ಬೀದರ್ ಜಿಲ್ಲೆಯ ಹಲವಡೆ ಮಂಗಳವಾರ ಸಂಜೆ ಗುಡುಗು, ಮಿಂಚು, ಆಲಿಕಲ್ಲು ಸಹಿತ ಬಿರುಸಿನ ಮಳೆ ಸುರಿಯಿತು.
ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ಇತ್ತು. ಸಂಜೆ 7 ಗಂಟೆ ನಂತರ ಎಲ್ಲೆಡೆ ಮಳೆ ತಣ್ಣನೆಯ ಗಾಳಿ ಬೀಸಿತು. ಬಳಿಕ ಗುಡುಗು, ಮಿಂಚಿನೊಂದಿಗೆ ಆಲಿಕಲ್ಲು ಸಹಿತ ಮಳೆ ಆರ್ಭಟ ಜೋರಾಗಿತ್ತು.
ಬೀದರ್ ನಗರದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಬೆಂಬಿಡದೆ ಮಳೆಯಾಗಿದೆ, ಇನ್ನು ಚಿಟಗುಪ್ಪ, ಹುಮನಾಬಾದ್, ಭಾಲ್ಕಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗಿರುವ ಬಗ್ಗೆ ತಿಳಿದುಬಂದಿದೆ.
ಭಾನುವಾರ ಸಂಜೆ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿತು, ಸೋಮವಾರ ಕೆಲವೆಡೆ ಅಲ್ಪ ಪ್ರಮಾಣದಲ್ಲಿ ಮಳೆ ಸುರಿಯಿತು. ಮೂರನೇ ದಿನ ಮಂಗಳವಾರ ಆಲಿಕಲ್ಲು ಸಹಿತ ಮಳೆ ಜೋರಾಗಿದೆ. ಯುಗಾದಿ ಬಳಿಕ ಆರಂಭವಾಗುತ್ತಿದ್ದ ಮಳೆ ಈ ಬಾರಿ ಹಬ್ಬಕ್ಕೂ ಮುನ್ನವೇ ಬರುತ್ತಿದೆ. ಅದು ಕೂಡ ಆಲಿಕಲ್ಲು ಸುರಿಸಿ ಅಬ್ಬರಿಸುತ್ತುದೆ.
ಮುಂಗಾರು ಬೆಳೆಗಳಾದ ಬಿಳಿ ಜೋಳ, ಕುಸುಬೆ, ಕಡಲೆ ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳಿವೆ. ಕಟಾವಿನ ಹಂತದಲ್ಲಿರುವ ಬೆಳೆ, ಕಲ್ಲಂಗಡಿ, ಮಾವಿನ ಮರ ಇತರೆ ಬೆಳೆಗಳು ಆಲಿಕಲ್ಲು ಮಳೆಯಿಂದ ಹಾನಿಯುಂಟಾಗುವ ಸಾಧ್ಯತೆ ಇದೆ. ಇದರಿಂದ ರೈತಾಪಿ ವರ್ಗ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಭಾಲ್ಕಿಯಲ್ಲಿ ಸುರಿದ ಆಲಿಕಲ್ಲು ಸಹಿತ ಮಳೆ
ಇದನ್ನೂ ಓದಿ : ಬೀದರ್ | ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ : 94 ಪರೀಕ್ಷಾ ಕೇಂದ್ರ; ವೆಬ್ಕಾಸ್ಟಿಂಗ್ ಕಣ್ಗಾವಲು





