ವೀರ ಕನ್ನಡಿಗರ ಸೇನೆ ಬೀದರ್ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಿತು.
ಕಲಬುರಗಿಯ ರಾಜ್ಯ ಘಟಕ ಕೇಂದ್ರ ಕಚೇರಿಯಲ್ಲಿ ಸೇನೆಯ ರಾಜ್ಯಾಧ್ಯಕ್ಷ ಅಮೃತ ಪಾಟೀಲ್ ಸಿರನೂರ, ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ ನೇತ್ರತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಬೀದರ್ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ನಡೆಯಿತು.
ಬಸವರಾಜ ಜಡಗೆ (ಜಿಲ್ಲಾ ಗೌರವಾಧ್ಯಕ್ಷ), ಅಮರ ಪೂಜಾರಿ (ಜಿಲ್ಲಾಧ್ಯಕ್ಷ), ಈಶ್ವರ್ ಬಡಿಗೇರ್ (ಕಾರ್ಯಧ್ಯಕ್ಷ), ಅಂಬಾದಾಸ ಸೈನೆ (ಜಿಲ್ಲಾ ಸಂಚಾಲಕ), ಧನರಾಜ ಸಂಗೊಳಗಿಕರ್ (ಜಿಲ್ಲಾ ಉಪಾಧ್ಯಕ್ಷ), ಬಾಬುರಾವ ಕೆ ಬಿಟ್ಟೆ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಶಶಿಧರ ಜ್ಯೋತಿ (ಸಂಘಟನಾ ಕಾರ್ಯದರ್ಶಿ), ಗೋವಿಂದ ಬಡಿಗೇರ್ (ಕಾರ್ಮಿಕ ಘಟಕ ಅಧ್ಯಕ್ಷ), ಮೋಹಿನ್ ಪಟೇಲ (ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ) ಅವರನ್ನು ನೇಮಿಸಲಾಗಿದೆ.
ಬೀದರ ದಕ್ಷಿಣ ಕ್ಷೇತ್ರದ ಅಧ್ಯಕ್ಷರಾಗಿ ಗೌಸೋದ್ದಿನ್, ಭಾಲ್ಕಿ ತಾಲ್ಲೂಕು ಅಧ್ಯಕ್ಷರಾಗಿ ಚಂದ್ರಕಾಂತ್ ದೇವಕೆ, ಬೀದರ ಉತ್ತರ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಜೂಬರ್ ಪಾಶ ಹಾಗೂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಸರಸ್ಪತಿ ಹುಲುಸೂರೆ ಅವರನ್ನು ಆಯ್ಕೆ ಮಾಡಲಾಯಿತು.

ರಾಜ್ಯಾಧ್ಯಕ್ಷ ಅಮೃತ ಪಾಟೀಲ್ ಸಿರನೂರ ಮಾತನಾಡಿ, ʼಕನ್ನಡ ನಾಡು-ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸೇನೆ ಕಾರ್ಯನಿರ್ವಹಿಸಬೇಕು. ಕನ್ನಡ ವಿಚಾರದಲ್ಲಿ ಅನ್ಯಾಯ ನಡೆದಲ್ಲಿ ಗಟ್ಟಿಯಾಗಿ ದನಿಯಾಗುವ ಮೂಲಕ ಸಂಘಟನೆ ಬಲಪಡಿಸಬೇಕುʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಅರ್ಥಪೂರ್ಣ ಗಣರಾಜೋತ್ಸವ ಆಚರಣೆಗೆ ನಿರ್ಧಾರ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಈ ಸಂದರ್ಭದಲ್ಲಿ ಸೇನೆಯ ರಾಜ್ಯ ಗೌರವ ಅಧ್ಯಕ್ಷ ಜಗನಾಥ್ ಸೂರ್ಯವಂಶಿ, ರಾಜ್ಯ ಉಪಾಧ್ಯಕ್ಷ ರವಿ ವಂಟಿ, ರಾಜ್ಯ ವಕ್ತಾರ ಶಿವಾನಂದ್, ಕಚೇರಿ ವಕ್ತಾರ ಬಸವರಾಜ ಉಪಸ್ಥಿತರಿದ್ದರು.





