ಮಹಾರಾಷ್ಟ್ರದಲ್ಲಿ ಸ್ವಾಭಿಮಾನಕ್ಕಾಗಿ ನಡೆದಿರುವ ಭೀಮಾ ಕೋರೆಗಾಂವ್ ಕದನದ 208ನೆಯ ವಿಜಯೋತ್ಸವ ಪ್ರಯುಕ್ತ ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಆಚರಿಸಲಾಯಿತು.
ಮನೆ-ಮನೆಗೆ ಅಂಬೇಡ್ಕರ್ ಅನುಷ್ಠಾನ ಸಮಿತಿ, ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ ವಿಜಯೋತ್ಸವ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಉಷಾಬಾಯಿ ಬನಸೂಡೆ ಹಾಗೂ ಜ್ಞಾನೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಶರಥ ಗುರು ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿದರು.
ಮನೆ-ಮನೆಗೆ ಅಂಬೇಡ್ಕರ್ ಅಭಿಯಾನದ ಸಂಚಾಲಕ ಮಹೇಶ್ ಗೋರನಾಳಕರ್ ಮಾತನಾಡಿ, ʼ1818ರ ಜನವರಿ 1ರಂದು ಮಹಾರಾಷ್ಟ್ರದಲ್ಲಿ ನಡೆದ ಭೀಮಾ ಕೋರೆಗಾಂವ್ ಯುದ್ಧವು ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ನಡೆದ ಸ್ವಾಭಿಮಾನದ ಹೋರಾಟವಾಗಿದೆ. ಕೇವಲ 500 ದಲಿತ ಯೋಧರು 28 ಸಾವಿರ ಮೆಲ್ಜಾತಿ ಪೇಶ್ವೆ ಪಡೆಗಳನ್ನು ಸೋಲಿಸಿದ್ದು ಐತಿಹಾಸಿಕ ಘಟನೆ. ಈ ಮಹತ್ವದ ಇತಿಹಾಸವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶ, ಜಗತ್ತಿಗೆ ಪರಿಚಯಿಸಿದ್ದಾರೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | 10 ತಿಂಗಳಲ್ಲಿ 800ಕ್ಕೂ ಅಧಿಕ ರಸ್ತೆ ಅಪಘಾತ : 263 ಮಂದಿ ಸಾವು
ಈ ಸಂದರ್ಭದಲ್ಲಿ ನಂದಮ್ಮ ಕುಂದೆ, ಸೊನ್ಮಮ್ಮ ಕಸ್ತೂರೆ, ಶಶಿಕಲಾ ಕಾಂಬಳೆ, ಇಂದುಮತಿ ಸಾಗರ, ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ ಮೆತ್ರೆ, ಸಿದ್ರಾಮಪ್ಪ, ಗಣರಾಜ್ಯೋತ್ಸವ ದಿನಾಚರಣೆ ಸಮಿತಿಯ ಗೌರವಾಧ್ಯಕ್ಷ ಅಂಬಾದಾಸ್ ಗಾಯಕವಾಡ, ಅಧ್ಯಕ್ಷ ಮುಖೇಶ್ ರಾಯ್ ಸೇರಿದಂತೆ ಚಂದ್ರಕಾಂತ ನಿರಾಟೆ, ಅರುಣ ಪಟೇಲ್, ಜಗನ್ನಾಥ ಗಾಯಕವಾಡ, ಗೋಪಾಲ ದೊಡ್ಡಿ, ಋಷಿತ್ ದಾಂಡೆಕರ್, ಜೈಭೀಮ್ ಮಿಠಾರೆ, ಸುಬ್ಬಣ್ಣ ಕರಕ್ಕನಳ್ಳಿ, ಶರಣು ಫುಲೆ, ನವನಾಥ ವಂಟೆ, ಪ್ರಶಾಂತ ಭಾವಿಕಟ್ಟಿ, ರಾಜಶೇಖರ ಹಲಮಡಗೆ, ಶಿವರಾಜ ಅಮಲಾಪೂರ, ನಾಗೇಶ ಸಾಗಾರ, ಧನರಾಜ ಕೊಳಾರ್, ಸತೀಶ್ ದೀನೆ, ಎಂ.ಡಿ.ಅನ್ವರ್ ಶಾ, ಮೊಹಮ್ಮದ್ ಖಾಲಿದ್ ಮತ್ತಿತರರಿದ್ದರು.





