ಚಿಂತಾಮಣಿ:ಆಂಧ್ರದಿಂದ ಪ್ರತಿನಿತ್ಯ ಬೆಂಗಳೂರಿಗೆ ಬರುವ ಸಿಮೆಂಟ್ ಲಾರಿ ಡ್ರೈವರ್ ಗಳು ನಡು ರಸ್ತೆಯಲ್ಲಿ ಕದ್ದು ಅರ್ಧ ರೇಟ್ ಗೆ ಮಾರಾಟ ಮಾಡುವ ದೃಶ್ಯಗಳು ಕಡಪ ಹೈವೇ ರಸ್ತೆಯ ಚಿನ್ನಸಂದ್ರ, ಹೊಸಕೋಟೆ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿನಿತ್ಯ ದೃಶ್ಯಗಳು ಕಂಡು ಬರುತ್ತಿವೆ.
ಆಂಧ್ರಪ್ರದೇಶದಿಂದ ಪ್ರತಿ ನಿತ್ಯ ಸುಮಾರು ಸಂಖ್ಯೆಯಲ್ಲಿ ಸಿಮೆಂಟ್ ತುಂಬಿದ ಲಾರಿಗಳು ಬೆಂಗಳೂರಿಗೆ ಹೋಗುತ್ತದೆ ಲಾರಿ ಡ್ರೈವರ್ ಗಳು ಹೈವೇ ರಸ್ತೆಯಲ್ಲಿ ಬರುವ ಕೆಲ ಅಂಗಡಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಸಿಮೆಂಟ್ ಕದ್ದು ಅರ್ಧ ರೇಟ್ ಗೆ ಮಾರಾಟ ಮಾಡಿ ಸಿಮೆಂಟ್ ಕಂಪನಿಗೆ ಟೋಪಿ ಹಾಕಿ ವಿವಿಧ ಕಂಪನಿಗಳ ಸಿಮೆಂಟ್ ಚೀಲಕ್ಕೆ ತುಂಬಿ ಮಾರಾಟ ಮಾಡುತ್ತಿದ್ದಾರೆ ಎಂದು ಸ್ಥಳಿಯರು ತಮ್ಮ ಹೆಸರನ್ನು ಹೇಳದೆ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿದ್ದೀರಾ..? ರಸ್ತೆ ಕಾಮಗಾರಿ ವಿಳಂಬ ನಮಗೆಲ್ಲ ಧೂಳಿನ ಭಾಗ್ಯ ಗ್ರಾಮಸ್ಥರ ಆರೋಪ
ಈ ಕೂಡಲೇ ಇದಕ್ಕೆ ಸಂಬಂಧಪಟ್ಟವರು ಸಿಮೆಂಟ್ ಕದ್ದು ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಸಿಮೆಂಟ್ ಕದಿಯುತ್ತಿರುವ ದಂಧೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.





