ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್ ) ವಿರೋಧಿಸಿ ಫೆ. 3ರಂದು ಬೀದರ್ನಲ್ಲಿ ನಡೆಯಲಿರುವ ಚಿಂತನ-ಮಂಥನ ಸಮಾವೇಶದ ಕರಪತ್ರ ಬಿಡುಗಡೆ ಮಾಡಲಾಯಿತು.
ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಎಸ್ಐಆರ್ ವಿರೋಧಿ ಜನಾಂದೋಲನ ಸಮಿತಿ ವತಿಯಿಂದ ಗುರುವಾರ ಸಮಾವೇಶದ ಕರಪತ್ರ ಬಿಡುಗಡೆ ನಡೆಯಿತು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಒಂದು ದಿನದ ಚಿಂತನ-ಮಂಥನ ಸಮಾವೇಶ ಆಯೋಜಿಸಲಾಗಿದೆ. ಎಸ್ಐಆರ್ ವಿರೋಧಿ ಚಿಂತನ-ಮಂಥನ ಸಮಾವೇಶದಲ್ಲಿ ಖ್ಯಾತ ಆರ್ಥಿಕ ತಜ್ಞ ಪರಕಾಲ ಪ್ರಭಾಕರ, ಚಿಂತಕ, ಅಂಕಣಕಾರ ಶಿವಸುಂದರ್ ಹಾಗೂ ನಾಗರಿಕ ಹಕ್ಕುಗಳ ಪ್ರತಿಪಾದಕರಾದ ತಾರಾ ರಾವ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಸಂವಿಧಾನ, ಪ್ರಜಾಪ್ರಭುತ್ವ, ಆದಿವಾಸಿ ಬುಡಕಟ್ಟು, ಅಲೆಮಾರಿ, ದಲಿತರು, ಶೂದ್ರರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ವಿರೋಧಿಯಾದ SIR (Special intensive Review) (ಮತದಾರ ವಿಶೇಷ ಪರಿಷ್ಕರಣೆ) ಕುರಿತು ಚಿಂತನ-ಮಂಥನ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಯೋಜಕರು ತಿಳಿಸಿದರು.

ಸಿದ್ದರಾಮ ಶರಣರು ಬೆಲ್ದಾಳ, ಭಂತೆ ಸಂಘ ರಖ್ಖೀತ, ಚನ್ನಬಸವಾನಂದ ಸ್ವಾಮಿಜಿ, ಸತ್ಯದೇವಿ ಮಾತಾಜಿ, ಕ್ಲೆರಿ ಡಿಸೊಜಾ, ವಿಜಯಕುಮಾರ ಡೇವಿಡ್, ಮೌಲನಾ ಮುಫ್ತಿ ಸಿರಾಜೋಧ್ದಿನ್ ನಿಜಾಮಿ, ಮೌಲಾನಾ ಮೊನಿಸ್ ಕಿರ್ಮಾನಿ ಅವರು ಜಂಟಿಯಾಗಿ ಕರಪತ್ರ ಬಿಡುಗಡೆ ಮಾಡಿದರು.
ಇದನ್ನೂ ಓದಿ : ʼಈದಿನʼ ಸಂದರ್ಶನ | ಬಹುಭಾಷಿಕ ನೆಲೆಯಲ್ಲಿ ಕನ್ನಡಕ್ಕಿರಲಿ ಮನ್ನಣೆ : ಡಾ.ಮನ್ಮಥ ಡೋಳೆ
ಎಸ್ಐಆರ್ ವಿರೋಧಿ ಜನಾಂದೋಲನ ಸಮಿತಿಯ ಪ್ರಮುಖರಾದ ಶ್ರೀಕಾಂತ ಸ್ವಾಮಿ, ಮಾರುತಿ ಬೌದ್ದೆ, ಅಬ್ದುಲ್ ಮನ್ನಾನ್ ಸೇಠ್, ಮಹೇಶ ಗೋರನಾಳಕರ್, ವಿನಯಕುಮಾರ ಮಾಳಗೆ, ಓಂಪ್ರಕಾಶ ರೊಟ್ಟೆ, ಜಗದೀಶ್ವರ ಬಿರಾದರ, ಡಾ.ಮಕ್ಸೂದ್ ಚಂದಾ, ತಲಹಾ ಹಾಸ್ಮಿ, ಮೊಹಮ್ಮದ್ ನಿಜಾಮೋದ್ದಿನ್, ವಿಜಯಕುಮಾರ ಆರ್.ಮಂಜುಳಾ ಮೆತೆಸುಲಾ ನಳಿನಕುಮಾರ ಶಾಮಸನ್, ಡಾ. ದೇವಿದಾಸ ತುಮಕುಂಟೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಯ ಮುಖಂಡರಾದ ಡಾ.ಕಾಶಿನಾಥ ಚೆಲ್ವಾ, ವಿಠಲದಾಸ ಪ್ಯಾಗೆ, ಸಂಜಯ ಜಾಗಿರದಾರ, ಮೊಹ್ಮದ್ ಆಸಿಫ್, ಉಷಾಬಾಯಿ ಬನ್ಸುಡೆ, ಮೊಹ್ಮದ್ ಆರಿಫೋದ್ದಿನ್, ಸಂದೀಪ ಮುಕಿಂದೆ, ಮುಕೇಶ ರಾಯ್, ವಿನೋದ ಗುಪ್ತಾ, ಸಂದೀಪ ಕಾಂಟೆ, ಪ್ರದೀಪ್ ನಾಟೆಕರ್, ಅಮರ ಅಲ್ಲಾಪೂರ ನಂದಮ್ಮಾ ಕುಂದೆ, ಸೋನಮ್ಮ ಕಸ್ತೂರೆ, ಕಮ್ಮಳಮ್ಮಾ ಸಂತಪೂರೆ, ಶಶಿಕಲಾ ಶರ್ಮಾ, ಸಂಗೀತಾ ಕಾಂಬಳೆ, ಮನೊರಂಜನಿ ಮೊಹನ್, ಸುಮನ್ ಶಿಂದೆ ಮತ್ತಿತರರು ಉಪಸ್ಥಿತರಿದ್ದರು





