ಹಿಂದೂಪರ ದೇವರ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಭಾಲ್ಕಿ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತಾಲೂಕು ಘಟಕದ ಪದಾಧಿಕಾರಿಗಳು ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಚಲಿಸುವ ರೈಲಿನಲ್ಲಿ ಅಟ್ಟರಗಾ ಗ್ರಾಮದ ನಿವಾಸಿ ಕಾಳಿದಾಸ ಅರ್ಜುನ ಸೂರ್ಯವಂಶಿ, ವರವಟ್ಟಿ ಗ್ರಾಮದ ಕಪಿಲ ಗೋಡಬಲೆ ಮತ್ತು ರಾಹುಲ ಖದಾರೆ ಎಂಬುವರ ಗುಂಪು ವಿಡಿಯೋ ಚಿತ್ರೀಕರಿಸಿ ಹಿಂದೂಪರ ಆರಾಧ್ಯ ದೈವರಾದ ಶ್ರೀರಾಮಚಂದ್ರ, ಶ್ರೀಕೃಷ್ಣ ಮತ್ತು ಮಹಾತ್ಮ ಗಾಂಧೀಜಿ ಅವರ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುವುದರ ಜತೆಗೆ ರಾಷ್ಟ್ರೀಯ ಗೌರವಕ್ಕೆ ಚ್ಯುತಿ ತಂದಿದ್ದಾರೆ’ ಎಂದು ದೂರಲಾಗಿದೆ.
ಸಮಾಜದಲ್ಲಿ ಧ್ವೇಷ ಭಾವನೆ ಬಿತ್ತುತ್ತಿರುವ ಇಂತಹ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಿ ತಾಲೂಕಿನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಹಿಂದುಪರ ಸಂಘಟನೆಗಳ ಅಧ್ಯಕ್ಷ ಶಿವು ಲೋಖಂಡೆ, ತಾಲೂಕು ವಿಶ್ವಹಿಂದು ಪರಿಷತ್ ಅಧ್ಯಕ್ಷ ಸಚಿನ ಜಾಧವ, ತಾಲೂಕು ಬಜರಂಗದಳ ಸಂಯೋಜಕ ದೇವರಾಜಸಿಂಗ ಠಾಕೂರ, ಪ್ರಮುಖರಾದ ರವಿಕಾಂತ ಕುಂಬಾರ, ಶೈಲೇಶ ಮಾಲಪಾನಿ, ಜೈರಾಜ ಕೊಳ್ಳಾ, ಪಾಂಡುರಂಗ ಕನಸೆ, ಸಂದೀಪ ತೇಲಗಾಂವಕರ, ಪ್ರೀತಮ ಜಾಧವ, ಕೃಷ್ಣಕಾಂತ, ಮಲ್ಲಿಕಾರ್ಜುನ ಸೋಲಾಪುರೆ, ಸಾಗರ ಗುಬ್ಬೆ, ಪ್ರಕಾಶ ಪಾಟೀಲ್, ಬಸವ, ನವನಾಥ ಪಾಟೀಲ್, ವಿಜಯಕುಮಾರ ಸೇರಿದಂತೆ ಹಲವರು ಇದ್ದರು.





