ಚಿಕ್ಕಮಗಳೂರು ನಗರದಲ್ಲಿ ನಿರ್ಮಾಣಗೊಂಡ ಪೂರ್ಣಗೊಳ್ಳುವ ಅಂತದಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಯು ಜಿಲ್ಲೆಯ ಜನತೆಯಲ್ಲಿ ಸಂತಸ ತಂದಿದೆ. ಆದರೇ, ನ್ಯಾಯಾಲಯದ ಕಟ್ಟಡದ ಎದುರು ಅನಧೀಕೃತವಾಗಿ ನಿರ್ಮಿಸುತ್ತಿರುವ ಗಣಪತಿ ದೇವಾಲಯದ ಬಗ್ಗೆ ಸಾರ್ವಜನಿಕರಲ್ಲಿ ಆಕ್ಷೇಪವಾಗಿದ್ದು, ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಗಮನಕ್ಕೆ ಬಂದಿದ್ದು, ನ್ಯಾಯಾಲಯದ ಮುಂದೆ ಏಕ ಧರ್ಮ ಏರಿಕೆಯಾಗುತ್ತಿರುವುದನ್ನು ಒಕ್ಕೂಟ ತೀವ್ರವಾದಿ ಖಂಡಿಸುತ್ತದೆ ಎಂದು ದಸಂಸ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದರು.
ಸರ್ವಧರ್ಮ ಸಮಾನತೆಯ ಸರ್ವಜಾತಗಳಿಗೂ ಸಂವಿಧನಾತ್ಮಕ ಸಮಾನತೆಯನ್ನು ಪ್ರತಿಪಾಧಿಸುವ ಘನ ನ್ಯಾಯಾಲಯದ ಮುಂದೆ ಒಂದು ಧರ್ಮದ, ಜಾತಿಯ, ಆಚರಣೆಯ ಧಾರ್ಮಿಕ ಭಾವನೆಯನ್ನು ಏರಿಕೆ ಮಾಡುವ ಈ ದೇವಾಲಯದ ಅನಧೀಕೃತ ಕಾಮಗಾರಿಯು ನಡೆಯುತ್ತಿರುವುದು ವಿಷಾಧನೀಯ ಸಂಗತಿ. ಸರ್ವಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಹ ಅಂಶವಾಗಿದೆ. ಈ ನಮ್ಮ ಭಾರತ, ದೇಶ ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿಯ ಅಡಿಪಾಯದ ಮೇಲೆ ನಿಂತಿದೆ. ಅದನ್ನೇ ಈ ದೇಶದ ಸಂವಿಧಾನ ಪ್ರತಿಪಾಧನೆಯೂ ಆಗಿದೆ ಎಂದು ದಸಂಸ ಮುಖಂಡ ಉಮೇಶ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್; ಜ.18ರಂದು ವಾರ್ಷಿಕ ಕಲಾ ಉತ್ಸವ
ಒಂದು ಧರ್ಮಕ್ಕೆ ಧಕ್ಕೆ ಆಗದ ರೀತ ಸರ್ವ, ಧರ್ಮ ಸಮಾನತೆಯನ್ನು ಬಯಸಿದ ಬುದ್ಧ, ಬಸವ, ಕನಕದಾಸ, ನಾರಾಯಣಗುರು, ಪೆರಿಯಾರ್, ಗಾಂಧೀಜಿ, ಅಂಬೇಡ್ಕರ್ರವರಂತಹ ಮಹಾನಿಯರ ಪ್ರತಿಮೆಗಳನ್ನು ಪ್ರತಿಸ್ಥಾಪಿಸಲಿ, ಇದಕ್ಕೆ ಒಕ್ಕೂಟವು ಹೃತ್ತೂರ್ವಕವಾಗಿ ಸ್ಪಂಧಿಸುತ್ತದೆ. ಈ ಅನಧೀಕೃತ ದೇವಾಲಯದ ಕಾಮಗಾರಿಗಳನ್ನು ಮಾನ್ಯ ನ್ಯಾಯಾಧೀಶರುಗಳು ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಸರ್ವ ಧರ್ಮಗಳ ಶಾಂತಿ ನೆಲೆಗೊಳಿಸಿ, ನ್ಯಾಯಸಮ್ಮತ. ಸಮಾನತೆ ಸಾರ್ವ ಉದ್ದೇಶದಿಂದ ಅನಧೀಕೃತವಾಗಿ ನಿರ್ಮಾಣಗೊಳ್ಳುತ್ತಿರುವ ದೇವಾಲಯದ ಕಟ್ಟಡದ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ, ಇಲ್ಲದಿದ್ದರೆಎಲ್ಲಾ ಸಂಘಟನೆಯ ಒಕ್ಕೂಟದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ದಸಂಸ ಮುಖಂಡರು ತಿಳಿಸಿದರು. ಈ ವೇಳೆ ಶ್ರೀನಿವಾಸ್, ಭೀಮಯ್ಯ, ರಾಕೇಶ್, ಅಂಗಡಿ ಚಂದ್ರು, ಉಮೇಶ್ ಕುಮಾರ್, ಟಿ ಎಲ್ ಗಣೇಶ್, ಹೇಮಂತ್ ಹಾಗೂ ಇನ್ನಿತರರಿದ್ದರು.





