ಬೀದರ್ | ಸಾಹಿತ್ಯದಿಂದ ವಿವೇಕ ಮತ್ತು ಅಂತಃಕರಣ ಬೆಳೆಯುತ್ತದೆ: ಮಾರ್ಥಂಡ ಜೋಷಿ

Date:

ವ್ಯವಹಾರ, ಸಾಹಿತ್ಯ ಮತ್ತು ಮೌಲ್ಯಗಳು – ಈ ಮೂರು ಅಂಶಗಳು ಇರದಿದ್ದರೆ ಬದುಕು ಸಾಗಿಸುವುದು ಕಷ್ಟ. ವ್ಯವಹಾರಗಳು ಮನುಷ್ಯನ ಹೊರ ಜಗತ್ತು ಕಟ್ಟಿದರೆ, ಸಾಹಿತ್ಯ ಮತ್ತು ಮೌಲ್ಯಗಳು ಮನುಷ್ಯನಲ್ಲಿ ವಿವೇಕ ಹಾಗೂ ಅಂತಃಕರಣ ಬೆಳೆಸುತ್ತವೆ ಎಂದು ಬಸವಕಲ್ಯಾಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಾರ್ಥಂಡ ಜೋಷಿ ಹೇಳಿದರು.

ಬಸವಕಲ್ಯಾಣದ ಅಲ್ಲಮಪ್ರಭು ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವ್ಯವಹಾರ, ಸಾಹಿತ್ಯ ಮತ್ತು ಮೌಲ್ಯಗಳು ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. “ಸಾಹಿತ್ಯದ ಶಕ್ತಿ ಸಾಧ್ಯತೆಗಳು ಅರಿಯುವ ಗ್ರಹಿಕೆ ಬೆಳೆಸಿಕೊಳ್ಳಬೇಕು. ಸಕಾರಾತ್ಮಕ ಚಿಂತನೆಗಳಿಂದ ಬದುಕಿನಲ್ಲಿ ಎದುರಾಗುವ ಹಲವು ಸಮಸ್ಯೆ ಮತ್ತು ಸವಾಲು ಗಳಿಂದ ಪಾರಾಗಬಹುದು. ಸಾಹಿತ್ಯದ ಗಂಭೀರವಾದ ಓದು-ಅಧ್ಯಯನಗಳು ಬದುಕಿನ ವ್ಯವಹಾರ ಮತ್ತು ಮೌಲ್ಯಗಳ ಕುರಿತು ಚಿಂತನೆ ರೂಪಿಸುತ್ತವೆ” ಎಂದರು.

ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಗುರುರಾಜ ಐನಾಪೂರ ಮಾತನಾಡಿ, “ಪ್ರತಿಯೊಬ್ಬರಲ್ಲೂ ಉಳಿತಾಯ ಸಂಸ್ಕೃತಿಯ ಅರಿವು ಇರಲೇಬೇಕು. ಉಳಿಸಿದ ಹಣ ಜೀವನದಲ್ಲಿ ಮಹತ್ವದ ಕೆಲಸಕ್ಕೆ ಸದ್ವಿನಿಯೋಗವಾಗುತ್ತದೆ. ಭೌತಿಕ ಬ್ಯಾಂಕಿಂಗ್ ನಿಂದ ಡಿಜಿಟಲ್ ಬ್ಯಾಂಕಿಂಗ್ ಆಗಿ ಮಾರ್ಪಟ್ಟಿದ್ದು ಆಧುನಿಕ ತಂತ್ರಜ್ಞಾನದ ಕೊಡುಗೆಯಾಗಿದೆ . ಬ್ಯಾಂಕಿನ ರಾಷ್ಟ್ರೀಕರಣದ ಉದ್ದೇಶವೇ ಎಲ್ಲರಲ್ಲೂ ವ್ಯವಹಾರ ಮತ್ತು ಆರ್ಥಿಕ ಪ್ರಜ್ಞೆ ಬೆಳೆಸುವುದಾಗಿದೆ. ಆರ್ಥಿಕ ಅರಿವಿನಿಂದ ಬದುಕಿನ ಭದ್ರತೆ ಕಂಡುಕೊಳ್ಳಲು ಸಾಧ್ಯ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, “ಸಂಪತ್ತಿನ, ಹಣದ ಸಂಪಾದನೆಯ ದಾರಿ ಮತ್ತು ಅದರ ಸಾಮಾಜಿಕ ಹಾಗೂ ವೈಯಕ್ತಿಕ ಬಳಕೆಯ ಪ್ರಜ್ಞೆಯು ಸಾಹಿತ್ಯದಿಂದ ಸಾಧ್ಯ. ಶರಣರ ಕಾಯಕ ಸಿದ್ಧಾಂತ, ಲೋಹಿಯಾರ ಸಾಮಾಜವಾದ, ಮಾರ್ಕ್ಸ್ ಚಿಂತನೆ, ಗಾಂಧೀಜಿಯವರ ಗ್ರಾಮ ಸ್ವರಾಜ್, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂಶೋಧನೆ ಈ ಎಲ್ಲವುಗಳಲ್ಲಿ ಆರ್ಥಿಕ ಪ್ರಜ್ಞೆಯ ಒಳನೋಟಗಳು ಅಡಕವಾಗಿದೆ” ಎಂದು ತಿಳಿಸಿದರು.

“ಹಣ ಎಂದರೇನು, ಗಳಿಕೆಯ ದಾರಿ ಯಾವುದು, ಸಂಪತ್ತಿನ ಸಂಗ್ರಹಣೆ ಮತ್ತು ವಿತರಣೆ ಹೇಗೆ,ಆದಾಯದ ಮೂಲಗಳು ಎಲ್ಲಿಂದ ಇಂಥ ಹಲವು ಸಂಗತಿಗಳ ಕುರಿತು ಅನೇಕ ಪ್ರಶ್ನೆಗಳನ್ನು ಎತ್ತಿ ಹೆಚ್ಚು ತಾತ್ವಿಕವಾಗಿ ತಾರ್ಕಿಕವಾಗಿ ಚಿಂತನೆ ಮಾಡಿದ್ದು ಸಾಹಿತ್ಯ. ಬುದ್ದ, ಬಸವಾದಿ ಶರಣರಿಂದ ಕನ್ನಡದ ಹಲವು ಲೇಖಕರು ಮನುಷ್ಯನ ಅಂತರಂಗದಲ್ಲಿ ಮತ್ತು ಬಹಿರಂಗದಲ್ಲಿ ನಡೆಯುವ ಹಲವು ವ್ಯವಹಾರಗಳ ಬಗೆಗೆ ಸೈದ್ಧಾಂತಿಕವಾಗಿ, ತಾರ್ಕಿಕವಾಗಿ ಆಲೋಚಿಸಿದ್ದಾರೆ. ಅದು ಏಕ ಕಾಲದಲ್ಲಿ ಆರ್ಥಿಕ ಪ್ರಜ್ಞೆಯೂ, ಬದುಕಿನ ಪ್ರಜ್ಞೆಯೂ ಆಗಿದೆ” ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ ಅವರು, “ವಿದ್ಯಾರ್ಥಿಗಳು ಬ್ಯಾಂಕ್ ವ್ಯವಹಾರದ ತಿಳುವಳಿಕೆ ಪಡೆದಿರುವುದು ಈ ಕಾಲದ ಅನಿವಾರ್ಯವಿದೆ. ಹಣ, ವ್ಯವಹಾರ ಮತ್ತು ಮೌಲ್ಯಗಳು ಸಾಮಾಜಿಕ ಜೀವನದ ಭಾಗವಾಗಿವೆ. ಬದುಕಿನ ನೆಮ್ಮದಿಗಾಗಿ ಸಾಹಿತ್ಯ ಬೇಕು” ಎಂದರು.

ಈ ಸಂದರ್ಭದಲ್ಲಿ ಅನಿಲಕುಮಾರ, ಇರ್ಫಾನ್ ಪಟೇಲ್ ಡೆಲ್ವಿನ್ ರಾಜ್ ಮಾತನಾಡಿದರು. ಶ್ರೀನಿವಾಸ ಶಿಂದೆ ಸ್ವಾಗತಿಸಿದರು. ಆನಂದ ಚಾಕೂರೆ ನಿರೂಪಿಸಿದರು. ಈರಮ್ಮ ವಂದಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...