ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘ ಔರಾದ ತಾಲೂಕು ಘಟಕ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಔರಾದ್ ಪಟ್ಟಣದ ಕನ್ನಡ ಭವನದಲ್ಲಿ ತಾಲೂಕಿನ ಸರ್ವ ಸರ್ಕಾರಿ ನೌಕರರು ಸಭೆ ನಡೆದಿದ್ದು, ಸಂಘಕ್ಕೆ ತಾಲೂಕು ಅಧ್ಯಕ್ಷರಾಗಿ ರವಿ ಡೋಳೆ, ಪ್ರಧಾನ ಕಾರ್ಯದರ್ಶಿ ಅವರನ್ನು ಲೋಕೇಶ ಕೋಟೆ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು.
ಗೋವಿಂದ ಪಾಟೀಲ (ಗೌರವ ಸಲಹೆಗಾರ), ಸಂಜೀವರಡ್ಡಿ ಖಂದಾಡೆ (ಉಪಾಧ್ಯಕ್ಷ), ಫಯಾಜ್ ಕೊಳ್ಳುರ (ಉಪಾಧ್ಯಕ್ಷ), ಸಂಜುಕುಮಾರ ಮುಧಾಳೆ, ನಾಗೇಶ ಪಟ್ನೆ (ಸಂಘಟನಾ ಕಾರ್ಯದರ್ಶಿ), ಉಮಾಕಾಂತ ಮೂಗಟೆ, ಮಿಲಿಂದ ಸೋನಕಾಂಬಳೆ (ಸಹ ಕಾರ್ಯದರ್ಶಿ) ಹಾಗೂ ರಾಮ ಮೊರೆ (ನಿರ್ದೇಶಕರು) ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಂಡರಿ ಆಡೆ ಮಾತನಾಡಿ, ʼಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘವು 371(ಜೆ) ವಿಶೇಷ ಸ್ಥಾನಮಾನದ ಸಮಸ್ಯೆಗಳು ಎದುರಾದಾಗ ಈ ಭಾಗದ ಎಲ್ಲಾ ಸರ್ಕಾರಿ ನೌಕರರ ಸಮಸ್ಯೆಗಳನ್ನು ಸಂಘಟನಾತ್ಮಕವಾಗಿ ಪರಿಹಾರ ಕಂಡುಕೊಳ್ಳುವ ಸಂಘವಾಗಿದೆ. ಈ ಭಾಗದ ಶೈಕ್ಷಣಿಕ ಅಭಿವೃದ್ಧಿ ಸೇರಿದಂತೆ ಸಂವಿಧಾನದ ವಿಶೇಷ ಸ್ಥಾನಮಾನದ ಆಶಯ ಈಡೇರಿಸಲು ದುಡಿಯುವ ಸಂಘವಾಗಿದೆʼ ಎಂದರು.
ʼಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ನೌಕರರ ಬಡ್ತಿ, ವರ್ಗಾವಣೆ ಎಲ್ಲಾ ಆದೇಶಗಳು 371(ಜೆ) ವಿಶೇಷ ಸ್ಥಾನಮಾನ 2013 ರಿಂದಲೂ ಪ್ರತ್ಯೇಕ ಆದೇಶ ಹೊರಬೀಳುತ್ತಿದ್ದು, ಸಮಸ್ಯೆಗಳು ಎದುರಾದಾಗ ಅವುಗಳು ಪರಿಹಾರ ಕಂಡುಕೊಳ್ಳದೆ ಉಳಿಯುತ್ತಿವೆ. ಇಂತಹ ಸಂದರ್ಭದಲ್ಲಿ ಈ ಭಾಗದ ಸಂಘಟನೆಯ ಅವಶ್ಯಕತೆ ಇದೆʼ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಸಂಜುಕುಮಾರ ಮೇತ್ರೆ ನುಡಿದರು.
ಇದೇ ಸಂದರ್ಭದಲ್ಲಿ ನಡೆದಾಡುವ ದೇವರೆಂದೇ ಖ್ಯಾತಿ ಪಡೆದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರ 136ನೇ ಜಯಂತಿ ಆಚರಿಸಲಾಯಿತು.
ಇದನ್ನೂ ಓದಿ : ಬೀದರ್ | ಗಡಿ ತಾಲೂಕಿನಲ್ಲಿ ಸಂಭ್ರಮದ ʼನುಡಿ ಜಾತ್ರೆʼ ನಡೆಸಲು ತೀರ್ಮಾನ: ಹೇಗಿದೆ ತಯ್ಯಾರಿ?
ಸಭೆಯಲ್ಲಿ ಸಂಘದ ಪ್ರಧಾನ ಘಟಕ ನಿರ್ದೇಶಕ ಗೋಣಿಬಸಪ್ಪ ಜೋಗೆರ ಸೇರಿದಂತೆ ನೌಕರರಾದ ದಶರಥ ವಾಗ್ಮರೆ, ಭೂಷಣ ಪಾಟೀಲ, ಸುನಿಲ ಜಾಧವ, ಸಂತೋಷ ತಂಬಾಕೆ, ಪ್ರಕಾಶ್ ಬಿರಾದಾರ, ಶಿವಾಜಿ, ಅಮೋಲ ವಾಘಮಾರೆ, ನರಸಪ್ಪ ಕಾಂಬಳೆ ಸೇರಿದಂತೆ ಮತ್ತಿತರರಿದ್ದರು.





