ಬೀದರ್‌ | ವಚನ ಸಾಹಿತ್ಯ ಸಮಾನತೆ, ಜನಪರ

Date:

ವಚನ ಸಾಹಿತ್ಯ ಜನಪರ ಸಾಹಿತ್ಯವಾಗಿದೆ ಎಂದು ತೆಲಂಗಾಣದ ವಾರಂಗಲ್‍ನ ಪಾಲ್ಕುರಿಕೆ ಸೋಮನಾಥ ಕಲಾ ಪೀಠದ ಅಧ್ಯಕ್ಷ ಡಾ.ರಾಪುಲು ಸತ್ಯನಾರಾಯಣ ಹೇಳಿದರು.

ಬಸವ ಸೇವಾ ಪ್ರತಿಷ್ಠಾನ ವತಿಯಿಂದ ಬೀದರ್‌ ಹೊರವಲಯದ ಬಸವಗಿರಿಯಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ 24ನೇ ವಚನ ವಿಜಯೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ʼಪಾಲ್ಕುರಿಕೆ ಸೋಮನಾಥ ಅವರು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಅನುಯಾಯಿ ಆಗಿದ್ದು, ವಚನ ಸಾಹಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆʼ ಎಂದರು.

ʼಪಾಲ್ಕುರಿಕೆ ಸೋಮನಾಥ ಶರಣ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬಸವಣ್ಣ ಹಾಗೂ ಶಿವಭಕ್ತರ ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರು ರಚಿಸಿದ ಬಸವ ಪುರಾಣ ಕೃತಿ ಶರಣ ಸಾಹಿತ್ಯದ ಮಹತ್ವದ ಕೃತಿ ಎನಿಸಿದೆ. ಪಾಲ್ಕುರಿಕೆ ಅವರ ವಂಶಸ್ಥರು ಮಹಾರಾಷ್ಟ್ರದಲ್ಲಿ ಈಗಲೂ ಬಸವ ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆʼ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಂಬಿಕೆ ಅಕ್ಕ ಮಾತನಾಡಿ, ʼಶರಣರು ಕೊಟ್ಟು ಹೋದ ವಚನ ಸಾಹಿತ್ಯದ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುವುದು ವಚನ ವಿಜಯೋತ್ಸವ ಆಚರಣೆಯ ಉದ್ದೇಶವಾಗಿದೆ. ಶರಣರು ತ್ಯಾಗ, ಬಲಿದಾನ ಮಾಡಿ ವಚನ ಸಾಹಿತ್ಯ ರಕ್ಷಿಸಿದ್ದಾರೆ. ವಚನ ಸಾಹಿತ್ಯ ಸದ್ಗುಣ ಹಾಗೂ ಮಾನವೀಯ ಮೌಲ್ಯಗಳ ಕಣಜವಾಗಿದೆ. ಕಾಯಕ, ದಾಸೋಹ, ಸಮಾನತೆಯ ಸಿದ್ಧಾಂತ ವಚನಗಳಲ್ಲಿ ಕಾಣಬಹುದು. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಎಲ್ಲ ಜಾತಿ, ಜನಾಂಗದವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತುʼ ಎಂದು ಸ್ಮರಿಸಿದರು.‌

WhatsApp Image 2026 01 30 at 6.58.58 PM

ಸಾಹಿತಿ ಡಾ.ಬಸವರಾಜ ಸಬರದ ಮಾತನಾಡಿ, ʼಸಮಾನತೆ ಲಿಂಗಾಯತ ಧರ್ಮದ ಜೀವಾಳ ಹಾಗೂ ಸೌಹಾರ್ದ ಗುರಿಯಾಗಿದೆ. ಧರ್ಮ ಮತ್ತು ಕ್ರಾಂತಿ ಎರಡೂ ಬೇರೆ ಬೇರೆ. ಎರಡನ್ನೂ ಕೂಡಿಸಿದವರು ಬಸವಣ್ಣ. ಅವರು ಧರ್ಮವೇ ಕ್ರಾಂತಿ, ಕ್ರಾಂತಿಯೇ ಧರ್ಮ ಎಂದಿದ್ದರು. ಫ್ರಾನ್ಸ್ ಹಾಗೂ ಜಾಗತಿಕ ಕ್ರಾಂತಿಗಳಿಗಿಂತ ಬಸವಣ್ಣನವರು ಮಾಡಿದ ಕ್ರಾಂತಿ ವಿಶಿಷ್ಟವಾಗಿದೆ. ಶರಣರು ಮರಣಕ್ಕೆ ಹೆದರುತ್ತಿರಲಿಲ್ಲ. ಅವರಿಗೆ ಮರಣವೇ ಮಹಾನವಮಿಯಾಗಿತ್ತುʼ ಎಂದು ಹೇಳಿದರು.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼವಚನ ಸಾಹಿತ್ಯ ನಿತ್ಯ ಸತ್ಯವಾಗಿದೆ. ಅದು ಎಂದೆಂದೂ ಶಾಶ್ವತವಾಗಿರುತ್ತದೆ. ಎಲ್ಲರೂ ವಚನದ ದಾರಿಗೆ ಬರುತ್ತಾರೆ. ವಚನ ವಿಜಯೋತ್ಸವ ಎಲ್ಲರದ್ದಾಗಿದೆ. ವಚನ ಸಾಹಿತ್ಯವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿದರೆ ಕೋಟಿ-ಕೋಟಿ ಜನರನ್ನು ತಲುಪುತ್ತದೆʼ ಎಂದು ಹೇಳಿದರು.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ನಾವು ಯಾವುದೇ ಧರ್ಮದ ವಿರೋಧಿಗಳಲ್ಲ. ಬಸವಣ್ಣನವರ ತತ್ವಗಳ ಪ್ರಸಾರಕರು ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ತಿಳಿಸಿದರು.

ವಚನ ವಿಜಯೋತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಚಂದ್ರಕಾಂತ ಮಿರ್ಚೆ ಆಶಯ ನುಡಿ ಆಡಿದರು. ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಆಂಧ್ರಪ್ರದೇಶದ ಬಪತಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕುರುಪತಿ ನೀಲಕಂಠೇಶ್ವರ ಪ್ರಸಾದ, ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬು ವಾಲಿ, ಜಗನ್ನಾಥ ಹೆಬ್ಬಾಳೆ, ಕುಶಾಲ ಪಾಟೀಲ ಖಾಜಾಪುರ, ಶರಣಪ್ಪ ಮಿಠಾರೆ, ಸೋಮಶೇಖರ ಪಾಟೀಲ ಗಾದಗಿ, ಬಿ.ಜಿ.ಶೆಟಕಾರ್, ಸಿದ್ದಯ್ಯ ಕಾವಡಿಮಠ, ಶ್ರೀಕಾಂತ ಸ್ವಾಮಿ, ಪ್ರಕಾಶ ಟೊಣ್ಣೆ, ರಮೇಶ ಪಾಟೀಲ ಸೋಲಪುರ, ಭಾಲ್ಕಿ ತಹಸೀಲ್ದಾರ್ ಮಹೇಶ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ರಾಜು ಚಿಂತಾಮಣಿ, ಡಾ.ವಿಜಯಶ್ರೀ ಸಬರದ, ಸುಭಾಷ ಹಮೀಲಪುರೆ, ರಾಜಕುಮಾರ ನಾಗೇಶ್ವರ, ಸೋಮನಾಥ ಅಮಲಾಪುರೆ, ಸುಭಾಷ ಮಡಿವಾಳ, ವಿಠ್ಠಲ ಕುಂಬಾರ, ಜಗನ್ನಾಥ ಜಮಾದಾರ್, ರಮೇಶ ಕಟ್ಟಿಮನಿ ಮತ್ತಿತರರು ಇದ್ದರು.

WhatsApp Image 2026 01 30 at 6.59.19 PM

ವನಿತಾ ಗುಂಡಪ್ಪ ಬಳತೆ, ಡಾ. ದೇವಕಿ ಡಾ. ಅಶೋಕ ನಾಗೂರೆ ಗುರುಪೂಜೆ ನೇರವೇರಿಸಿದರು. ನೀಲಮ್ಮನ ಬಳಗದ ಶರಣೆಯರಿಂದ ವಚನ ವಿಜಯೋತ್ಸವದ ಸಮೂಹ ಗಾಯನ ನಡೆಯಿತು. ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರದ ಕಲಾವಿದರು ಆಕರ್ಷಕ ವಚನ ನೃತ್ಯ ನಡೆಸಿಕೊಟ್ಟರು. ರಾಜಮತಿ ಗಂಗು ನಿರೂಪಿಸಿದರು. ಕರಣ ಪಾಟೀಲ ವಂದಿಸಿದರು.

ಸಾಮೂಹಿಕ ಇಷ್ಟಲಿಂಗ ಯೋಗ :

ಬಸವಗಿರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಯೋಗದೊಂದಿಗೆ ಮೂರು ದಿನಗಳ ವಚನ ವಿಜಯೋತ್ಸವ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿತು.

ಶರಣ, ಶರಣೆಯರು ಬಿಳಿ ಉಡುಪು, ಭುಜದ ಮೇಲೆ ಕಾವಿ ಬಣ್ಣದ ಸ್ಕಾರ್ಪ್, ಹಣೆ ಮೇಲೆ ವಿಭೂತಿ ಧರಿಸಿ, ಕೈಯಲ್ಲಿ ಇಷ್ಟಲಿಂಗ ಹಿಡಿದು, ಶ್ರದ್ಧೆ, ಭಕ್ತಿಯಿಂದ ಇಷ್ಟಲಿಂಗ ಯೋಗದಲ್ಲಿ ಪಾಲ್ಗೊಂಡರು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಂಬಿಕೆ ಅಕ್ಕ ಇಷ್ಟಲಿಂಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಬಸವ, ʼಓಂ ನಮಃ ಶಿವಾಯʼ ಮಂತ್ರ ಝೇಂಕರಿಸಿದವು.

WhatsApp Image 2026 01 30 at 6.58.45 PM 1

ಸಿಂಧನೂರಿನ ವಾಣಿಜ್ಯ ತೆರಿಗೆ ನಿವೃತ್ತ ಅಧಿಕಾರಿ ಪಿ.ರುದ್ರಪ್ಪ ಅನುಭಾವ ನೀಡಿದರು. ಬಸವ ಮಹಾಮನೆಯ ಸಿದ್ಧರಾಮೇಶ್ವರ ಶರಣರು ಬೆಲ್ದಾಳ ಸಾನಿಧ್ಯ ವಹಿಸಿದರು.

ಪ್ರಮುಖರಾದ ಶಂಕರೆಪ್ಪ ಹೊನ್ನಾ, ಗಣಪತಿ ಕಾಸ್ತೆ, ಸಂಗಪ್ಪ ಉಳ್ಳಾಗಡ್ಡೆ ಅವರಿಗೆ ಶರಣ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದಿತ್ಯ ಪಂಚಾಳ ವಚನ ಸಂಗೀತ ಹಾಗೂ ಲಿಂಗಾಕ್ಷಿ ಖೇಣಿ ವಚನ ನೃತ್ಯ ನಡೆಸಿಕೊಟ್ಟರು. ಮಾತೆ ಸತ್ಯಕ್ಕ, ಮಾತೆ ಲಲಿತಾ, ಮಾತೆ ಚಂದ್ರಕಲಾ ನೇತೃತ್ವ ವಹಿಸಿದ್ದರು. ಸರಸ್ವತಿ ಘೂಳೆ, ಜಗನ್ನಾಥ ರಾಚೋಟಿ, ಕೆ. ನರಹರಿ, ಶಿವಕುಮಾರ ಸಾಲಿ, ಮೀನಾಕ್ಷಿ ಪಾಟೀಲ, ಅನುಪಮಾ ಏರೋಳಕರ್, ಸಂಗೀತಾ ಪಾಟೀಲ, ಅಂಬಾರಾಯ ಬಿರಾದಾರ, ಪ್ರತಿಭಾ ಗಾದಗಿ, ಸಂಗಮೇಶ ತೊಗರಖೇಡೆ, ಇಂದುಮತಿ ಪನ್ನಾಳೆ, ಭಕ್ತರಾಜ ಚಿತ್ತಾಪುರೆ ಮತ್ತಿತರರು ಇದ್ದರು. ಭಾರತಿ ಪಾಟೀಲ ಸ್ವಾಗತಿಸಿದರು. ಆರತಿ ಲಕ್ಕಶೆಟ್ಟಿ ನಿರೂಪಿಸಿದರು.

ಇದನ್ನೂ ಓದಿ : ಬೀದರ್ | 2 ಎಕರೆ ನಿವೇಶನ ಮಂಜೂರು : ಅಲೆಮಾರಿಗಳ ಹೋರಾಟಕ್ಕೆ ಜಯ; ಧರಣಿ ಅಂತ್ಯ

ಇದಕ್ಕೂ ಮುನ್ನ ಪರುಷಕಟ್ಟೆಯ ಮುಂಭಾಗದಲ್ಲಿ ಡಾ.ವಿಜಯಶ್ರೀ ಬಶೆಟ್ಟಿ ಹಾಗೂ ಡಾ.ಸುಭಾಷ್ ಬಶೆಟ್ಟಿ ದಂಪತಿ ಷಟ್‍ಸ್ಥಲ ಧ್ವಜಾರೋಹಣ ನೆರವೇರಿಸಿದರು. ಧ್ವಜ ಗೀತೆಯ ನಂತರ ವಚನ ಪ್ರಾರ್ಥನೆ ನಡೆಯಿತು. ʼವಚನ ವಿಜಯೋತ್ಸವಕ್ಕೆ ಜಯವಾಗಲಿ, ಕಲ್ಯಾಣ ಕ್ರಾಂತಿಗೆ ಜಯವಾಗಲಿ, ಶರಣರ ಸಂಕಲ್ಪಕ್ಕೆ ಜಯವಾಗಲಿʼ ಎಂಬ ಘೋಷಣೆಗಳು ಮೊಳಗಿದವು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು...

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...