ಭಾರತದ ಸಂವಿಧಾನ ಅತ್ಯಂತ ಪವಿತ್ರವಾಗಿದೆ. ಪ್ರತಿಯೊಬ್ಬರು ಸಂವಿಧಾನದ ಆಶಯದಂತೆ ಮುನ್ನಡೆಯಬೇಕು ಎಂದು ಶೆಂಬೆಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ ಮುಕರಂಬೆ ಹೇಳಿದರು.
ಶೆಂಬೆಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಗಣರಾಜೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼದೇಶ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕಾದರೆ ಸಂವಿಧಾನ ಅತ್ಯಂತ ಮಹತ್ವದಾಗಿದೆʼ ಎಂದರು.
ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿ, ʼಜಗತ್ತಿನಲ್ಲಿ ಭಾರತ ದೇಶ ಅತ್ಯಂತ ವೈವಿಧ್ಯಮಯ ಕಲೆ, ಸಂಸ್ಕೃತಿ, ಪರಂಪರೆ ಹೊಂದಿದೆ. ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಭಾರತೀಯ ಸಂವಿಧಾನವು ಎಲ್ಲರಿಗೂ ಸಮಾನತೆ ಹಕ್ಕು ನೀಡಿದೆ. ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಪೂರೈಸೋಣʼ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಾಲಾಜಿ ಕುಂಬಾರ, ಘಾಳೆಪ್ಪಾ ಡೋಣೆ, ರಾಜಕುಮಾರ ಶಂಕರ, ಪ್ರಭು ವಾಸುದೇವ, ಗುಂಡಪ್ಪ ಮಡಕೆ, ರೇವಣಸಿದ್ದಪ್ಪಾ ಹಡಪದ, ವೈಜಿನಾಥ ಮಾದಪ್ಪಾ, ರವಿಕುಮಾರ ಗಣಪತಿ, ಅಮೂಲ್ಯ, ರಾಹುಲ್ ಉಪ್ಪಾರ, ಈರಮ್ಮ ವಾಸುದೇವ ಸೇರಿದಂತೆ ಇತರರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಇದನ್ನೂ ಓದಿ : ಬೀದರ್ | 77ನೇ ಗಣರಾಜ್ಯೋತ್ಸವ ದಿನ : ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಧ್ವಜಾರೋಹಣ
ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಣುಕಾ ಅಂಬಾದಾಸ, ಉಪಾಧ್ಯಕ್ಷೆ ಸುಜಾತಾ ಮಚೇಂದ್ರ, ಗ್ರಾಮದ ಮುಖಂಡ ನಾಗಶೆಟ್ಟಿ ಗಾದಗೆ, ಶಾಲಾ ಮುಖ್ಯಶಿಕ್ಷಕಿ ಜ್ಯೋತಿ ಪಾಟೀಲ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶರಣಪ್ಪಾ ಮಿಠಾರೆ, ಕರವಸೂಲಿಗಾರ ಸುನೀಲ್ ಸೇರಿದಂತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.





