ಬೀದರ್‌ | ಕವಿ ಎಂ.ಜಿ ಗಂಗನಪಳ್ಳಿ ಅವರ ಬದುಕು ಸಮಾಜಕ್ಕೆ ಆದರ್ಶ: ಪ್ರೊ. ಬಸವರಾಜ ಬಲ್ಲೂರು

Date:

ದಿ.ಎಂ.ಜಿ.ಗಂಗನಪಳ್ಳಿ ಅವರು ತಮ್ಮ ಇಡೀ ಜೀವನವನ್ನು ಸಾಹಿತ್ಯಕ್ಕಾಗಿ ಮೀಸಲಿಟ್ಟಿದ್ದರು. ಅವರದ್ದು ಅಪರೂಪದ ಜೀವನ, ಸಾರ್ಥಕ ಬದುಕು, ಅವರ ಜೀವನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ, ವಿದೇಶದ ನೆಲದಲ್ಲಿ ಮೂಡಿದ ಸಾನೆಟ್ ಕಾವ್ಯ ಪ್ರಕಾರವನ್ನು ಬೀದರ ಜಿಲ್ಲೆಗೆ ಪರಿಚಯಿಸಿದವರಲ್ಲಿ ಗಂಗನಪಳ್ಳಿ ಅಗ್ರಗಣ್ಯರು ಎಂದು ಉಪನ್ಯಾಸಕ, ಸಾಹಿತಿ ಡಾ.ಬಸವರಾಜ ಬಲ್ಲೂರು ಅಭಿಪ್ರಾಯಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಜಂಟಿಯಾಗಿ ಬೀದರ ನಗರದ ಕೃಷ್ಣಾ ರಿಜೇನ್ಸಿಯಲ್ಲಿ ಆಯೋಜಿಸಿದ್ದ ಜಿಲ್ಲೆಯ ಹಿರಿಯ ಸಾಹಿತಿ, ಸಾನೆಟ್ ಕವಿ ಎಂದೇ ಪ್ರಖ್ಯಾತರಾಗಿದ್ದ ಎಂ.ಜಿ. ಗಂಗನಪಳ್ಳಿಯವರ ʼಭಾವ ನಮನʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ಎಂ.ಜಿ.ಗಂಗನಪಳ್ಳಿ ಅವರು ಇದುವರೆಗೂ 14 ಕವನಸಂಕಲನ, 3 ಗದ್ಯ, 12 ಜೀವನಚರಿತ್ರೆ, 2 ಅನುವಾದ, 2 ಕ್ಷೇತ್ರದರ್ಶನ, 3 ಖಂಡ ಕಾವ್ಯಗಳು, 5 ವಿಮರ್ಶೆ, 3 ಚುಟುಕು, 2 ವಚನ ಸಾಹಿತ್ಯ, 3 ಸಂಪಾದನೆ, 3 ಸುಪ್ರಭಾತ ಸೇರಿದಂತೆ ಒಟ್ಟು 53 ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ” ಎಂದು ಹೇಳಿದರು.

“ಗಂಗನಪಳ್ಳಿಯವರು ಅನೇಕ ಉತ್ಕೃಷ್ಟ ಕೃತಿಗಳನ್ನು ರಚಿಸಿದ್ದಾರೆ. ಅವರ ಕಾವ್ಯ ವ್ಯಾಕರಣ ಬದ್ಧವೂ ಮತ್ತು ಗಟ್ಟಿ ಬರಹವೂ ಆಗಿದ್ದು, ಅವರ ಮೇಲೆ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಶಾರದಾ ಮಾತೆಯ ಗಾಢ ಪ್ರಭಾವ ಇತ್ತು. ಹೀಗಾಗಿ ಅವರು ಆದರ್ಶ ಜೀವನ ನಡೆಸಿದ್ದರು. ಜಿಲ್ಲೆಯ ಅನೇಕ ಕವಿ, ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದ ಅವರು ಬದುಕಿರುವಾಗಲೇ ಅವರ ಕುರಿತು ಶಿಕ್ಷಕ ಸಂಜೀವಕುಮಾರ ಅತಿವಾಳೆಯವರು ʼಭಾವಗಂಗೆʼ ಎನ್ನುವ ಅಭಿನಂದನಾ ಗ್ರಂಥ ಅರ್ಪಿಸಿರುವುದು ಸ್ತುತ್ಯಾರ್ಹ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, “ಗಂಗನಪಳ್ಳಿ ಅವರದ್ದು ವಿಶೇಷ ವ್ಯಕ್ತಿತ್ವ, ಅವರು ಸಾಹಿತ್ಯದ ಭಂಡಾರವಾಗಿದ್ದರು, ಸಾಹಿತ್ಯದ ಸಾರ್ಥಕ ಬದುಕನ್ನು ಬಾಳಿದ ಅವರ ಆಚಾರ ವಿಚಾರಗಳನ್ನು ಜನಮನಕ್ಕೆ ಮುಟ್ಟಿಸಬೇಕಾಗಿದೆ” ಎಂದು ನುಡಿದರು.

ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಮಾತನಾಡಿ, “ಸಾಹಿತಿ ಗಂಗನಪಳ್ಳಿಯವರು ವಿಶಾಲ ಹೃದಯಿಗಳಾಗಿದ್ದರು, ಜ್ಞಾನವಂತರಾಗಿದ್ದರು, ಅವರ ಸಾಹಿತ್ಯಕ್ಕೆ ಪ್ರೇರಣೆ ಅವರ ತಂದೆ, ಕುವೆಂಪು ಅವರ ಭೇಟಿ ಮತ್ತು ನಿಸರ್ಗದ ರಮ್ಯತೆ ಆಗಿತ್ತು. ಅವರ ಮಾತುಗಳು ತಾರ್ಕಿಕವಾಗಿರುತ್ತಿದ್ದವು, ಆಡಂಬರದ ಜೀವನ ಶೈಲಿಗೆ ಮಾರುಹೋಗದೇ ಸರಳತೆ ಮತ್ತು ಮಿತ ಆಹಾರ ಶೈಲಿಯನ್ನು ರೂಢಿಸಿಕೊಂಡಿದ್ದರು” ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, “ನಮ್ಮಂತಹ ಅನೇಕ ಯುವಕರಿಗೆ ಗಂಗನಪಳ್ಳಿಯವರ ಬದುಕು ಮಾರ್ಗದರ್ಶಕವಾಗಿದೆ, ಜಿಲ್ಲೆಯ ಹಿರಿಯ ಸಾಹಿತಿಯಾಗಿದ್ದ ಗಂಗನಪಳ್ಳಿಯವರನ್ನು ಕಳೆದುಕೊಂಡು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಭಿಮಾನಿಗಳಿಗೆ, ಕುಟುಂಬದವರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು” ಹೇಳಿದರು.

ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜೀವಕುಮಾರ ಅತಿವಾಳೆ ಪ್ರಾಸ್ತಾವಿಕ ಮಾತನಾಡಿ, “ಮುಂದಿನ ದಿನಗಳಲ್ಲಿ ಗಂಗನಪಳ್ಳಿಯವರ ಸಾಹಿತ್ಯದ ಕುರಿತಾದ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗುವುದು” ಎಂದರು.

ಮುಖಂಡ ಪಂಡಿತರಾವ ಚಿದ್ರಿ, ಪತ್ರಕರ್ತ ಮಾಳಪ್ಪ ಅಡಸಾರೆ, ಹಿರಿಯ ಸಾಹಿತಿ ಶ್ರೀಮತಿ ಭಾರತಿ ವಸ್ತ್ರದ ಹಾಗೂ ಎಂ.ಜಿ.ಗಂಗನಪಳ್ಳಿ ಅವರ ಸಹೋದರ ರಾಮರಾವ ಗಂಗನಪಳ್ಳಿ ಮಾತನಾಡಿದರು.

ಸಾಹಿತಿ ರೇಣುಕಾ ಎನ್.ಬಿ. ಅವರು ಗಂಗನಪಳ್ಳಿಯವರು ರಚಿಸಿರುವ ಕವಿತೆಗೆ ಸ್ವರ ಸಂಯೋಜನೆ ಮಾಡಿ ಹಾಡಿದರು. ಇದೇ ಸಂದರ್ಭದಲ್ಲಿ ಡಾ.ಶ್ರೇಯಾ ಮಹೀಂದ್ರಕರ್ ಅವರು ಗಂಗನಪಳ್ಳಿಯವರನ್ನು ಕುರಿತು ರಚಿಸಿರುವ ‘ಬೀದರಿನ ಕೊಡುಗೆ’ ಹಾಗೂ ಮಾಣಿಕ ನೇಳಗೆ ರಚಿಸಿರುವ ‘ಮಾಗಿದ ಕಾಯಿ’ ಎನ್ನುವ ಕವನಗಳನ್ನು ವಾಚಿಸಿದರು.  ನಿಧನರಾದ ಎಂ.ಜಿ.ಗಂಗನಪಳ್ಳಿ ಮತ್ತು ಚಿತ್ರ ನಟಿ ಲೀಲಾವತಿ ಅವರಿಗೆ ಮೌನಾಚರಣೆಯ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಮಹುವಾ ಉಚ್ಚಾಟನೆ; ಉಳಿಗಾಲವಿಲ್ಲವೇ ಅದಾನಿ ಎದುರು ಹಾಕಿಕೊಂಡರೆ?

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಗೌ.ಕೋಶಾಧ್ಯಕ್ಷ ಶಿವಶಂಕರ ಟೋಕರೆ ನಿರೂಪಿಸಿದರು. ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್.ಮನೋಹರ ವಂದಿಸಿದರು. ಎಂ.ಜಿ.ಗಂಗನಪಳ್ಳಿಯವರ ಸಾಹಿತ್ಯಾಭಿಮಾನಿಗಳು, ಕುಟುಂಬ ಸದಸ್ಯರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...