ಮಿಷನ್ ಮಹಾಬೋಧಿ ಮಹಾವಿಹಾರದ ವಿಮೋಚನೆಗಾಗಿ ಭಿಕ್ಕು ಸಂಘದಿಂದ ಫೆ.12ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಅತಿದೊಡ್ಡ ರಾಷ್ಟ್ರೀಯ ಚಳುವಳಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ, ಭಿಕ್ಕು ಸಂಘದದಿಂದ ಔರಾದನಲ್ಲಿ ಜಾಗೃತಿ ಸಭೆ ಹಾಗೂ ಆಂದೋಲನ ಆಯೋಜಿಸಲಾಯಿತು
ಈ ಚಳುವಳಿ ದೇಶದ ಪ್ರತಿಯೊಬ್ಬ ನಾಗರಿಕನ ಹೋರಾಟವಾಗಿದ್ದು, ನ್ಯಾಯ, ಸಮಾನತೆ ಹಾಗೂ ಧರ್ಮಸ್ವಾತಂತ್ರ್ಯದ ಪರವಾದ ಮಹತ್ವದ ಚಳುವಳಿಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕನಸಿನ ಭಾರತದ ಸಮಾನತೆ, ಸಂವಿಧಾನ ಮೌಲ್ಯಗಳು ಮತ್ತು ಬೌದ್ಧ ಧರ್ಮದ ಆದರ್ಶಗಳನ್ನು ಆಧಾರವಾಗಿಟ್ಟುಕೊಂಡ ಶಕ್ತಿಶಾಲಿ ರಾಷ್ಟ್ರ ನಿರ್ಮಾಣ ಈ ಚಳುವಳಿಯ ಪ್ರಮುಖ ಗುರಿಯಾಗಿದೆ ಸಂಘಟಕರು ತಿಳಿಸಿದರು.
ʼಫೆ.12ರಂದು ʼದೆಹಲಿ ಚಲೋ’ ಎಂಬ ಘೋಷಣೆಯೊಂದಿಗೆ ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿಗಾಗಿ ನಡೆಯುವ ಚಳುವಳಿಗೆ ಎಲ್ಲ ವರ್ಗದ ಜನರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು. ಈ ಆಂದೋಲನವು ಭಾರತವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ, ನ್ಯಾಯಸಮ್ಮತ ಹಾಗೂ ಸಮಾನತೆಯ ರಾಷ್ಟ್ರವನ್ನಾಗಿ ರೂಪಿಸುವ ಮಹತ್ವದ ಹೆಜ್ಜೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಹುಲ್ ಖಂದಾರೆ, ಕಪಿಲ್ ಗೊಡಬೋಲೆ, ಸುರೇಶ ಜೋಜನಾ, ಪ್ರವೀಣ್ ಕಾರಂಜಿ, ಸಂತೋಷ್ ಶಿಂಧೆ, ಸಂತೋಷ್ ಸೂರ್ಯವಂಶಿ, ಉತ್ತಮ ಗಾಯಕವಾಡ, ಅನಿಲ್ ಭುಜಂಗೆ, ದಿನೇಶ್ ಶಿಂಧೆ, ಬಸವರಾಜ್ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಸವಕಲ್ಯಾಣ : ಫೆ.12ರಂದು ನವದೆಹಲಿಯಲ್ಲಿ ನಡೆಯಲಿರುವ ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನದ ಭಿತ್ತಿಪತ್ರಗಳನ್ನು ಬಸವಕಲ್ಯಾಣ ನಗರ ಅಂಬೇಡ್ಕರ್ ವೃತ್ತದಲ್ಲಿ ಬಿಡುಗಡೆ ಮಾಡಲಾಯಿತು.
ಮುಖಂಡ ಶಂಕರ ಫುಲೆ ಮಾತನಾಡಿ, ʼಈ ಆಂದೋಲನವು ದೇಶದ ಪ್ರತಿಯೊಬ್ಬ ನಾಗರಿಕನ ಚಳುವಳಿಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಮೂಲಕ ಸಮಾನತೆ, ಮತ್ತು ಬೌದ್ಧ ಧರ್ಮದ ಭಾರತವನ್ನು ಬಯಸಿದ್ದರು. ಅವರ ಕನಸಿನ ಭಾರತವನ್ನು ಅಂದರೆ ವಿಶ್ವದ ಅತ್ಯಂತ ಶಕ್ತಿಶಾಲಿ ಭಾರತವನ್ನಾಗಿ ಮಿಷನ್ ಮಹಾಬೋಧಿ ಮಹಾವಿಹಾರ್ ಮುಕ್ತಿ ಪಡೆದುಕೊಳ್ಳುವ ಈ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣʼ ಎಂದರು.
ಇದನ್ನೂ ಓದಿ : ಬೀದರ್ | ಗಂಡನ ಮನೆಯವರ ಕಿರುಕುಳ : 11 ತಿಂಗಳ ಮಗು ಬಿಟ್ಟು ಮಹಿಳೆ ಆತ್ಮಹತ್ಯೆ
ಈ ಸಂದರ್ಭದಲ್ಲಿ ಕಪಿಲ್ ಗೊಡಬೋಲೆ, ಸುರೇಶ ಮೂರೆ. ಮಹೇಶ ರಾಗಿ, ಗೌತಮ್ ಜಾಂತೆ, ಕವಿರಾಜ ದೇವಕರ, ಮನೋಜ ಖೆಲೆ, ದೇವಾನಂದ ಟೊಳ್ಳೆ, ಮಹಾದೇವ ಚಂಡಕಾಪುರ, ದತ್ತು ಸುಂಠಾಣೆ, ಸಂದಿಪ ಮುಕಿಂದೆ, ಅಶೋಕ ಸಿಂಧೆ, ದಶರಥ ಕೊಟಮಾಳೆ, ಜೈಭೀಮ ಕೊಳೆ, ಸಾಗರ ರಾಯಗೊಳ, ಆದಿತ್ಯ ಗಾಜರೆ ಮತ್ತಿತರರಿದ್ದರು.





