ಚಾಮರಾಜನಗರ | ಬಹುಜನರ ಅಸ್ಮಿತೆಯ ಸಂಭ್ರಮವೇ ಮಹಿಷಾ ಬೌದ್ದ ದಸರಾ: ಡಾ. ಕೃಷ್ಣಮೂರ್ತಿ ಚಮರಂ

Date:

ಬಹುಜನರ ಅಸ್ಮಿತೆಯ ಸಂಭ್ರಮವೇ ಮಹಿಷಾ ಬೌದ್ಧ ದಸರಾ ಎಂದು ಸಾಮಾಜಿಕ ಚಿಂತಕ ಡಾ. ಕೃಷ್ಣಮೂರ್ತಿ ಚಮರಂ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಕಳೆದ 50 ವರ್ಷಗಳ ಹಿಂದೆ ವಿಚಾರವಾದಿ ಮಂಟೆಲಿಂಗಯ್ಯ ಅವರು ಮಹಿಷಾ ದಸರಾವನ್ನು ಪ್ರಾರಂಭಿಸಿದರು. ಅವಾಗಿನಿಂದಲೂ ಆ ಪರಂಪರೆಯನ್ನು ಮುಂದುವರೆಸಲಾಗುತ್ತಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಹಿಷ ದಸರಾವನ್ನು ವಿವಾದಗೊಳಿಸಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮಹಿಷ ಮತ್ತು ಬುದ್ಧನ ವಿಚಾರಗಳು ಕಟ್ಟುಕಥೆ ಎಂದು ಮನುವಾದಿಗಳು ಬಿಂಬಿಸಲು ಹೊರಟ್ಟಿದ್ದಾರೆ. ಆದರೆ, ಮಹಿಷನನ್ನು ರಾಕ್ಷಸ, ದುಷ್ಟನೆಂದು ಮನುವಾದಿಗಳು ಕಟ್ಟುಕಥೆ ಎಣೆದಿದ್ದಾರೆ. ಮಹಿಷನ ಮಹಿಷ ಮಂಡಲವು ಮೈಸೂರು ಆಗಿದೆ. ಮಹಿಷಾ ಮಂಡಲ, ಉದಕ ಮಂಡಲ ಮತ್ತು ಮೌರ್ಯ ಸಾಮ್ರಾಜ್ಯಕ್ಕೆ ಒಂದಕ್ಕೊಂದು ಪೂರಕವಾಗಿವೆ” ಎಂದು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಮಹಿಷ ಆದಿದೊರೆ, ಕ್ರಿಸ್ತ ಪೂರ್ವದಲ್ಲೇ ಮಹಿಷ ಮಂಡಲವನ್ನು ಆಳ್ವಿಕೆ ನಡೆಸಿದ್ದರು. ಅವರ ಆಳ್ವಿಕೆಯ ಕುರುಹಾಗಿ ಮೈಸೂರು ಆಗಿದೆ. ಹಾಗಾಗಿ, ಮಹಿಷನ ವಿಚಾರಗಳು ಕಟ್ಟುಕಥೆಯಲ್ಲ ಇತಿಹಾಸ” ಎಂದು ಹೇಳಿದರು.

“ಅಂಬೇಡ್ಕರ್ ಹೇಳಿದಂತೆ ಭಾರತದ ಇತಿಹಾಸವು ಬ್ರಾಹ್ಮಣ್ಯಮತ್ತು ಬೌದತ್ವದ ನಡುವಿನ ಸಂಘರ್ಷವಾಗಿದೆ. ವೈದಿಕರು ಉದ್ದೇಶ ಪೂರ್ವಕವಾಗಿ ಇಲ್ಲಿನ ಮೂಲನಿವಾಸಿಗಳಿಗೆ ಕೋರೆ ಹಲ್ಲುಗಳನ್ನು ಹಾಕಿ ರಾಕ್ಷಸರನ್ನಾಗಿ ಮಾಡಿದ್ದಾರೆ. ದುಷ್ಟರನ್ನಾಗಿ ಚಿತ್ರಿಸಿದ್ದಾರೆ. ಮೂಲನಿವಾಸಿಗಳು ನಿಜವಾದ ಪ್ರಕೃತಿ ಆರಾಧಕರು, ಮೂಢನಂಬಿಕೆಗಳನ್ನು ನಂಬದವರು. ಆರ್ಯರ ಹೋಮ, ಹವನ, ಮೂಢನಂಬಿಕೆಗಳನ್ನು ವಿರೋಧಿಸಿದ್ದಕ್ಕಾಗಿ ಮೂಲನಿವಾಸಿಗಳನ್ನು ಖಳನಾಯಕರನ್ನಾಗಿ ಮಾಡಿದ್ದಾರೆ. ಹಾಗಾಗಿ, ಸಮಸಮಾಜದ ನಿರ್ಮಾಣಕ್ಕಾಗಿ ಮೂಲನಿವಾಸಿಗಳ ಅಸ್ಮಿತೆಯನ್ನ ಹುಡುಕುವ ಪ್ರಯತ್ನ ನಡೆದಿದೆ” ಎಂದು ತಿಳಿಸಿದರು.

ಸುಭಾಷ್ ಮಾಡ್ರಹಳ್ಳಿ ಮಾಡನಾಡಿ, “ಮಹಿಷ ದಸರಾ ಒಂದು ಸಾಂಸ್ಕೃತಿಕ ಮಹೋತ್ಸವ. ನಮ್ಮ ಪೂರ್ವಜರ ಬೌಧ್ದ ಪರಂಪರೆಯನ್ನು ನಾಡಿನಲ್ಲಿ ಬಿತ್ತುವಂತಹ ಮಹತ್ಕಾರ್ಯದ ಭಾಗವಾಗಿದೆ. ಸಾಮ್ರಾಟ್ ಅಶೋಕನ ಕಾಲದ ವಿಜಯ ದಶಮಿ ಆಚರಣೆಯೇ ದಸರಾ. ಅಶೋಕ ಶಸ್ತ್ರ ತ್ಯಾಗಮಾಡಿದ ಸತ್ ಸಂಪ್ರದಾಯವೇ ವಿಜಯ ದಶಮಿ. ಹಾಗಾಗಿ ದೇಶದಲ್ಲಿ ದಸರಾ ಆಚರಣೆಗೆ ಮುನ್ನುಡಿ ಬರೆದವರು ನಮ್ಮ ಪೂರ್ವಜರು. ಶಾಂತಿ, ಕರುಣೆ ಮತ್ತು ಸಹನೆ ನಮ್ಮ ಧ್ಯೇಯವಾಗಿದೆ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ಲಕ್ಕೂರು ,ಅಪುರಾ , ಶಿವಲಿಂಗು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...