ಬೀದರ್ | ಸೌಹಾರ್ದ ನಡಿಗೆ – ಶರಣ ಸೂಫಿ ಸಂತ ಸಮಾವೇಶ

Date:

ನಾವೆಲ್ಲರೂ ಸೌಹಾರ್ದತೆ ವಾತಾವರಣ ನಿರ್ಮಿಸಿ, ಜಗತ್ತಿಗೆ ಸಾಮರಸ್ಯ ಸಂದೇಶವನ್ನು ಸಾರೋಣ. ಆ ಮೂಲಕ ವಿಶ್ವ ದಾರ್ಶನಿಕರ ತತ್ವಗಳನ್ನು ಎತ್ತಿ ಹಿಡಿದು, ಸೋದರತ್ವ ಭಾವನೆಯಿಂದ ಬಾಳೋಣ ಎಂದು ಪ್ರಗತಿಪರ ಚಿಂತಕಿ ಪ್ರೊ. ಮೀನಾಕ್ಷಿ ಬಾಳಿ ಹೇಳಿದರು.

ಚಿಟಗುಪ್ಪದಲ್ಲಿ ಕರ್ನಾಟಕ ಸೌಹಾರ್ದ ವೇದಿಕೆ ಆಯೋಜಿಸಿದ್ದ ಸೌಹಾರ್ದ ನಡಿಗೆ ಹಾಗೂ ಶರಣ ಸೂಫಿ ಸಂತ ಸಮಾವೇಶದಲ್ಲಿ ಅವರು ಮಾತನಾಡಿದರು. “ಬಹುತ್ವ ಭಾರತದ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಯಬೇಕಾದರೆ ಬೇಧಭಾವ ಮರೆತು ಸಾಮರಸ್ಯದ ಬದುಕು ನಡೆಸುವುದು ಮುಖ್ಯ” ಎಂದರು.

ಸಾನಿಧ್ಯ ವಹಿಸಿದ್ದ ಕೋರಣೇಶ್ವರ ಸ್ವಾಮಿಜಿ ಮಾತನಾಡಿ, “ಈ ನಾಡಿನಲ್ಲಿ ಸೌಹಾರ್ದತೆಯ ವಿಚಾರಗಳು ಯಾವಾಗಲೂ ಇವೆ, ಜಾತಿ ಧರ್ಮ ಭಾಷೆಗಳನ್ನು ಮೀರಿ ನಾವೆಲ್ಲರೂ ಬಾಳಬೇಕು. ಶಿಕ್ಷಣ ಮೂಲಕ ಸಂಸ್ಕಾರಯುಕ್ತ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು. ಸಂವಿಧಾನಬದ್ಧ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನ್ಯಾಯ ನೀತಿ ಧರ್ಮದ ವಿಚಾರಗಳಿಗೆ ಗೌರವ ನೀಡಿದರೆ ಸೌಹಾರ್ದ ಭಾರತ ನಿರ್ಮಾಣವಾಗಲು ಸಾಧ್ಯ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಡಾ. ಎಂ.ಎ ಖಾದ್ರಿ ಹಾಗೂ ಪಾಲ್ ಮಧುಕರ್ ರವರು ಮಾತನಾಡಿ, “ಎಲ್ಲ ಧರ್ಮದ ಬಂಧುಗಳು ಸಹೋದರತೆಯಿಂದ ಬಾಳಿದರೆ ಸಮೃದ್ಧ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ” ಎಂದರು.

ರಾಷ್ಟ್ರೀಯ ಬೌದ್ಧ ಮಾಹಾಸಭಾದ ಮಿಲಿಂದ್ ಗುರೂಜಿ ಮಾತನಾಡಿ, “ದೇಶಾದ್ಯಂತ ಸೌಹಾರ್ದತೆಯ ವಾತಾವರಣ ಇದೆ. ಈ ವಾತಾವರಣ ಯಾರು ಕಲ್ಮಶ ಮಾಡಬಾರದು. ಎಲ್ಲರಲ್ಲೂ ದಯೆ ಕರುಣೆ ಪ್ರೀತಿ ಸ್ನೇಹ ಮೂಡಿದರೆ ಭಾವೈಕ್ಯತೆ ಉಳಿಯುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೋರಾಟಗಾರ್ತಿ ಕೆ.ನೀಲಾ, ಸಂಗಮೇಶ ಎನ್ ಜವಾದಿ, ಪ್ರಭು ಖಾನಾಪುರ, ಇಸಾ ಬೇಗಂ,
ವಿಜಯಲಕ್ಷ್ಮಿ ಬಸವಕಲ್ಯಾಣ, ಸಿದ್ರಾಮಪ್ಪ ಗೊಂಧಳಿ, ಮೀಸ್ ಮೇರಿ ಮಾರ್ಗರೇಟ್, ಅಂಬಾಬಾಯಿ ಮಾಳಗೆ, ರೇಷ್ಮಾ ಹಂಸರಾಜ್, ಸೋನಮ್ಮ, ಜ್ಞಾನದೇವಿ,ಸಂತೋಷ,ಮಾಸುಲ್ದಾರ್, ಮಾಹಾರುದ್ರಪ್ಪ ಅಣದೂರ, ಬಸವರಾಜ ಮಂಕಲ್, ಚಂದ್ರಶೇಖರ ತಂಗಾ, ಭೀಮಶೆಟ್ಟಿ ವಡ್ಡನಕೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು...

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...