ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ನೀಡುವ 2025ನೇ ಸಾಲಿನ ‘ಕನಕ ಯುವ ಪುರಸ್ಕಾರ’ಕ್ಕೆ ಬೀದರ್ನ ಡಾ.ರವೀಂದ್ರ ಲಂಜವಾಡಕರ್ ಆಯ್ಕೆಯಾಗಿದ್ದಾರೆ.
ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದ ರವೀಂದ್ರ ಅವರು ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ವಿಚಾರ ಸಂಕಿರಣ, ಕಾರ್ಯಗಾರ, ಕಮ್ಮಟಗಳು ಸೇರಿದಂತೆ ಮನೆ-ಮನೆಗೆ ದಾಸ ಸಾಹಿತ್ಯ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ʼಸಮಾಜಮುಖಿ ದಾಸ ಸಾಹಿತ್ಯʼ ಸಂಶೋಧನೆಗೆ ಡಾಕ್ಟರೇಟ್ ಪಡೆದಿದ್ದಾರೆ.
ನಾಳೆ (ನ.8) ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಜರುಗಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಪುತ್ಥಳಿಯನ್ನು ಒಳಗೊಂಡಿದೆ.
ಇದನ್ನೂ ಓದಿ : ಬೀದರ್ | ಕಬ್ಬಿಗೆ ಎಫ್ಆರ್ಪಿ ದರ ನಿಗದಿಗೆ ಕಿಸಾನ್ ಸಭಾ ಆಗ್ರಹ
ಪ್ರಶಸ್ತಿ ಲಭಿಸಿದಕ್ಕೆ ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಮನೋಹರ ಸಿಂಗ್ ಪಾಟಿಲ್, ಮಹೇಬೂಬ ಉಸ್ತಾದ್, ಗಣೇಶ ಬಿರಾದಾರ, ನರಸಿಂಗ್ ಕುಲಕರ್ಣಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಶಾಮರಾವ ನೇಲವಾಡೆ, ರಾಮಶೆಟ್ಟಿ ಐನೊಳ್ಳೆ, ಶಿವಶರಣ ಜಾಪಾಟೆ, ಸುಧಾಕರ ಮಹೇಂದ್ರಕರ, ಮಹೇಶ್ ಮೈಲೂರಕರ್, ದಿನೇಶ್ ತಾಂದಳೆ ಹರ್ಷ ವ್ಯಕ್ತಪಡಿಸಿದ್ದಾರೆ.





