ಕಲಬುರಗಿಯ ಸಿದ್ಧಾರ್ಥ ಬುದ್ಧ ವಿಹಾರದಿಂದ 2026ರ ಫೆಬ್ರವರಿ 2ರಿಂದ ಆರಂಭಗೊಂಡಿರುವ ವಿಶ್ವ ಶಾಂತಿಗಾಗಿ ಧಮ್ಮಯಾತ್ರೆ (ವಿಶ್ವ ಶಾಂತಿಯ ನಡಿಗೆ) ಮಾರ್ಚ್ 2–3ವರೆಗೆ ನಡೆಯಲಿದೆ.
ಧಮ್ಮಯಾತ್ರೆಯ 10ನೇ ದಿನ ತೆಲಂಗಾಣದ ಮಾಡಗಿ ಗ್ರಾಮದಿಂದ ಬುಚನಳ್ಳಿ ವರೆಗೆ ಪಾದಯಾತ್ರೆ ನಡೆಯಿತು.
ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ್ ಗೋರನಾಳಕರ್ ಮಾತನಾಡಿ, ‘ಈ ಧಮ್ಮಯಾತ್ರೆ ವಿಶ್ವ ಶಾಂತಿಯ ಸಂದೇಶವನ್ನು ಸಾರುವ ಪವಿತ್ರ ಪ್ರಯತ್ನವಾಗಿದೆ. ಕರ್ನಾಟಕ ಮತ್ತು ತೆಲಂಗಾಣದ ಜನರು ಭಾಗ್ಯವಂತರು. ಪ್ರತಿಯೊಬ್ಬರೂ ಈ ಯಾತ್ರೆಯಲ್ಲಿ ಭಾಗವಹಿಸಿ ಬುದ್ಧರ ದರ್ಶನ ಪಡೆದು ಜೀವನ ಪಾವನ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಥೈಲ್ಯಾಂಡ್ ಭಿಕ್ಷು ಸಂಘದ ಪರಮ ಸೊಂಪರ್ನ್ ಚಾಯೊಟಾ, ಪರಮ ಸಾಂಗ್ಲಾಕ್ ಹಾಗೂ ಫೆಟಿಯಾನ್ ನೇತೃತ್ವ ವಹಿಸಿದ್ದರು.ಚಿತ್ರನಟ ಗಗನ್ ಮಲಿಕ್, ಬುದ್ಧವನಂ ಬುದ್ಧ ವಿಹಾರದ ವಿಶೇಷಾಧಿಕಾರಿ ಮಲ್ಲೆಪಳ್ಳಿ ಲಕ್ಷಿಮಯ್ಯ, ಲತಾ ರಾಜಾ ಫೌಂಡೇಶನ್ ಅಧ್ಯಕ್ಷ ಕೆ.ಕೆ. ರಾಜಾ ಸೇರಿದಂತೆ ಹಲವು ಗಣ್ಯರು ಪಾದಯಾತ್ರೆಯಲ್ಲಿದ್ದಾರೆ.
ಇದೇ ವೇಳೆ ಜಹಿರಾಬಾದ್ ಮುಖಂಡ ಜನರ್ಧನ್, ಪ್ರಮುಖರಾದ ಓಂಪ್ರಕಾಶ್ ರೊಟ್ಟೆ, ಜಗದೀಶ್ವರ್ ಬಿರಾದರ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಪ್ರೇಮಸಾಗರ ದಾಂಡೆಕರ್, ತೆಲಂಗಾಣ ಭೀಮ್ ಆರ್ಮಿ ನಾಯಕ ಸಿದ್ದು ರಾವಣ, ಚಿತ್ರಮ್ಮಾ ಶರಣಪ್ಪಾ ಪ್ರಿಯಾ, ಶ್ರೀಕಾಂತ ಬೋರಾಳ, ವಿನೋದ್ ಶಾಕ್ಯಪಾಲ್ ಸೇರಿದಂತೆ ಅನೇಕರು ಯಾತ್ರೆಯಲ್ಲಿ ಪಾಲ್ಗೊಂಡರು.




