ಬೀದರ ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಬಸ್ ಸೌಲಭ್ಯ ಒದಗಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿರ್ಧರಿಸಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಬೆಂಗಳೂರು ವತಿಯಿಂದ ಬೀದರ ಜಿಲ್ಲೆಗೆ ಬಸ್ ಒದಗಿಸಿರುವುದರಿಂದ ಜುಲೈ19 ರಂದು ಬೆಳಿಗ್ಗೆ 11 ಗಂಟೆಗೆ ಬೀದರ ಕೋಟೆಯಿಂದ ಬಸ್ ಚಾಲನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಹಾಯಕ ನಿರ್ದೇಶಕ ಹಾಗೂ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ ಪ್ರವಾಸಿ ತಾಣಗಳ ವಿವರ :
ಬೀದರ ನಗರದಲ್ಲಿರುವ ಬೀದರ ಕೋಟೆ, ಮುಹಮ್ಮದ್ ಗವಾನ್ ಮದರಸಾ, ಚೌಖಂಡಿ ಮತ್ತು ಅಷ್ಟೂರ್ ಗುಂಬಜ್, ಬರೀದ್ ಷಾಹಿ ಉದ್ಯಾನವನ, ಶ್ರೀ ಕ್ಷೇತ್ರ ನರಸಿಂಹ ಝರಣಾ ದೇವಸ್ಥಾನ, ಗುರುದ್ವಾರ, ಪಾಪನಾಶ ಮಹಾದೇವ ದೇವಸ್ಥಾನ, ಬಸವಕಲ್ಯಾಣ ಕೋಟೆ, ಭಾಲ್ಕಿ ಕೋಟೆ, ಬಸವಕಲ್ಯಾಣದ ಅನುಭವ ಮಂಟಪ, ಹುಮನಾಬಾದ್ ವೀರಭದ್ರೇಶ್ವರ ದೇವಸ್ಥಾನ, ಭಾಲ್ಕಿ ತಾಲ್ಲೂಕಿನ ಚಳಕಾಪೂರ ಗ್ರಾಮದ ಸಿದ್ದಾರೂಢ ಮಠ, ಹನುಮಾನ ದೇವಸ್ಥಾನ ಇತ್ಯಾದಿ ಪ್ರವಾಸಿ ತಾಣಗಳು ಒಳಗೊಂಡಿವೆ.
ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕೆಂದು ಅವರು ಗುರುವಾರ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಗುಣಮಟ್ಟದ ಶಿಕ್ಷಣ ಕಲ್ಪಿಸಿದರೆ ಮಾತ್ರ ಸರಕಾರಿ ಶಾಲೆ ಉಳಿಯುತ್ತವೆ : ಸಂಸದ ಸಾಗರ ಖಂಡ್ರೆ





