ಬೀದರ್‌ | ವಚನ ಸಾಹಿತ್ಯ ಭಾರತೀಯ ತತ್ವಶಾಸ್ತ್ರ ಪರಂಪರೆಯ ಭಾಗ: ಡಾ.ಮಯೂರ ಪೂಜಾರಿ

Date:

ಹನ್ನೆರಡನೇ ಶತಮಾನದಲ್ಲಿ ಶರಣರು ಬರೆದ ವಚನ ಸಾಹಿತ್ಯ ಭಾರತೀಯ ತತ್ವಶಾಸ್ತ್ರ ಪರಂಪರೆಯ ಬಹುದೊಡ್ಡ ಭಾಗವಾಗಿವೆ. ವೈಚಾರಿಕ ಅರಿವು, ನೈತಿಕ ಹೊಣೆಗಾರಿಕೆ ವಚನಗಳ ತಾತ್ವಿಕತೆಯಾಗಿದೆ ಎಂದು ಸಿಯುಕೆ ಶಿಕ್ಷಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಯೂರ ಪೂಜಾರಿ ಹೇಳಿದರು.

ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಶಿಕ್ಷಣಶಾಸ್ತ್ರ ವಿಭಾಗದಿಂದ ಗುರುವಾರ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ಸಮಕಾಲೀನ ಶೈಕ್ಷಣಿಕ ಸವಾಲು ಮತ್ತು ಸಾಧ್ಯತೆ, ಕುರಿತ ಸಂವಾದದಲ್ಲಿ ಮಾತನಾಡಿದ ಅವರು ಮಾತನಾಡಿದರು.

ʼಉನ್ನತ ಶಿಕ್ಷಣದಲ್ಲಿ ವಚನ ಸಾಹಿತ್ಯ ಮತ್ತು ವಚನಕಾರರ ಅಧ್ಯಯನ ಈ ಕಾಲದ ಅಗತ್ಯ. ವಚನಗಳು, ಬಸವಣ್ಣ, ಅಲ್ಲಮ ಉನ್ನತ ಶಿಕ್ಷಣದಲ್ಲಿ ಸಂಶೋಧನೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಮರ್ಶೆಯ ಸ್ವರೂಪ ಪಡೆಯುವುದು ಮುಖ್ಯ. ಹಾಗೆಯೇ ಮೌಲ್ಯಗಳನ್ನು ಬೆಳೆಸುವ , ಚಾರಿತ್ರಿಕ ಪ್ರಜ್ಞೆ ರೂಪಿಸುವ ನಿಟ್ಟಿನಲ್ಲಿ ಶಿಕ್ಷಣದ ಬೆಳವಣಿಗೆ ನಡೆಯಬೇಕುʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕಾಸ ಕುಮಾರ್ ಮಾತನಾಡಿ, ʼಬಸವಣ್ಣ ಮತ್ತು ಅವರ ಸಮಕಾಲೀನ ವಚನಕಾರರ ಚಾರಿತ್ರಿಕ ಸಂದರ್ಭ ಅನಂತವಾದದ್ದು. ಶರಣರು ಕಟ್ಟಿಕೊಟ್ಟ ತಾತ್ವಿಕ ಚಿಂತನೆ ಅತ್ಯಂತ ವೈಚಾರಿಕ, ಬೌದ್ಧಿಕ ನಿಲುವಿನಿಂದ ಕೂಡಿದೆ. ಉತ್ತರ ಭಾರತದ ಜನರಿಗೆ ಶರಣರ ತತ್ವ ಸಿದ್ಧಾಂತಗಳ ಪರಿಚಯವಿಲ್ಲ. ಹಿಂದಿ, ಬೆಂಗಾಲಿ, ಗುಜರಾತಿ ಸೇರಿ ಭಾರತೀಯ ಬೇರೆ ಬೇರೆ ಭಾಷೆಯಲ್ಲಿ ಕನ್ನಡದ ವಚನಗಳ ತರ್ಜುಮೆ ಅತ್ಯಗತ್ಯ. ಭಾರತದ ಹಲವು ವಿಶ್ವವಿದ್ಯಾಲಯಗಳಲ್ಲಿ ವಚನಗಳ ಅಧ್ಯಯನ ನಡೆಯುವ ಅಗತ್ಯವಿದೆ. ಕನ್ನಡೇತರ ಸಾಹಿತ್ಯದ ಓದುಗರಿಗೆ, ಬರಹಗಾರರಿಗೆ ವಚನ ಸಾಹಿತ್ಯ ತಲುಪಬೇಕಾಗಿದೆʼ ಎಂದು ನುಡಿದರು.

WhatsApp Image 2025 07 17 at 5.10.29 PM

ಸಿಯುಕೆ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲೇಶ್ ಉಮ್ಮಲ್ಲಾ ಮಾತನಾಡಿ, ʼಶರಣರ ಆರ್ಥಿಕ ಹಾಗೂ ರಾಜಕೀಯ ಚಿಂತನೆ ಅಕಾಡೆಮಿಕ್ ಚರ್ಚೆಯ ಭಾಗವಾಗಬೇಕು. ಇಷ್ಟೂಂದು ವಿಶಿಷ್ಟ ಮತ್ತು ವೈವಿಧ್ಯಮಯ ಬದುಕಿನ ಚಿಂತನೆ ಕಟ್ಟಿಕೊಟ್ಟ ಸಾಹಿತ್ಯ ಭಾರತೀಯ ಸಂದರ್ಭದಲ್ಲಿ ಸಿಗದು. ದೇಶದ ಎಲ್ಲ ವಿಶ್ವವಿದ್ಯಾಲಯದ ಆವರಣಗಳಲ್ಲಿ ವಚನ ಸಾಹಿತ್ಯದ ಚರ್ಚೆಯಾಗಬೇಕುʼ ಎಂದು ತಿಳಿಸಿದರು.

ಸಿಯುಕೆ ಹಳೆಯ ವಿದ್ಯಾರ್ಥಿ ಹಾಗೂ ಬಸವಕಲ್ಯಾಣದ ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಂಗತಿಗಳ ಬಗೆಗೆ ಹೆಚ್ಚು ಗಂಭೀರವಾದ ಚಿಂತನೆ ಹೊಂದಿದೆ ವಚನಗಳು ಜಗತ್ತಿನ ಎಲ್ಲ ಅಕಾಡೆಮಿಕ್ ವಲಯಗಳಲ್ಲಿ ಅನುಸಂಧಾನಕ್ಕೆ ಒಳಗಾಗಬೇಕು. ಎ.ಕೆ.ರಾಮಾನುಜನ್, ಓಎಲ್ ನಾಗಭೂಷಣ ಸ್ವಾಮಿ ಮೊದಲಾದ ವಿದ್ವಾಂಸರು ಹಾಗೂ ಬಸವ ಸಮಿತಿಯ ಸಿಯುಕೆ ವತಿಯಿಂದ ವಚನಗಳು ಬೇರೆ ಬೇರೆ ಭಾಷೆಗಳಲ್ಲಿ ಭಾಷಾಂತರಗೊಂಡಿವೆ. ಶೈಕ್ಷಣಿಕ ವಲಯದಲ್ಲಿ ಸಂಶೋಧನಾತ್ಮಕ ಭಾಗವಾಗಿ, ಸಾಮಾಜಿಕ, ಸಾಂಸ್ಕೃತಿಕ ನೆಲೆಯಲ್ಲಿ ವಚನಗಳನ್ನು ಗ್ರಹಿಸಲಾಗುತ್ತಿದೆ. ವಚನ ಸಾಹಿತ್ಯದ ಬಹುಶಿಸ್ತೀಯ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕುʼ ಎಂದರು.

ಇದನ್ನೂ ಓದಿ : ಬೀದರ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಬಸ್ ಸೌಲಭ್ಯ : ಜು.19 ರಂದು ಚಾಲನೆ

ಕೇರಳ ಕೇಂದ್ರೀಯ ವಿವಿಯ ಡಾ. ಶಿವಕುಮಾರ, ಡಾ. ಸನೂಪ್ ಎಂ‌. ಎಸ್, ಬಿಹಾರದ ಡಾ. ಓಂಕಾರ, ಒಡಿಸ್ಸಾ ವಿವಿಯ ಡಾ ಸುಶಾಂತ್ ನಾಯಕ, ದೆಹಲಿ ವಿವಿಯ ಡಾ. ಅಖಿಲೇಶ್ ಮಿಶ್ರಾ, ಜೋತ್ಸ್ನಾ, ಡಾ. ಸಂತೋಷ , ಡಾ. ಶಿವಂ, ಪ್ರಸಾದ್ ಸ್ವಾಮಿ, ರಾಜು ಶಿಂಧೆ, ಪವನ ಪಾಟೀಲ, ಗಂಗಾಧರ ಮೊದಲಾದವರು ಇದ್ದರು. ಡಾ. ಬಸವರಾಜ ಖಂಡಾಳೆ ಸ್ವಾಗತಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...