ಬೀದರ್ ನಗರದ ಬಸವ ನಗರ ಕಾಲೋನಿಯಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗವನ್ನು ಧೈರ್ಯದಿಂದ ಎದುರಿಸಿ ಜಯಿಸಿದ ಮಹಿಳಾ ಸಾಧಕಿ ಲಕ್ಷ್ಮೀಬಾಯಿ ಬಸವರಾಜ ಪಾಟೀಲ ಜೋಳದಾಬಕಾ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಲಕ್ಷ್ಮೀಬಾಯಿ ಪಾಟೀಲ ಜೋಳದಾಬಕಾ ಮಾತನಾಡಿ, ʼದೃಢ ಆತ್ಮವಿಶ್ವಾಸ ಮತ್ತು ಧೈರ್ಯವಿದ್ದರೆ ಮಾರಣಾಂತಿಕ ಕ್ಯಾನ್ಸರ್ ರೋಗ ಗೆಲ್ಲಬಹುದು. ಆತ್ಮವಿಶ್ವಾಸ ಕಳೆದುಕೊಳ್ಳದೆ ಚಿಕಿತ್ಸೆ ಪಡೆದ ಪರಿಣಾಮ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ತಮ್ಮ ಧೈರ್ಯವನ್ನು ತಜ್ಞ ವೈದ್ಯರು ಕೂಡ ಪ್ರಶಂಸಿದ್ದಾರೆʼ ಎಂದು ಅವರು ಹೇಳಿದರು.
ಒಂದು ವರ್ಷದ ಹಿಂದೆ ಪರೀಕ್ಷೆಯಲ್ಲಿ ಕ್ಯಾನ್ಸರ್ ಪತ್ತೆಯಾದ ಬಳಿಕ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಾವು–ಬದುಕಿನ ಮಧ್ಯೆ ಹೋರಾಟ ನಡೆಸಿದ ಅನುಭವವನ್ನು ಅವರು ಹಂಚಿಕೊಂಡರು.
ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ಕಾರ್ಯಕಾರಿಣಿ ಸಮಿತಿ ಸದಸ್ಯ ವೀರಭದ್ರಪ್ಪ ಉಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿ, ʼಸಮಾಜದ ವಿಶಿಷ್ಟ ಸಾಧಕರ ಪರಿಚಯʼ ಎಂಬ ಕಾರ್ಯಕ್ರಮದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಅವರ ಅನುಭವಗಳನ್ನು ಜನತೆಗೆ ಪರಿಚಯಿಸುವ ಯೋಜನೆಯನ್ನು ಕೈಗೊಂಡಿದ್ದೇವೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಸರ್ಕಾರಿ ಶಾಲೆಗಳಲ್ಲಿ ಮೌಲ್ಯಯುತ ಶಿಕ್ಷಣ
ಹಿರಿಯರಾದ ಸರಸ್ವತಿಬಾಯಿ ಉಪ್ಪಿನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ಮಂದಾಕಿನಿ ಸ್ವಾಗತಿಸಿದರು. ಕೊನೆಯಲ್ಲಿ ನಿವೃತ್ತ ಶಿಕ್ಷಕಿ ಜೈಶ್ರೀ ಮೊಳಕೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಗದೀಶ, ಕವಿತಾ, ಸಂಗಮೇಶ್ವರ, ಶಕುಂತಲಾ, ಅಶ್ವಿನಿ, ಸಿದ್ರಾಮ, ಸರೋಜಿನಿ, ಪ್ರಿಯಾ, ಮಾಧವ, ಸುಭಾಷ್, ಸುಹಾಸಿನಿ, ಜಗದೇವಿ, ಬಂಗಾರಮ್ಮ, ಚಿತ್ರಕಲಾ, ಉಮಾದೇವಿ, ಸುಕನ್ಯಾ, ಅರ್ಚನಾ, ಕೀರ್ತಿ, ಜ್ಯೋತಿ, ಶಕುಂತಲಾ, ಪೂಜಾ, ಗೌರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು





