ಬೀದರ್ ವಿಶ್ವವಿದ್ಯಾಲಯಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯ ಅನುಷ್ಠಾನ ಸಮಿತಿ ಆಗ್ರಹಿಸಿದೆ.
ಸಮಿತಿಯ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ʼಬೀದರನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಆದಾಗಿನಿಂದಲೂ ಡಾ.ಅಂಬೇಡ್ಕರ್ ಹೆಸರಿಡುವಂತೆ ಬೇಡಿಕೆ ಮಂಡಿಸುತ್ತಾ ಬರಲಾಗಿದೆ. ಆದರೂ, ಹೆಸರಿಡಲು ಹಿಂದೇಟು ಹಾಕಲಾಗುತ್ತಿದೆʼ ಎಂದು ಸಮಿತಿಯ ಪ್ರಮುಖರು ಬೇಸರ ವ್ಯಕ್ತಪಡಿಸಿದರು.
ʼಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ಬೇರೆ ಮಹಾ ಪುರುಷರ ಹೆಸರು ಘೋಷಿಸಿರುವುದು ಸಂತಸ ತಂದಿದೆ. ಬೀದರ್ ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ಅವರ ಹೆಸರು ಇಡಬೇಕು. ಈ ಕುರಿತು ಬೆಳಗಾವಿ ಅಧಿವೇಶನ ಮುಗಿಯುದರೊಳಗೆ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ವಿಶ್ವದ್ಯಾಲಯ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದುʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
ಸಮಿತಿಯ ಗೌರವಾಧ್ಯಕ್ಷ ಮುಕೇಶ ಚಲ್ವಾ, ಅಧ್ಯಕ್ಷ ಭೀಮರಾವ್ ಮಾಲಗತ್ತಿ, ಹಿರಿಯ ಉಪಾಧ್ಯಕ್ಷ ಪವನ್ ಮಿಠಾರೆ, ಉಪಾಧ್ಯಕ್ಷ ಸಂತೋಷ್ ಚಿಮಕೋಡೆ, ಪ್ರಧಾನ ಕಾರ್ಯದರ್ಶಿ ಮಿಲಿಂದ ಕಾಂಬಳೆ, ಕಾರ್ಯದರ್ಶಿ ನಿತೀಶ್ ಶಿಂದೆ, ಸಲಹೆಗಾರ ಸೂರ್ಯಕಾಂತ ಸಾಧುರೆ, ಸದಸ್ಯರಾದ ಉತ್ತಮ ಕೆಂಪೆ, ಗೌತಮ ಮುತ್ತಂಗಿಕರ್, ಶಿವಕುಮಾರ ಗುನ್ನಳ್ಳಿ, ಹರೀಶ್ ಮೀರಾಗಂಜ್, ಸಿದ್ಧಾರ್ಥ ಭಾವಿದೊಡ್ಡಿ, ಪೃಥ್ವಿರಾಜ ಮುಧೋಳಕರ್ ಇದ್ದರು.





