ಚಿಕ್ಕಮಗಳೂರು | ಎಸ್ಟೇಟ್‌ ದಾರಿಯಲ್ಲಿ ದಲಿತರು ಬರದಂತೆ ನಿರ್ಬಂಧ; ಗೇಟ್‌ಗೆ ಬೀಗ ಜಡಿದ ಮಾಲೀಕ

Date:

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಮೀಪದಲ್ಲಿರುವ ಕೊಣೆಬೈಲು ಗ್ರಾಮದಲ್ಲಿ ದಲಿತ ಸಮುದಾಯದ 60ಕ್ಕಿಂತ ಅಧಿಕ ಕುಟುಂಬಗಳು ನೂರಾರು ವರ್ಷದಿಂದ ಬದುಕು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ ಈವರೆಗೆ ಸರಿಯಾದ ಸವಲತ್ತುಗಳಿಲ್ಲದೆ ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ.

“ಕುಡಿಯುವ ನೀರು ವ್ಯವಸ್ಥೆಯಿಲ್ಲ, ದಾರಿ ದೀಪಗಳಿಲ್ಲ, ಓಡಾಡಲು ಸೂಕ್ತವಾದ ರಸ್ತೆಯಿಲ್ಲ, ಇಷ್ಟು ವರ್ಷದಿಂದ ವಾಸ ಮಾಡಿದರೂ ಹಕ್ಕುಪತ್ರವಿಲ್ಲದೆ ಪರದಾಟ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುಮಾರು ವರ್ಷದಿಂದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿರಲಿಲ್ಲ. ನಂತರ ಪಟ್ಟು ಬಿಡದೆ ಅಧಿಕಾರಿಗಳ ಕಚೇರಿಗೆ ಅಲೆದು, ಕುಡಿಯುವ ನೀರಿನ ವ್ಯವಸ್ಥೆಯಾಗಿದೆ” ಎಂದು ಸ್ಥಳೀಯರು ಹೇಳುತ್ತಾರೆ.

Screenshot 2025 01 19 12 15 30 19 965bbf4d18d205f782c6b8409c5773a4
ಅಧಿಕಾರಿಗಳಿಂದ ತಾತ್ಕಾಲಿಕವಾಗಿ ಕುಡಿಯುವ ನೀರಿನ ಸೌಲಭ್ಯ

“ಕುಡಿಯುವ ನೀರಿಗೆ ಪಕ್ಕದ ಕಾಫಿ ಎಸ್ಟೇಟ್ ಮಾಲೀಕ 4 ಇಂಚು ಪೈಪ್‌ ಅಳವಡಿಸಿಕೊಂಡು, ಕುಡಿಯಲು ಹಾಗೂ ತನ್ನ ಕಾಫಿ ತೋಟಕ್ಕೆ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಮುಕ್ಕಾಲು ಇಂಚು ಪೈಪ್ ಮಾತ್ರ ನಮಗೆ ಹಾಕಿದ್ದಾರೆ. ಅಧಿಕಾರಿಗಳು ಬಂದು ಸಮಸ್ಯೆಯನ್ನು ಬಗೆ ಹರಿಸಿದರು, ಸದ್ಯಕ್ಕೆ ಕುಡಿಯಲು ತಾತ್ಕಾಲಿಕ ವ್ಯವಸ್ಥೆ ಮಾತ್ರವಿದೆ” ಎಂದು ಗ್ರಾಮಸ್ಥರು ಈ ದಿನ.ಕಾಮ್ಗೆ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Screenshot 2025 01 19 12 19 38 86 965bbf4d18d205f782c6b8409c5773a4
ವಿದ್ಯುತ್ ದೀಪಗಳು ಅಳವಡಿಸಿಕೊಡುವಂತೆ ಅಧಿಕಾರಿಗಳಲ್ಲಿ ಗ್ರಾಮಸ್ಥರ ಮನವಿ

“ಅದೆಷ್ಟೋ ವರ್ಷಗಳ ನಂತರ ಪಂಚಾಯಿತಿಯಿಂದ ಬೀದಿದೀಪ, ಮನೆಗೆ ವಿದ್ಯುತ್ ದೀಪಗಳನ್ನು ಕೆಂಡೆವು. ಆದರೆ, ವಿದ್ಯುತ್ ದೀಪಗಳು ಹಾಳಾದರೂ ಅಧಿಕಾರಿಗಳು ಗಮನ ಹರಿಸುವುದಿಲ್ಲ. ಗ್ರಾಮಸ್ಥರೆಲ್ಲ ಸೇರಿ ಪಂಚಾಯಿತಿಗೆ ಹೋಗಿ ಕೇಳಿದಾಗ ಪಿಡಿಒ ಅವರು ಹಾಕಿಸಿಕೊಡುವುದಾಗಿ ಹೇಳಿದ್ದಾರೆ. ಆದರೆ ಅದೆಷ್ಟರ ಮಟ್ಟಿಗೆ ಕೆಲಸವಾಗುತ್ತದೆಂದು ಕಾದು ನೋಡಬೇಕು” ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. 

Screenshot 2025 01 19 12 18 16 46 99c04817c0de5652397fc8b56c3b3817
ಎಸ್ಟೇಟ್ ಮಾಲೀಕ ಗೇಟ್ ಬಂದ್ , ಓಡಾಡಲು ಸೂಕ್ತ ರಸ್ತೆ ಇಲ್ಲದೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ತೊಂದರೆ.

“ದೇವರಗುಡ್ಡ ಮಾರ್ಗವಾಗಿ ಹೋಗುವ ಕೊಣೆಬೈಲು ಗ್ರಾಮಕ್ಕೆ ಸರಿಯಾದ ರಸ್ತೆಗಳೇ ಇಲ್ಲ. ಕಲ್ಲು,ಮುಳ್ಳು, ಗುಂಡಿಗಳಿಂದ ಕೂಡಿರುವ ರಸ್ತೆಯಿದೆ. ಗರ್ಭಿಣಿಯರು, ಬಾಣಂತಿಯರು ಆಸ್ಪತ್ರೆಗೆ ಹೋಗಬೇಕೆಂದರೆ ಹರಸಾಹಸ ಪಡಬೇಕು. ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಈ ರಸ್ತೆಯಲ್ಲೇ ಓಡಾಡಬೇಕು. ಅದರೆ, ಮಳೆಗಾಲದಲ್ಲಂತೂ ಕೆಸರು ಮೈಯಿಗೆ ಮೆತ್ತಿ ಪಠ್ಯಪುಸ್ತಕ ಕೆಸರಿನಮಯವಾಗುತ್ತೆದೆ. ಅದರಲ್ಲೂ ನಮಗೆ ಓಡಾಡಲು ಎಸ್ಟೇಟ್ ಮಾಲೀಕರು ಬಿಡುವುದಿಲ್ಲ. ಗೇಟಿಗೆ ಬೀಗ ಹಾಕುತ್ತಾರೆ. ನಮಗೆ ಒಂದೊಂದು ಸಲ ಶಾಲೆಗೆ ಹೋಗಲೂ ಆಗುವುದಿಲ್ಲ” ಎಂದು ಅಲ್ಲಿನ ಮಕ್ಕಳು ಕಣ್ಣೀರಿಟ್ಟರು. 

Screenshot 2025 01 19 12 15 10 29 965bbf4d18d205f782c6b8409c5773a4
ದೇವರಗುಡ್ಡ ಸಮೀಪದಲ್ಲಿರುವ ಕೊಣೆಬೈಲು ಗ್ರಾಮದ ರಸ್ತೆ.

“ಸುಮಾರು ವರ್ಷಗಳಿಂದ ಕೊಣೆಬೈಲು ಗ್ರಾಮದ ಈ ಭಾಗಕ್ಕೆ ಓಡಾಡಲು ನಕಾಶೆ ರಸ್ತೆ ಇದ್ದರೂ, ಕಾಫಿ ಎಸ್ಟೇಟ್ ಮಾಲೀಕ ಸತ್ಯಾನಂದ ಆ ಜಾಗದಲ್ಲಿ ನಾವು ತಿರುಗಾಡಲು, ಬೈಕ್ ಅಥವಾ ಆಟೊಗಳು ಬರಲೂ ಕೂಡಾ ಬಿಡುವುದಿಲ್ಲ. ʼಇಲ್ಲಿ ಯಾರನ್ನು ಹೇಳಿ ಕೇಳಿ ಓಡಾಡುತ್ತೀರಾ, ಇಲ್ಲಿ ಯಾರೂ ತಿರುಗಾಡಬಾರದುʼ ಎಂದು ಧಮ್ಕಿ ಹಾಕಿದ್ದರು. ನಮಗೆ ಪರ್ಯಾಯ ರಸ್ತೆಯಿಲ್ಲದ ಕಾರಣ ನಾವು ಇದೇ ರಸ್ತೆಯಲ್ಲೇ ತಿರುಗಡಬೇಕು. ನಾವು ತಿರುಗಾಡದಂತೆ ಒಂದು ಗೇಟ್ ನಿರ್ಮಿಸಿ, ಅದಕ್ಕೆ ಬೀಗ ಹಾಕಿದ್ದಾರೆ. ಇದರಿಂದ ಎಲ್ಲರಿಗೂ ಸಮಸ್ಯೆ ಆಗುತ್ತಿದೆ” ಎಂದರು. 

Screenshot 2025 01 19 12 18 49 34 965bbf4d18d205f782c6b8409c5773a4

ಇಸನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸರ್ಕಾರದ ಕಾನೂನು ಆದೇಶದಂತೆ ಅರಣ್ಯ ಒತ್ತುವರಿ ತೆರವು; ಅಡಕೆ ತೋಟ ಸಂಹಾರ  

“ನಮ್ಮ ಗ್ರಾಮದಲ್ಲಿ ಆಗುತ್ತಿರುವ ಸಮಸ್ಯೆಯನ್ನು ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಬಗೆಹರಿಸಬೇಕು. ಈ ಗ್ರಾಮಕ್ಕೆ ಆಗಬೇಕಾದ ಅಭಿವೃದ್ಧಿ ಹಾಗೂ ಸಮಸ್ಯೆಗಳನ್ನು ಅಧಿಕಾರಿಗಳು ಕೂಡಲೇ ಬಗೆಹರಿಸಬೇಕು” ಎಂದು ಮನವಿ ಮಾಡಿದರು.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...