ಬೀದರ ತಾಲೂಕಿನ ಅಷ್ಟೂರ ಗ್ರಾಮದಲ್ಲಿರುವ ಹಜರತ್ ಸುಲ್ತಾನ್ ಅಹ್ಮದ್ ಶಾ ವಲಿ ಬಹಮನಿ ದರ್ಗಾದಲ್ಲಿ 609ನೇ ಸಂದಲ್ ಶರೀಫ್ ಜಾತ್ರಾ ಮಹೋತ್ಸವವು ನಾಳೆಯಿಂದ (ಮಾ.5) ಆರಂಭವಾಗಲಿದೆ.
ಹಜರತ್ ಸುಲ್ತಾನ್ ಅಹ್ಮದ್ ಶಾ ವಲಿ ಬಹಮನಿ ಅವರ ಹುಟ್ಟು ದಿನದ ಅಂಗವಾಗಿ ಮಾರ್ಚ್ 5ರಂದು ಗುಮ್ಮಟದ ಅಡಿಯಲ್ಲಿ ಸಂದಲ್ ಶರೀಫ್ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 10ರಂದು ಸಂಜೆ 6 ಗಂಟೆಗೆ ಕಲಾಂ ಪಠಣ ಹಾಗೂ ಮೊದಲ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಈ ಮಹೋತ್ಸವ ಐದು ದಿನಗಳವರೆಗೆ ನಡೆಯಲಿದ್ದು, ಬೀದರ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಜಾತಿ, ಧರ್ಮ, ಮತ ಭೇದವಿಲ್ಲದೆ ಸರ್ವರೂ ಭಾಗವಹಿಸಲಿದ್ದಾರೆ.

ಜಾತ್ರೆ ಪ್ರಯುಕ್ತ ಹಜರತ್ ವಲಿಯವರ ಸಮಾಧಿಯನ್ನು ಗುಲಾಬಿ ನೀರಿನಿಂದ ಸ್ವಚ್ಛಗೊಳಿಸಿ, ಚಾದರ ಹಾಗೂ ಹೂವಿನ ಅಲಂಕಾರ ಮಾಡಲಾಗುತ್ತದೆ. ಕಲಾಂ ಪಠಣ ನಡೆಯಲಿದ್ದು, ದರ್ಗಾದ ಸಜ್ಜಾದ ನಶೀನ್ ಮತ್ತು ಸುಲ್ತಾನ್ ಖಲೀಲ್ ಶಾ ಬಹಮನಿ (12ನೇ ತಲೆಮಾರು) ಅವರಿಂದ ಮಿಲಾದ್ ಕಾರ್ಯಕ್ರಮ ನೆರವೇರಿಸಲಾಗುತ್ತದೆ
ಮಾರ್ಚ್ 13ರಂದು ದೀಪಾಲಂಕಾರ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಹೂವಿನ ಹಾಗೂ ಬಟ್ಟೆಯ ಚಾದರಗಳನ್ನು ಅರ್ಪಿಸಲಿದ್ದಾರೆ. ಮಾರ್ಚ್ 14ರಂದು ಸಂಜೆ ಪಟಾಕಿ ಹಾರಿಸುವುದುಮಾರ್ಚ್ 15ರಂದು ಬೆಳಿಗ್ಗೆ ಕುಸ್ತಿ ಸ್ಪರ್ಧೆಗಳು ನಡೆಯಲಿವೆ ಗುಂಬಜ್ ಪೂಜಾರಿ ಎಸುಲ್ತಾನ್ ಖಲೀಲ್ ಶಾ ಬಹಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





