ಚಳ್ಳಕೆರೆ | ಕುವೆಂಪು ನಾಡು ನುಡಿಯ ಪ್ರತಿಪಾದಕರಾಗಿ ನಮಗೆ ಬಹಳ ಮುಖ್ಯರಾಗಿದ್ದಾರೆ: ತಾರಿಣಿ ಶುಭದಾಯಿನಿ

Date:

ಬಸವಣ್ಣ ಮತ್ತು ಕುವೆಂಪು ಅವರನ್ನು ಕುರಿತ ಓದು ನಮಗೆ ಹೊಸ ದರ್ಶನವನ್ನು ನೀಡುತ್ತದೆ. ಕುವೆಂಪು ಗೊಬ್ಬರ, ಕೋಳಿ, ಹೀರೆಹೂವಿನ ಬಗ್ಗೆ ಬರೆಯುತ್ತ ಶೂದ್ರ ಅಸ್ಮಿತೆಯನ್ನು ತೋರಿದ ಲೇಖಕ. ಕುವೆಂಪು ನಾಡು ನುಡಿಯ ಪ್ರತಿಪಾದಕರಾಗಿ ನಮಗೆ ಬಹಳ ಮುಖ್ಯರಾಗಿದ್ದಾರೆ ಎಂದು ವಿಮರ್ಶಕಿ ತಾರಿಣಿ ಶುಭದಾಯಿನಿ ಹೇಳಿದರು.

ಚಳ್ಳಕೆರೆಯ ಹುಣ್ಣಿಮೆ ಪ್ರಕಾಶನ ಸಂಸ್ಥೆಯಿಂದ ನಡೆದ ಕುವೆಂಪು ನೆನಪಿನ ಕಾರ್ಯಕ್ರಮದಲ್ಲಿ ಮಾತನಾಡಿ, “ಕುವೆಂಪು ಅವರು ಪ್ರಖರ ರಾಜಕೀಯ ಪ್ರಜ್ಞೆಯ ಕವಿ. ಕುವೆಂಪು ಅವರು ತಮ್ಮ ಸೃಜನಶೀಲ ಬರಹಗಳು ವಸಾಹತುಶಾಹಿ ವಿರೋಧಿನೆಲೆ, ರಾಜಶಾಹಿ ವಿರೋಧಿನೆಲೆ ಮತ್ತು ಪುರೋಹಿತಶಾಹಿಯ ವಿರೋಧ ಪ್ರಬಲವಾಗಿವೆ. ಕುವೆಂಪು ಐವತ್ತು ವರ್ಷಗಳ ಕಾಲ ನಿರಂತರವಾಗಿ ರಾಜಕೀಯ ಪ್ರಜ್ಞೆಯ ಕವಿತೆಗಳನ್ನು ಬರೆಯುತ್ತ ಅಂತಿಮವಾಗಿ ವಿಶ್ವಮಾನವ ಪ್ರಜ್ಞೆಗೆ ಹೊರಳುತ್ತಾರೆ. ವಸಾಹತುಶಾಹಿಯ ಆಧುನಿಕ ಶಿಕ್ಷಣ ಕ್ರಮವನ್ನು ಒಪ್ಪಿಕೊಳ್ಳುತ್ತ ಅದೇ ವೇಳೆ ಭಾರತದ ವಿಮೋಚನೆಯ ಪರವಾಗಿ ಮಾತನಾಡುತ್ತಾರೆ. ಇದು ಅವರ ವೈಶಿಷ್ಟ್ಯತೆ” ಎಂದು ಹೇಳಿದರು.

“ಕುವೆಂಪು ವಿವೇಕಾನಂದರ ಹಿಂದೂ ರಾಷ್ಟ್ರೀಯತೆ ಮತ್ತು ವೈಚಾರಿಕ ಮನೋಭಾವನೆಗಳನ್ನು ಬಹಳಷ್ಟು ಸ್ವೀಕರಿಸಿದ್ದಾರೆ. ಈ ಸಿದ್ಧಾಂತ ಪ್ರಸ್ತುತಕ್ಕೆ ಹಿಂದೂ ಧರ್ಮದ ಸಿದ್ಧಾಂತಕ್ಕೆ ವಿರುದ್ಧವಾದದ್ದು. ಇದರಿಂದ ಮುಂದುವರೆದ ಕುವೆಂಪು ವೈಜ್ಞಾನಿಕ ಮನೋಭಾವವನ್ನೇ ಹೊಸ ಯುಗದ ಆಯುಧವನ್ನಾಗಿ ಸ್ವೀಕರಿಸಿದರು. ಕುವೆಂಪು ಅವರಿಗೆ ಗಾಂಧಿಯ ಬಗ್ಗೆ ಒಲವಿದೆ. ಆದರೆ ಗಾಂಧಿ ಮಾರ್ಗದ ಬಗ್ಗೆ ಆಸಕ್ತಿಯಿಲ್ಲ. ಕುವೆಂಪು ಅವರಿಗೆ ಗಾಂಧಿಗಿಂತಲೂ ವಿನೋಭಾ ಭಾವೆ ಮುಖ್ಯರಾಗುತ್ತಾರೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಾಧ್ಯಮದ ಕಾರ್ಪೊರೇಟ್ ಮಾಲೀಕತ್ವ ಕೇವಲ ಭಾರತೀಯ ವಿದ್ಯಮಾನವಲ್ಲ: ಶಾಸಕ ಆಸಿಫ್ ಸೇಠ್

“ಕುವೆಂಪು ಅವರ ಕವಿತೆಗಳಲ್ಲಿ ಭೈರವ, ಕಾಳಿ, ವಿಪ್ಪವ, ಪ್ರಳಯ ಮುಂತಾದ ರೂಪಕಗಳು ಹೇರಳವಾಗಿ ಕಾಣಸಿಗುತ್ತವೆ. ಈಗಿರುವ ವ್ಯವಸ್ಥೆ ನಾಶವಾದಾರೆ ಒಂದು ಹೊಸ ಸಮಬಾಳಿನ ವ್ಯವಸ್ಥೆ ಉದಯಿಸುತ್ತದೆ ಎನ್ನುವುದು ಅವರ ನಂಬಿಕೆ. ಆದ್ದರಿಂದಲೇ ಈ ರೂಪಕಗಳನ್ನು ಬಳಸುತ್ತಾರೆ. ಕುವೆಂಪು ಕನ್ನಡ ನೆಲದ್ದೇ ಆದ ಪಂಚಶೀಲ ತತ್ವಗಳನ್ನು ನೀಡಿದ್ದಾರೆ. ಇದು ಕುವೆಂಪು ಅವರ ಅನನ್ಯತೆ” ಎಂದರು.

ಕುವೆಂಪು ಅವರ ಕವಿತೆಗಳನ್ನು ಸಂಪತ್‌ಕುಮಾರ್, ಚೈತ್ರ, ಮೋದೂರು ತೇಜ, ರಂಗಸ್ವಾಮಿ ವಾಚಿಸಿದರು. ಉಪನ್ಯಾಸದ ನಂತರ ನಡೆದ ಸಂವಾದ ಕಾರ್ಯಕ್ರಮವನ್ನು ಜಿ ವಿ ಆನಂದಮೂರ್ತಿ, ಶ್ರೀನಿವಾಸರಾಜು ದೊಡ್ಡೇರಿ, ಎನ್ ಆರ್ ತಿಪ್ಪೇಸ್ವಾಮಿ, ನರಸಿಂಹಪ್ಪ ನಡೆಸಿಕೊಟ್ಟರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...