ಬಸವಕಲ್ಯಾಣ ನಗರದಲ್ಲಿರುವ ಬಿಕೆಡಿಬಿ ಮಿಟಿಂಗ್ ಹಾಲ್ನಲ್ಲಿ ಜನರ ಧ್ವನಿ ಸಂಘಟನೆ ಬಸವಕಲ್ಯಾಣ ತಾಲ್ಲೂಕು ಘಟಕದ ವತಿಯಿಂದ ದಾದಾ ಸಾಹೇಬ್ ಕಾನ್ಶಿರಾಮ್ ಅವರ 92ನೇ ಜಯಂತಿಯನ್ನು ಆಚರಿಸಲಾಯಿತು.
ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಕುಶ ಗೋಖಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼದೇಶದಲ್ಲಿ ಉತ್ತರ ಭಾರತದಲ್ಲಿನ ಬಹುಜನರಿಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಪರಿಚಯಿಸಿ, ಅಲ್ಲಿನ ಬಹುಜನರಲ್ಲಿ ಜಾಗೃತಿ ಮೂಡಿಸಿ ರಾಜಕೀಯ ಅಧಿಕಾರ ಪಡೆಯುವಂತೆ ಮಾಡಿದ ಮಹತ್ವದ ನಾಯಕ ಕಾನ್ಶಿರಾಮ್ ಆಗಿದ್ದಾರೆ. ಕಾನ್ಶಿರಾಮ್ ಅವರ ರಾಜಕೀಯ ಪ್ರಜ್ಞೆ, ಆಳವಾದ ಚಿಂತನೆ ಇಂದಿನ ಸಮಾಜದಲ್ಲಿ ತುಂಬಾ ಅಗತ್ಯವಾಗಿದೆʼ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಮಾಜದ ಯುವ ಮುಖಂಡ ರಾಹುಲ್ ದಲಾಲೆ ಮಾತನಾಡಿ, ಉತ್ತರ ಪ್ರದೇಶದಲ್ಲಿ ಬಹುಜನರ ಪರವಾಗಿ ಚಳುವಳಿ ನಡೆಸುವ ವೇಳೆ ಅನೇಕ ಅಡೆತಡೆಗಳನ್ನು ಎದುರಿಸಿದರೂ ಕಾನ್ಶಿರಾಮ್ ಅವರು ಹಿಂಜರಿಯದೆ ಮುನ್ನಡೆದು ಬಹುಜನರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬಲ ನೀಡಿದರು ಎಂದು ಹೇಳಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ರಾಜಕುಮಾರ ಸಿಂದೆ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮುನ್ನಡೆಸಿಕೊಂಡು ಬಂದ ಚಳುವಳಿಯ ರಥವನ್ನು ಕಾನ್ಶಿರಾಮ್ ಅವರು ಮುಂದುವರಿಸಿಕೊಂಡು ಹೋಗಿ ಉತ್ತರ ಭಾರತದಲ್ಲಿ ಸಾಮಾಜಿಕ ಹಾಗೂ ರಾಜಕೀಯವಾಗಿ ತಮ್ಮದೇ ಆದ ಛಾಪು ಮೂಡಿಸಿದರು ಎಂದು ಹೇಳಿದರು.

ಸಂಘಟನೆಯ ಹಿರಿಯ ಮುಖಂಡ ತಿಪ್ಪಣ್ಣಾ ವಾಲಿ ಅವರು ಕಾನ್ಶಿರಾಮ್ ಅವರ ಜೀವನ ಚರಿತ್ರೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ರಾಜಕುಮಾರ ಸಿಂದೆ, ಬಸವಲ್ಯಾಣ ತಾಲ್ಲೂಕು ಅಧ್ಯಕ್ಷ ಮಾರುತಿ ಡಿ.ಕಾಂಬಳೆ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸೋಮನಾಥ ಮುಡಬಿಕರ, ಖೆರ್ಡಾ(ಬಿ) ಗ್ರಾಪಂ ಮಾಜಿ ಅಧ್ಯಕ್ಷ ಉದಯಕುಮಾರ ಕಾಂಬಳೆ, ದಲಿತ ಸೇನೆ ಬಸವಕಲ್ಯಾಣ ತಾಲ್ಲೂಕಾಧ್ಯಕ್ಷ ಪ್ರಫುಲ್ ಗಾಯಕವಾಡ, ದಲಿತ ಸೇನೆ ಹುಲಸೂರ ತಾಲ್ಲೂಕಾಧ್ಯಕ್ಷ ಅಶೋಕ ಸಿಂಧೆ, ಯುವ ಹೋರಾಟಗಾರ ಮಹಾಂತೇಶ ಗೌರಕರ ಮುಖಂಡರಾದ ಸುನಿಲ್ ಶಿಂಧೆ ಯರಂಡಗಿ, ಅತುಲ್ ಗಿರಿ ಮಹಾರಾಜ, ರಾಜು ಸೂರ್ಯವಂಶಿ ಸಸ್ತಾಪೂರ, ಸಂಜು ಗಾಯಕವಾಡ, ಸಂಜು ಗೊಡಬೊಲೆ, ದಿಗಂಬರ ಜಲ್ದೆ, ಗೌತಮ ಕಾಂಬಳೆ, ಸಾಗರ ಹಳ್ಳಿಖೇಡೆ, ದೇವಾನಂದ ತೊಳೆ, ಸತೀಶ ಹಾಲಹಳ್ಳಿ, ದೀಪಕ್ ಸಿಂಧೆ, ಅನಿಲ್ ಗಾಯಕವಾಡ, ಉಮೇಶ್ ಕಾಂಬಳೆ, ಗೋಪಿನಾಥ ದಲಾಲೆ, ಆದಿತ್ಯ ಗಜರೆ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬಸವಕಲ್ಯಾಣ | ಬಸವೇಶ್ವರ ದೇವಸ್ಥಾನ ಚುನಾವಣೆ : 15 ಜನರ ಗೆಲುವು





