ಔರಾದ್ ಪಟ್ಟಣದ ಶ್ರೀ ಸಾಯಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಸಾಯಿ ದೇವಸ್ಥಾನ ಸಮಿತಿ ಸಹಯೋಗದಲ್ಲಿ ಆಯೋಜಿಸಿದ ಕನ್ನಡ ದೀಪೋತ್ಸವ ಹಾಗೂ ʼಶಿವಶರಣ ಹರಳಯ್ಯʼ ನಾಟಕ ಪ್ರದರ್ಶನ ಜನಮನ ಸೆಳೆಯಿತು.
ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ʼನಾಟಕಗಳು ಸಮಾಜದ ಕನ್ನಡಿಯಂತಿದ್ದು, ಅವು ಜನಸಾಮನ್ಯರ ಮೇಲೆ ಹೆಚ್ಚು ಪ್ರಭಾವ ಬೀರುವ ಅತ್ಯಂತ ಗಟ್ಟಿ ಮಾಧ್ಯಮ. ಹಿಂದಿನಿಂದಲೂ ನಾಟಕಗಳು ಜನರಿಗೆ ಮನರಂಜನೆಯ ಜೊತೆಗೆ ಬದುಕಿನ ಮರ್ಮವನ್ನೂ ಅರುಹಿ, ಒಳ್ಳೆಯದು ಕೆಟ್ಟದ್ದು ಎಂದು ತಿಳಿಹೇಳುವ ಪಾಠಗಳಾಗಿದ್ದವು. ಇದರಿಂದ ಸಮಾಜ ತನ್ನಿಂದ ತಾನೇ ಸುಧಾರಿಸಿಕೊಳ್ಳಲು ಸಹಾಯವಾಗುತ್ತಿತ್ತುʼ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಬಿ.ಎಂ ಅಮರವಾಡಿ ಮಾತನಾಡಿ, ʼಇಂದು ಸಿನಿಮಾ, ಟಿ.ವಿ. ಮೊಬೈಲ್ ಸೇರಿದಂತೆ ಮನರಂಜನೆಗಾಗಿ ಹಲವಾರು ಮಾಧ್ಯಮಗಳಿದ್ದರೂ ಅವು ನಾಟಕದಷ್ಟು ಪರಿಣಾಮಕಾರಿಯಲ್ಲ. ನಾಟಕಗಳು ಬದುಕಿನ ಸೌಂದರ್ಯ ಹಾಗೂ ಬವಣೆ ಸೇರಿದಂತೆ ಎಲ್ಲ ಮಗ್ಗುಲುಗಳನ್ನೂ ನಮ್ಮ ಕಣ್ಣೆದುರೇ ತೋರುವುದರ ಜೊತೆಗೆ ಸರಿ ತಪ್ಪು, ಒಳಿತು ಕೆಡುಕುಗಳನ್ನೂ ಅನಾವರಣಗೊಳಿಸುತ್ತವೆ ಇದರಿಂದಾಗಿಯೇ ಒಳ್ಳೆಯ ಮೌಲ್ಯಗಳನ್ನು ಹೊತ್ತ ನಾಟಕ ಜನರಿಗೆ ಸನ್ಮಾರ್ಗವನ್ನು ತೋರುತ್ತವೆʼ ಎಂದರು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ಸರುಬಾಯಿ ಘುಳೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಬಸವಾದಿ ಶರಣರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕೆಲಸ ಖುಷಿ ತಂದಿದೆʼ ಎಂದರು.

ಇದೇ ವೇಳೆ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನೀಲ ದೇಶಮುಖ, ನಿವೃತ್ತ ಬಸ್ ಚಾಲಕ ದೇವಪ್ಪ, ದೇವಸ್ಥಾನದ ಆವರಣ ರಂಗೋಲಿ ಮೂಲಕ ಅಲಂಕರಿಸಿದ ಪೋಲಪ್ಪ ಪವಾರ್ ಹಾಗೂ ರಮೇಶ ಪಾಂಚಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ : ಬೀದರ್ | ಕೆಟಿಪಿಪಿ ನಿಯಮ ಉಲ್ಲಂಘನೆ: ಹುಲಸೂರ ಪಿಡಿಒ ಅಮಾನತು
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಸವರಾಜ ಹೆಬ್ಬಾಳೆ, ಹಿರಿಯರಾದ ಗುಂಡಯ್ಯ ರಘುನಾಥ ಬಿರಾದಾರ, ಭೀಮಾಶಂಕರ ಜೀರ್ಗೆ, ವಿಜಯಕುಮಾರ ಶಾಸ್ತ್ರಿ, ಪಿಎಸ್ಐ ವಸೀಮ ಪಟೇಲ್, ಅಬಕಾರಿ ಇನ್ಸ್ಪೆಕ್ಟರ್ ಶಬೀರ್, ಶಿವಾನಂದ ಮೊಕ್ತೆದಾರ್, ಅಶೋಕ ಶೆಂಬೆಳ್ಳೆ, ಅಮರಸ್ವಾಮಿ ಸ್ಥಾವರಮಠ, ಅಂಬಾದಾಸ ನಳಗೆ, ಸಂದೀಪ ಪಾಟೀಲ್, ಮಹಾನಂದಾ ಎಂಡೆ, ರಾಜೇಂದ್ರ ನಾಯ್ಕ್, ಮಹಾದೇವ ಶಿಂಧೆ, ಅನೀಲ ಮೇತ್ರೆ ಸೇರಿದಂತೆ ಇನ್ನಿತರರಿದ್ದರು.





