ಚಿಂತಾಮಣಿ : ತಾಲ್ಲೂಕಿನ ಕಸಬಾ ಹೋಬಳಿಯ ಚಿನ್ನಸಂದ್ರ ಗ್ರಾಮದಲ್ಲಿರುವ ಹಜರತ್ ಸೈಯದ್ ಮಹಬುೂಬ್ ಶಾ ವಲಿ ದರ್ಗಾ ಉರುಸ್ ಕಾರ್ಯಕ್ರಮ ಕಳೆದ ಮೂರು ದಿನಗಳಿಂದ ಸಡಗರ ಸಂಭ್ರಮದಿಂದ ನಡೆದು ಕೊನೆಯ ದಿನದಂದು ಹಜರತ್ ಸೈಯದ್ ಮಹಬುೂಬ್ ಶಾ ವಲಿ ಟ್ರಸ್ಟ್ ವತಿಯಿಂದ 6 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ಮಾಡಿಸಲಾಯಿತು.
ಪ್ರತಿ ಜೋಡಿಗೆ ತಲಾ 25,000 ರೂ ನಗದು ಸೇರಿದಂತೆ ಮನೆಯ ಸಾಮಗ್ರಿಗಳನ್ನು ಸಹ ನೀಡಲಾಯಿತು.
ಈ ವೇಳೆ ಮಾತನಾಡಿದ ಸೈಯದ್ ಖೀಝರ್ ರವರು ಮಾತನಾಡಿ ದುಂದು ವೆಚ್ಚದ ವಿವಾಹಗಳ ಬದಲಾಗಿ ಸಾಮೂಹಿಕ ವಿವಾಹ ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.ಬಡ ವರ್ಗದ ಜನತೆ ಅದ್ಧೂರಿಯ ವಿವಾಹ ನಡೆಸಲು ಅಸಾಧ್ಯವಾದ ಕಾರಣ ಸಾಮೂಹಿಕ ವಿವಾಹದ ಮೂಲಕ ವಿಜೃಂಭಣೆಯಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಗುವುದು ಮುಂದಿನ ವರ್ಷ 20 ಜೋಡಿಗಳ ವಿವಾಹ ಮಾಡಲು ನಿರ್ಧರಿಸಲಾಗಿದೆ ಪ್ರತಿಯೊಬ್ಬರೂ ಇದಕ್ಕೆ ಸಹಕರಿಸಬೇಕು ಎಂದು ಕೋರಿದರು.
ಇದನ್ನು ಓದಿದ್ದೀರಾ…? ಶಿಡ್ಲಘಟ್ಟ ಪ್ರಕರಣ | ಅವಾಚ್ಯ ಪದ ಬಳಸಿ, ಬೆದರಿಸಿ ಕ್ಷಮೆ ಕೇಳಿದರೆ ಸಾಕೇ? ಶಿಕ್ಷೆಯೂ ಆಗಬೇಕೇ?
ಈ ಸಂದರ್ಭದಲ್ಲಿ ಅತ್ತರ್ ಬೇಗ್,ಸಿಕಂದರ್ ಪಾಷಾ,ಗೌಸ್ ಬೇಗ್,ಮಸೀದಿ ಕಮಿಟಿಯ ಏಕ್ಬಲ್ ಅಹ್ಮದ್ ಖಾನ್,ಮೆಹಬೂಬ್ ಪಾಷಾ,ಸುಭಾಹನ್ ಬೇಗ್,ಇನಾಯತ್ ಬಾಬು,ಅಸ್ಗರ್ ಪಾಷಾ,ಅಫರೋಜ್ ಪಾಷಾ,ಸೇರಿದಂತೆ ಮತ್ತಿತರರು ಇದ್ದರು.





