ರಾಜ್ಯ ಸರ್ಕಾರ ಮಂಡಿಸಿದ 2026–27ನೇ ಸಾಲಿನ ಬಜೆಟ್ ರೈತರು ಹಾಗೂ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಸಂಯುಕ್ತ ಕಿಸಾನ ಮೋರ್ಚಾ (ಎಸ್ಕೆಎಂ) ಬೀದರ್ ಜಿಲ್ಲಾ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಿದರು.
ʼಬಜೆಟ್ನಲ್ಲಿ ರೈತರ ಸಂಪೂರ್ಣ ಸಾಲಮನ್ನಾ, ಸಹಕಾರ ಬ್ಯಾಂಕುಗಳ ಬಲಪಡಿಸುವಿಕೆ ಹಾಗೂ ರಸಗೊಬ್ಬರ ಪೂರೈಕೆ ಕುರಿತು ಯಾವುದೇ ಸ್ಪಷ್ಟ ಪ್ರಸ್ತಾಪ ಇಲ್ಲ. ಹಳ್ಳಿಖೇಡ್ (ಬಿ)ಯ ಬಿ.ಎಸ್.ಎಸ್.ಕೆ. ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಹಣ ಮೀಸಲಿಡಬೇಕು, ಕಾರಂಜಾ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ವಚನ ವಿಶ್ವವಿದ್ಯಾಲಯವನ್ನು ರಾಜ್ಯ ಸರ್ಕಾರವೇ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಬೇಡಿಕೆಗಳು ಈಡೇರದಿದ್ದರೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಸಂಯುಕ್ತ ಕಿಸಾನ ಮೋರ್ಚಾ ಸಭೆಯಲ್ಲಿ ಶಿವರಾಯ ಮುದಾಳೆ, ಮಲ್ಲಿಕಾರ್ಜುನ ಸ್ವಾಮಿ, ಮಾರುತಿ ಬೌದ್ಧೆ, ಬಾಬುರಾವ ಹೊನ್ನಾ, ಶಿವರಾಜ ಪಾಟೀಲ್ ಅತಿವಾಳ, ಬಸವರಾಜ ಅಷ್ಟೂರೆ, ಶೀಲಾ ಸಾಗರ, ರಾಜೇಂದ್ರ ಪಾಟೀಲ್ ಅಣದೂರವಾಡಿ, ಶಾಂತಮ್ಮ ಮೂಲಗೆ, ವೀರಶೆಟ್ಟಿ ವಟಂಬೆ, ಜೈಶೀಲ ಕುಮಾರ, ನಜೀರ ಅಹ್ಮದ್, ಎಂ.ಡಿ. ಖಮರ್ ಪಟೇಲ್, ನನ್ನೆಸಾಬ್, ಎಂ.ಡಿ. ಶಫಾಯತ್ ಅಲಿ, ಎಂ.ಡಿ. ಶಫಿಯೊದ್ದಿನ್, ಖಾಸಿಂ ಅಲಿ, ನಾಗಶೆಟ್ಟಿ ಲಂಜವಾಡೆ, ವೀರಾರೆಡ್ಡಿ ಪಾಟೀಲ್, ರಾಜಕುಮಾರ ಬಗದಲಕರ್, ಷಣ್ಮುಖಪ್ಪ, ಸುಭಾಷ ಪಾಟೀಲ್ ಕಾಸರತುಗಾಂವವಾಡಿ ಹಾಗೂ ಅರುಣ ಪಾಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು
ಇದನ್ನೂ ಓದಿ : ಬೀದರ್ | ಅನುದಾನಕ್ಕೆ ಆಗ್ರಹಿಸಿ ಮಾ.12ರಂದು ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಟನೆ
ಸಂಯುಕ್ತ ಕಿಸಾನ ಮೋರ್ಚಾ ಪ್ರಮುಖರಾದ ಬಾಬುರಾವ್ ಹೊನ್ನಾ, ಶಿವರಾಯ ಮುದಾಳೆ, ಮಲ್ಲಿಕಾರ್ಜುನ ಸ್ವಾಮಿ, ಮಾರುತಿ ಬೌದ್ಧೆ, ಬಾಬುರಾವ ಹೊನ್ನಾ, ಶಿವರಾಜ ಪಾಟೀಲ್ ಅತಿವಾಳ, ಬಸವರಾಜ ಅಷ್ಟೂರೆ, ಶೀಲಾ ಸಾಗರ, ರಾಜೇಂದ್ರ ಪಾಟೀಲ್ ಅಣದೂರವಾಡಿ, ಶಾಂತಮ್ಮ ಮೂಲಗೆ, ವೀರಶೆಟ್ಟಿ ವಟಂಬೆ, ಜೈಶೀಲ ಕುಮಾರ, ನಜೀರ ಅಹ್ಮದ್, ಎಂ.ಡಿ. ಖಮರ ಪಟೇಲ್, ನನ್ನೆಸಾಬ್, ಎಂ.ಡಿ. ಶಫಾಯತ್ ಅಲಿ, ಎಂ.ಡಿ.ಶಫಿಯೊದ್ದಿನ್, ಖಾಸಿಂ ಅಲಿ, ನಾಗಶೆಟ್ಟಿ ಲಂಜವಾಡೆ, ವೀರಾರೆಡ್ಡಿ ಪಾಟೀಲ್, ರಾಜಕುಮಾರ ಬಗದಲಕರ್, ಷಣ್ಮುಖಪ್ಪ, ಸುಭಾಷ ಪಾಟೀಲ್, ಅರುಣ ಪಾಟೇಲ್ ಇದ್ದರು.





