ್ಲದೆ ಸುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.





