ಬಸವಕಲ್ಯಾಣ | ಹೊಸ ಓದುಗರ ಅರಿವಿಗೆ ಬೇಕು ಕುವೆಂಪು ವೈಚಾರಿಕತೆ : ಭೀಮಾಶಂಕರ ಬಿರಾದರ್

Date:

ಹೊಸ ಓದುಗರಿಗೆ, ಯುವ ಪೀಳಿಗೆಗೆ ಕುವೆಂಪು ಅವರ ವೈಚಾರಿಕ ನಿಲುವು ತುಂಬಾ ಅಗತ್ಯವಿದೆ. ವಿಚಾರ ಕ್ರಾಂತಿಗೆ ಆಹ್ವಾನ, ನಿರಂಕುಶಮತಿಗಳಾಗಿ ಎಂದು ಯುವಕರಿಗೆ ಕರೆ ಕೊಟ್ಟ ಕುವೆಂಪು ಶತಮಾನದ ಬಹುದೊಡ್ಡ ವಿಚಾರವಾದಿ ಎಂದು ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಹೇಳಿದರು.

ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುವೆಂಪು ಜನ್ಮದಿನ ಮತ್ತು ಕುವೆಂಪು ಸಾಹಿತ್ಯದ ತಾತ್ವಿಕತೆ ಕುರಿತ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ʼಕುವೆಂಪು ಕನ್ನಡ ನುಡಿ ಪ್ರೇಮದ ಬಗೆಗೆ ಎಷ್ಟು ಕವಿತೆ ಬರೆದಿದ್ದಾರೆಯೋ ಅಷ್ಟೇ ಮಹತ್ವ ನೀಡಿದ್ದು ಪ್ರಕೃತಿ ಮತ್ತು ಪರಿಸರದ ವಿಸ್ಮಯಕ್ಕೆ. ಅವರ ʼಮಲೆಗಳಲ್ಲಿ ಮದುಮಗಳುʼ ಕಾದಂಬರಿಯಲ್ಲಿ ಬರುವ ಕಾಡಿನ ಕಥನ ಹಾಗೂ ವಿಶ್ಲೇಷಣೆ ಓದುಗರಿಗೆ ಕಾಡಿನ ಪಯಣದ ಅನುಭವ ನೀಡುತ್ತದೆʼ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼಕುವೆಂಪು ಅವರ ಸಾಹಿತ್ಯ ಕಳೆದ ಐವತ್ತು ವರ್ಷಗಳಲ್ಲಿ ಹಲವು ನೆಲೆಗಳಲ್ಲಿ ಮತ್ತು ಹಲವು ಆಯಾಮಗಳಲ್ಲಿ ಅನುಸಂಧಾನಕ್ಕೆ ಒಳಪಡುತ್ತಲಿವೆ. ʼಕುವೆಂಪು ಬರಹ ಆರಂಭಿಸಿದ ಕಾಲದಿಂದಲೇ ಟೀಕೆ, ಟಿಪ್ಪಣಿ, ಪ್ರತಿಕ್ರಿಯೆ ರೂಪದಲ್ಲಿ ಅವರ ಬರಹದ ಕುರಿತು ಕನ್ನಡದಲ್ಲಿ ವಿಮರ್ಶೆ ಪ್ರಾರಂಭವಾಗಿದೆʼ ಎಂದರು.

ʼಕಾಡು, ಕಾಡುಪ್ರಾಣಿಗಳು, ನಾಯಿ, ಮನುಷ್ಯ ಸಂಬಂಧಗಳ ಬಗ್ಗೆ ‘ಮಲೆಗಳಲ್ಲಿ ಮದುಮಗಳು’ ಮತ್ತು ‘ಕಾನೂರು ಹೆಗ್ಗಡತಿ’ ಕಾದಂಬರಿಗಳಲ್ಲಿ ಕಟ್ಟಿಕೊಟ್ಟ ಬಗ್ಗೆ ಅಚ್ಚರಿ ಮೂಡಿಸುತ್ತದೆ. ಈ ಕಾದಂಬರಿಗಳಲ್ಲಿ ಬರುವ ಮಲೆನಾಡಿನ ತಳಸಮುದಾಯದ ಬದುಕು, ಶೂದ್ರ ತಪಸ್ವಿ ನಾಟಕಗಳು ಸಬಾಲ್ಟರ್ನ್ ಓದಿಗೆ ಒಡ್ಡುತ್ತವೆʼ ಎಂದರು.

WhatsApp Image 2025 12 29 at 6.54.57 PM

ಕಲಬುರಗಿಯ ನಾಗಾಂಬಿಕಾ ಮಹಿಳಾ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಜಗದೀಶ್ ಬಡಿಗೇರ ಮಾತನಾಡಿ, ʼಕುವೆಂಪು ಈ ಶತಮಾನದ ಬಹುದೊಡ್ಡ ಲೇಖಕರು. ಮಕ್ಕಳ ಸಾಹಿತ್ಯ, ವಿಚಾರ, ವಿಮರ್ಶೆ, ನಾಟಕ, ಕತೆ, ಕಾದಂಬರಿ, ಮಹಾಕಾವ್ಯ ಸೇರಿ ಸಾಹಿತ್ಯದ ಹಲವು ಪ್ರಕಾರಗಳು ಬರೆದಿದ್ದಾರೆ. ರಾಷ್ಟ್ರೀಯತೆ, ನುಡಿ ಪ್ರೇಮ ಕುವೆಂಪು ಸಾಹಿತ್ಯದ ಸತ್ವವಾಗಿದೆʼ ಎಂದರು.

ಕನ್ನಡ ಅಧ್ಯಾಪಕ ಚನ್ನಬಸಪ್ಪ ಗೌರ ಮಾತನಾಡಿ, ʼಕುವೆಂಪು ಅವರು ಕನ್ನಡ ಭಾಷೆ ಮತ್ತು ಕನ್ನಡಿಗರ ಅಭಿಮಾನದ ಬಗೆಗೆ ಹೆಚ್ಚು ಕವಿತೆಗಳು ಬರೆದಿದ್ದಾರೆ. ಅವರು ಸಾರಿದ ವಿಶ್ವಮಾನವ ಸಂದೇಶ ಇಡೀ ಜಗತ್ತಿಗೆ ಮಾದರಿಯಾಗಿದೆ. ಇಡೀ ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟಕ್ಕೆ ಹೋಲಿಸಿದ್ದಾರೆ. ಭಾರತದ ಅಖಂಡತೆ, ಅನನ್ಯತೆ ಸೂಚಿಸುವ ಕಾವ್ಯ ರಚಿಸಿದ್ದಾರೆʼ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕುವೆಂಪು ವಿರಚಿತರ ‘ಬಾ ಇಲ್ಲಿ ಸಂಭವಿಸು ಸತ್ಯಾವತಾರ’ ಮತ್ತು ‘ಅನಿಕೇತನ’ ಕವಿತೆಗಳು ವಾಚಿಸಿದರು.

ಇದನ್ನೂ ಓದಿ : ಕುವೆಂಪು ಪಂಚ ಮಂತ್ರಗಳಲ್ಲಿದೆ ಪ್ರಜಾಸತ್ತೆ ಕ್ರಾಂತಿ

ಕಾರ್ಯಕ್ರಮದಲ್ಲಿ ಪ್ರವೀಣ್ ಬಿರಾದಾರ, ಸಂಗೀತಾ ಮಹಾಗಾಂವೆ, ಶೃತಿ ನೀಲಮಠ, ರೋಷನ್ ಬೀ, ಗುರುದೇವಿ ಕಿಚಡೆ, ಸನತ್ ರೆಡ್ಡಿ, ಶಿತಲ್ ರೆಡ್ಡಿ, ಪ್ರೀಯಾ ಚೌಹಾಣ್, ಕೃಷ್ಣಪ್ಪ ಸದಲಾಪುರ, ನಾಗರಾಜ ನಾಸೆ, ಕೃಷ್ಣ ಗೌಳಿ, ವೀರೇಶ ಮಠಪತಿ, ಎಂ.ಡಿ.ಜಬಿ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಗಿರೀಶ್ ಪಾಟೀಲ ಅನೇಕರಿದ್ದರು. ಐಕ್ಯುಎಸಿ ಸಂಯೋಜಕ ಪವನ ಪಾಟೀಲ ಸ್ವಾಗತಿಸಿದರು .ಕನ್ನಡ ವಿಭಾಗದ ಮುಖ್ಯಸ್ಥೆ ಜಗದೇವಿ ಜಾವಳಗೆ ನಿರೂಪಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು...

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...