ಬೀದರ್ | ಜನಪದರು ಸೃಷ್ಟಿಸಿದ ಜ್ಞಾನ ಪರಂಪರೆ ಅಗಾಧ: ಮಲ್ಲಪ್ಪ ಧಬಾಲೆ

Date:

ಜಾನಪದದ ನಿರ್ಲಕ್ಷ್ಯ ಮತ್ತು ಮರೆವು ಒಂದರ್ಥದಲ್ಲಿ ನಮ್ಮ ಜ್ಞಾನ ಪರಂಪರೆಯ ವಿಸ್ಮೃತಿಯಾಗಿದೆ ಎಂದು ಹುಲಸೂರ ವಲಯ ಕಸಾಪ ಮಾಜಿ ಅಧ್ಯಕ್ಷ ಮಲ್ಲಪ್ಪ ಧಬಾಲೆ ಹೇಳಿದರು.

ಬೀದರ್‌ ಜಿಲ್ಲೆಯ ಹುಲಸೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ ‘ಜಾನಪದ: ಚಿಂತನೆ ಮತ್ತು ಕಲಾ ಉತ್ಸವ’ ಸಮಾರಂಭದಲ್ಲಿ ಅವರು ಮಾತನಾಡಿದರು. “ಜನಪದರು ಸೃಷ್ಟಿಸಿದ ಜ್ಞಾನ ಪರಂಪರೆ ಅಗಾಧವಾಗಿದೆ. ಯುವ ಸಮುದಾಯದಿಂದ ಜಾನಪದದ ಅವಗಾಹನೆ, ನಿರ್ಲಕ್ಷ್ಯ ನೋವು ತರುವುದು” ಎಂದರು.

“ಹಳ್ಳಿಗರು ವಲಸೆ ಹೋಗುವುದರಿಂದ ಜಾನಪದ ಅವನತಿಗೆ ಸರಿಯುತ್ತಿದೆ. ಲಿಂಗ, ಜಾತಿ, ಮತದ ಎಲ್ಲೆಗಳನ್ನು ಮೀರಿದ ಜ್ಞಾನ ನಿಸರ್ಗ ಸಹಜವಾಗಿದೆ. ಅದರ ಸಂಪಾದನೆಗಾಗಿ ಶ್ರಮ, ಅಧ್ಯಯನ ಅಗತ್ಯ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಯನಿರತ ಪತ್ರಕರ್ತರ ಸಂಘದ ಹುಲಸೂರ ತಾಲೂಕು ಅಧ್ಯಕ್ಷ ರಾಜಕುಮಾರ ಹೊನ್ನಾಡೆ ಮಾತನಾಡಿ, “ಜಾನಪದ ನಶಿಸಿ ಹೋಗುತ್ತಿರುವ ಸಮಯದಲ್ಲಿ ಹಳ್ಳಿಗಳಲ್ಲಿ ಜನಪದ ಕಲೆಗಳನ್ನು ರಕ್ಷಿಸುವ ಕೆಲಸ ನಡೆಯಬೇಕು” ಎಂದರು.

“ಜಾನಪದ ನಿಂತ ನೀರಲ್ಲ. ಜಾನಪದ ಕಲಾವಿದರಿಗೆ ಸರ್ಕಾರದಿಂದ ಮಾಶಾಸನ ಸವಲತ್ತುಗಳನ್ನು ನೀಡಬೇಕು. ಇಂಗ್ಲಿಷ್ ಮಾಧ್ಯಮದ ಶಿಕ್ಷಣ, ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಮೈಗೂಡಿಸಿಕೊಂಡಿರುವ ಇಂದಿನ ಪೀಳಿಗೆಯ ಮನೋಭಾವದ ಎದುರು ಜಾನಪದವನ್ನು ಉಳಿಸುವ ಸವಾಲು ಈ ಕಾಲದ್ದಾಗಿದೆ” ಎಂದರು.

ಕಜಾಪ ತಾಲೂಕು ಅಧ್ಯಕ್ಷ ಶಿವರಾಜ್ ಖಪಲೆ ಮಾತನಾಡಿ, “ಅತಿಯಾದ ಟಿವಿ, ಮೋಬೈಲ್ ಬಳಕೆಯಿಂದ ಜನಪದ ಸಂಸ್ಕೃತಿ ಅಪಾಯದಲ್ಲಿದೆ. ಅಳಿವಿನಂಚಿನಲ್ಲಿರುವ ಜಾನಪದ ಹಳ್ಳಿಯ ಭಜನೆ, ಹಂತಿ ಹಾಡು, ಜೋಗುಳ ಪದಗಳಲ್ಲಿ ಉಳಿದಿದೆ ಶಾಲಾ ಕಾಲೇಜುಗಳಲ್ಲಿ ಜಾನಪದ ಪರಂಪರೆ ಬೆಳೆಸುವ ಅಗತ್ಯವಿದೆ” ಎಂದರು.

ಮುಖ್ಯೋಪಾಧ್ಯಾಯ ದೇವಾನಂದ್ ಕುರದೆ ಮಾತನಾಡಿ, “ಪ್ರಾಚೀನ ಸಂಸ್ಕೃತಿ, ಮಾನವೀಯ ಪರಂಪರೆ ಪುನಃ ನೆನಪಿಸಲು, ಮತ್ತೆ ಕಟ್ಟಲು ಜಾನಪದ ಅವಶ್ಯಕ. ಜನಪದ ಲಕಲೆ, ಸಂಗೀತ, ಸಾಹಿತ್ಯ ಮಾನಸಿಕ ನೆಮ್ಮದಿಗೆ ಹಾದಿಯಾಗಿವೆ. ಜಾನಪದದಿಂದ ಸಾಮಾಜಿಕ ಸಂವರ್ಧನೆ ಸಾಧ್ಯ” ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದತ್ತು ರಾಘೋ, ಧೂಳಪ್ಪ ಭರಮಶೆಟ್ಟೆ, ಶಿವಾಜಿರಾವ ಸೂರ್ಯವಂಶಿ, ಲಹು ಬಿರಾದಾರ, ವಿಶ್ವಜೀತ ಕುರದೆ, ಪ್ರಭುರಾವ ಬಿರಾದಾರ, ಸತೀಶ್ ಸ್ವಾಮಿ, ವೆಂಕಟರಾವ್ ಬಿರಾದಾರ, ಭಗವಾನ್ ಬಿರಾದಾರ, ರೇವಣ್ಣ ದರ್ಗೆ,ಜಗನ್ನಾಥ ಬಿರಾದಾರ, ದತ್ತು ಮೇತ್ರೆ, ಲಕ್ಷ್ಮಣ ಬಿರಾದಾರ, ನಾಗೇಶ್ ನಿಲಂಗೆ, ಡಾ. ಭೀಮಾಶಂಕರ ಬಿರಾದಾರ ಸೇರಿದಂತೆ ಅನೇಕರಿದ್ದರು.

ರಾಮಶಟ್ಟಿ ತಾಂಬೋಳೆ, ಗುರುನಾಥ ತಾಂಬೋಳೆ, ಝಟಿಂಗರಾವ ಬಿರಾದಾರ, ಜಗನ್ನಾಥ ತಾಂಬೋಳೆ ಮುಂತಾದವರು ವಚನ, ತತ್ವಪದ, ಜನಪದ ಹಾಗೂ ಭಜನೆ ಹಾಡುಗಳನ್ನು ಹಾಡಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು...

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...