ಚಿಕ್ಕಮಗಳೂರು l ʼಸೂಸಲವಾನಿʼ ಗ್ರಾಮದ ರಸ್ತೆಗಿಲ್ಲ ಡಾಂಬರು ಭಾಗ್ಯ; ಗ್ರಾಮಸ್ಥರ ಅಳಲು ಕೇಳೋರೆ ಇಲ್ಲ

Date:

ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಎಂದೇ ಹೆಸರುವಾಸಿಯಾಗಿರುವ ಜಿಲ್ಲೆ ಚಿಕ್ಕಮಗಳೂರು. ನಿತ್ಯ ಹರಿದ್ವರ್ಣ ಕಾಡುಗಳಿಂದ ಕೂಡಿದ ಪರ್ವತ ಶ್ರೇಣಿಗಳು, ಜಲಪಾತಗಳಿಂದ ಸುತ್ತುವರಿದು, ತನ್ನ ಪ್ರಕೃತಿ ಸೌಂದರ್ಯದಿಂದಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ. ರಾಜ್ಯದ ಕಾಫಿ ನಾಡು ಎಂದೂ ಕರೆಯಲ್ಪಡುವ ಈ ಜಿಲ್ಲೆ ಇತಿಹಾಸದಲ್ಲಿಯೂ ತನ್ನ ಹೆಸರು ಉಲ್ಲೇಖಿಸಿಕೊಂಡಿದೆ. ಇಷ್ಟೆಲ್ಲಾ ಹೆಸರು ಮಾಡಿರುವ ಈ ಜಿಲ್ಲೆಯ ಗ್ರಾಮವೊಂದು ಇಂದಿಗೂ ರಸ್ತೆಗೆ ಡಾಂಬರು ಕಾಣದೆ, ಅಭಿವೃದ್ಧಿಯನ್ನು ಎದುರು ನೋಡುತ್ತಿದೆ ಎಂದರೆ ನಂಬಲೇಬೇಕು.

IMG 20250203 WA0037
ಸೂಸಲವಾನಿ ಗ್ರಾಮಕ್ಕೆ ಹಾದುಹೋಗುವ ರಸ್ತೆ ಕಲ್ಲು, ಹಳ್ಳ, ಗುಂಡಿಗಳಿಂದ ಕೂಡಿದೆ.

ಹೌದು.. ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಸಲವಾನಿ ಗ್ರಾಮಕ್ಕೆ ಅಭಿವೃದ್ಧಿ ಇರಲಿ, ಕಡೇಪಕ್ಷ ರಸ್ತೆಗೆ ಡಾಂಬರು ಹಾಕಿಸುವವರೂ ಇಲ್ಲ. ಸುಮಾರು ನೂರಾರು ವರ್ಷಗಳಿಂದ 20-25 ಕುಟುಂಬದವರು ವಾಸವಾಗಿರುವ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮುತ್ತಜ್ಜನ ಕಾಲದಿಂದಲೂ ಸೂಕ್ತವಾದ ರಸ್ತೆ ಅನ್ನೋದೇ ಇಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು. ಮೊದಲ ಸಲ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯಾದಾಗ ಹಾಗೂ ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಬಕ್ರಿಹಳ್ಳ ಏತ ನೀರಾವರಿ ಯೋಜನೆಯ ಘಟಕಕ್ಕೆ ಗ್ರಾಮ ಆಯ್ಕೆಯಾದರೂ ಸಹ ರಸ್ತೆ ಅನ್ನೋದನ್ನ ಕನಸಿನಲ್ಲಿ ಮಾತ್ರ ಕಾಣುವಂತಾಗಿದೆ. ವರ್ಷಗಳಿಂದಲೂ ಅಧಿಕಾರಿಗಳಿಗೆ, ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರೂ ಯಾರೊಬ್ಬರೂ ಇತ್ತ ಗಮನಹರಿಸುತ್ತಿಲ್ಲ. ನಮ್ಮ ಅಳಲು ಕೇಳಲೂ ಸಹ ಯಾರು ಇಲ್ಲ ಎಂದು ಅಸಮಾಧಾನಗೊಂಡರು.

IMG 20250203 WA0039 2
ನೂರಾರು ಕೋಟಿ ವೆಚ್ಚದಿಂದ ಬಕ್ರಿಹಳ್ಳ ಏತನೀರಾವರಿ ಯೋಜನೆ ನಿರ್ಮಾಣವಾಗಿರುವ ಸಂಪರ್ಕ ರಸ್ತೆ.

ಈ ಬಗ್ಗೆ ಈದಿನ ಡಾಟ್‌ ಕಾಮ್ ಜತೆ ಮಾತನಾಡಿದ ಗ್ರಾಮದ ಹಿರಿಯರು, “ಕಡಹಿನಬೈಲು-ಮಾರಿದಿಬ್ಬ ಮಾರ್ಗವಾಗಿ ಸೂಸಲವಾನಿ ಗ್ರಾಮದವರೆಗೂ ಬಕ್ರಿಹಳ್ಳ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ 1300 ಎಕರೆ ಜಮೀನುಗಳಿವೆ. ಅದರಲ್ಲೂ ಸೂಸಲವಾನಿ ಗ್ರಾಮದಲ್ಲಿ ಸುಮಾರು 40-50 ಏಕರೆಯಷ್ಟು ರೈತರ ಕೃಷಿ ಭೂಮಿ ಇದ್ದು, ಕೃಷಿ ಚಟುವಟಿಕೆಗಳಿಗೆ ಜಮೀನಿಗೆ ಓಡಾಡಲು ಸೂಕ್ತ ರಸ್ತೆ ಇಲ್ಲದ ಕಾರಣ ಕೃಷಿ ಮಾಡಲು ಸಹ ಕಷ್ಟವಾಗಿದೆ. ಬಕ್ರಿಹಳ್ಳ ಏತ ನೀರಾವರಿ ಯೋಜನೆ ಮಾಡಿರುವ ಜಾಗಕ್ಕೆ  ರಸ್ತೆ ಮಾಡಿಕೊಡಿ ಎಂದು ಸ್ಥಳೀಯ ಪ್ರಾಧಿಕಾರಗಳಿಗೆ ಹಲವಾರು ಬಾರಿ ಮನವಿ ನೀಡಿದ್ದರ ಫಲವಾಗಿ ಲ್ಯಾಂಡ್ ಆರ್ಮಿ (ಕೆಆರ್‌ಐಡಿಎಲ್) ಚಿಕ್ಕಮಗಳೂರು ಸಂಸ್ಥೆಯಿಂದ ರಸ್ತೆ ಮಾಡಿಕೊಡುವುದಾಗಿ ತಿಳಿಸಿರುತ್ತಾರೆ. ಮುಂದುವರೆದು..

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
IMG 20250203 WA0038
ಕಾಮಗಾರಿ ಮಾಡಿರುವ ವೆಚ್ಚದ ಫಲಕವನ್ನು ಹಾಕಿದ್ದಾಗ, ಗ್ರಾಮಸ್ಥರು ಪ್ರಶ್ನೆ ಮಾಡಿ ಕೇಳಿದಾಗ ಫಲಕವನ್ನು ನೆಲಕ್ಕೆ ಉರುಳಿಸಿರುವ ದೃಶ್ಯ.

“2019 ರಲ್ಲಿ ಬಾಳೆಕೊಪ್ಪ, ಮಾರಿದಿಬ್ಬ ರಸ್ತೆಯಿಂದ ಪ್ರಾರಂಭವಾಗಿ ಬಕ್ರಿಹಳ್ಳ ಏತ ನೀರಾವರಿ ಯೋಜನೆ ಮಾಡಿರುವ ಜಾಗಕ್ಕೂ ರಸ್ತೆ ಮಾಡಿಕೊಡುವುದಾಗಿ ತಿಳಿಸಿ, ಅದೇ ವರ್ಷ ಬಾಳೆಕೊಪ್ಪ, ಮಾರಿದಿಬ್ಬ ರಸ್ತೆಯವರೆಗೆ ಕೇವಲ 634 ಮೀಟರ್ ಮಾತ್ರ ಡಾಂಬರ್ ರಸ್ತೆ ಮಾಡಿರುತ್ತಾರೆ. 2021-22ರಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮುಂದುವರಿದ ಕ್ರಿಯಾಯೋಜನೆ ಅಡಿಯಲ್ಲಿ ಸೂಸಲವಾನಿ ಗ್ರಾಮದ ಬಾಳೆಕೊಪ್ಪ, ಮಾರಿದಿಬ್ಬ ರಸ್ತೆಯಿಂದ ಬಕ್ರಿಹಳ್ಳ, ಕಡಹಿನಬೈಲು ಏತನೀರಾವರಿ ಸ್ಥಾವರಕ್ಕೆ ಹೋಗುವ ಸಂಪರ್ಕ ರಸ್ತೆಗೆ ಡಾಂಬರ್ ರಸ್ತೆ ಮಾಡುವ ಬದಲು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮತ್ತು ಕಾಮಗಾರಿಯನ್ನು ಧೃಡೀಕರಿಸಿದ ಇಂಜಿನಿಯರ್‌ಗಳ ನೇತೃತ್ವದಲ್ಲಿಯೇ ಕಾಮಗಾರಿಯ ಗುತ್ತಿಗೆದಾರರು ಹಾಗೂ ಇತರೆ ಅಧಿಕಾರಿಗಳು ಸೇರಿ ಬೇರೆ ಮಾರ್ಗದ ರಸ್ತೆಗೆ 539.15 ಮೀಟರ್ ಡಾಂಬರೀಕರಣ ಮಾಡಿದ್ದಾರೆ” ಎಂದು ಮಾಹಿತಿ ನೀಡಿದರು.

IMG 20250203 WA0034
ಬದಲಿ ಮಾರ್ಗಕ್ಕೆ ಒಂದೂವರೆ ವರ್ಷದ 10 ಲಕ್ಷ ಅನುದಾನದಲ್ಲಿ ಕಾಮಗಾರಿಯಾಗಿರುವ ಡಾಂಬರ್ ರಸ್ತೆಯ ದೃಶ್ಯ

ಸೂಸಲವಾನಿ ಗ್ರಾಮಕ್ಕೆ ಆಗಬೇಕಾದ ಡಾಂಬರ್ ರಸ್ತೆ, 10 ಲಕ್ಷ ಅನುದಾನದಲ್ಲಿ ಬೇರೆ ಮಾರ್ಗವಾಗಿ ನಡೆದಿದೆ. ಕೇವಲ ಒಂದೂವರೆ ವರ್ಷದ ಆ ರಸ್ತೆ ರಸ್ತೆ, ಜಲ್ಲಿ ಕಲ್ಲುಗಳನ್ನು ಮೇಲೊದ್ದು ಮಲಗಿದೆ. ಕಾಮಗಾರಿ ಎಲ್ಲ ಕಿತ್ತು ಹೊರಬಂದಿದೆ. ಇಡೀ ಗ್ರಾಮಕ್ಕೆ ರಸ್ತೆ ಮಾಡಿಕೊಡುವ ಬದಲು, ಪ್ರಭಾವಿ ವ್ಯಕ್ತಿಗಳು, ಶ್ರೀಮಂತರು, ಹಣವಂತರು ಓಡಾಡುವ ಜಾಗಕ್ಕೆ, ಅವರ ಅನುಕೂಲಕ್ಕೆ ತಕ್ಕಂತೆ ರಸ್ತೆ ಮಾಡಿಕೊಟ್ಟಿದ್ದಾರೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

IMG 20250203 WA0032
ಬಕ್ರಿಹಳ್ಳ ಏತನೀರಾವರಿ ಯೋಜನೆ ನಿರ್ಮಾಣವಾಗಿರುವ ದೃಶ್ಯ

“ನಾವು ಕೂಲಿ ಮಾಡಿ ಬದುಕು ನಡೆಸುವ ಜನ, ಈ ಊರಿಗೆ ಯಾವುದೇ ಗಾಡಿಗಳು ಬರುವುದಿಲ್ಲ. ಬಂದರು ಕೂಡ ಬಾಡಿಗೆಯನ್ನು ಕೂಲಿ ಮಾಡಿದ ಹಣಕ್ಕಿಂತ ಹೆಚ್ಚು ಕೇಳುತ್ತಾರೆ. ಕೇಳಿದರೆ ನಿಮ್ಮೂರಿನ ರಸ್ತೆ ಸರಿಯಿಲ್ಲ ನಮ್ಮ ಗಾಡಿಗಳು ಹಾಳಾಗುತ್ತವೆ. ಕೆಟ್ಟು ನಿಂತರೆ ಯಾರು ಹಣ ಕೊಡ್ತಾರೆ ಎಂದು ನಮ್ಮನ್ನೇ ಕೇಳುತ್ತಾರೆ. ಶಾಲೆಗೆ ಹೋಗುವ ಮಕ್ಕಳಿಗೆ, ಬಾಣಂತಿಯರಿಗೆ, ವೃದ್ಧರಿಗೆ ಆಸ್ಪತ್ರೆಗೆ ಹೋಗಲು ಬಹಳಷ್ಟು ತೊಂದರೆಗಳಾಗುತ್ತಿವೆ. ಅದರಲ್ಲೂ ಗರ್ಭಿಣಿಯಾದವರಿಗೆ ಈ ರಸ್ತೆಯಲ್ಲೇ ಗರ್ಭಪಾತವಾದ ಉದಾಹರಣೆಗಳೂ ಇವೆ. ಇದಕ್ಕೆ ಯಾರು ಹೊಣೆ?..

IMG 20250203 WA0040
ಸೂಸಲವಾನಿ ಗ್ರಾಮದ ಮಹಿಳೆಯರು ಸೂಕ್ತ ರಸ್ತೆಯಿಲ್ಲದೆ ಪರದಾಡುತ್ತಿರುವ ನೋವಿನ ಮಾತು.

ಮಳೆಗಾಲದಲ್ಲಂತೂ ಕೇಳೋದೇ ಬೇಡ ನಮ್ಮ ಪರಿಸ್ಥಿತಿ. ರಸ್ತೆಯಂತೂ ಕೆಸರು ಗದ್ದೆಯಂತಾಗಿರುತ್ತದೆ. ಚುನಾವಣೆ ಬಂದಾಗ ಮಾತ್ರ ರಾಜಕೀಯದವರು ಬರ್ತಾರೆ. ಬಾಕಿ ಸಮಯದಲ್ಲಿ ನಾವು ಬದುಕಿದ್ದೀವಾ.. ಎಂದು ಯಾರೂ ತಿರುಗಿ ನೋಡಲ್ಲ. ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನ ಕೇಳಿದ್ರೆ, ಉಡಾಫೆಯ ಉತ್ತರ ನೀಡುತ್ತಾರೆ. ನಾವೆಲ್ಲಾ ಸತ್ತಮೇಲೆ ನಮ್ಮೂರಿಗೆ ಒಳ್ಳೆಯ ರಸ್ತೆ ಮಾಡ್ತಾರಾ? ಎನ್ನುತ್ತಾರೆ ಗ್ರಾಮದ ನಿವಾಸಿ.

IMG 20250203 WA0036 1
ಸೂಸಲವಾನಿ ಗ್ರಾಮದ ಸಮಸ್ಯೆ ಕುರಿತು ಕಡಹಿನಬೈಲು ಗ್ರಾ.ಪಂ ಅಧ್ಯಕ್ಷರಾದ ಅಶ್ವಿನಿ ಅವರ ಅಭಿಪ್ರಾಯ.

ಕಾಮಗಾರಿ ಉಸ್ತುವಾರಿ ವಹಿಸಿದ್ದ ಹಾಲಿ ಗ್ರಾಪಂ ಸದಸ್ಯ ಸುನಿಲ್ ಅವರೊಂದಿಗೆ ಈದಿನ ಡಾಟ್ ಕಾಮ್ ತಂಡ ಸಮಸ್ಯೆ ಕುರಿತು ಮಾತನಾಡಿಸಲು ಪ್ರಯತ್ನಿಸಲಾಗಿ.. ʼನಾವು ಕಾಮಗಾರಿ ಮಾಡಿರುವುದು ಸರಿ ಇದೆ. ಮುಂದಿನ ದಿನಗಳಲ್ಲಿ ರಸ್ತೆ ಮಾಡಿಸುತ್ತೇವೆಂದುʼ ಹಾರಿಕೆಯ ಉತ್ತರ ಕೊಟ್ಟು ಅರ್ಧಕ್ಕೆ ಫೋನ್ ಕಟ್ ಮಾಡಿರುತ್ತಾರೆ.

“ನಾನು ಗ್ರಾಮ ಪಂಚಾಯಿತಿಗೆ ಆಯ್ಕೆ ಆಗಿ 6 ತಿಂಗಳು ಆಗಿದೆ. ಎಲ್ಲಿ ಏನು ತಪ್ಪಾಗಿದೆ ಎಂದು ನನಗೆ ಗೊತ್ತಿಲ್ಲ. ನಮ್ಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸದಸ್ಯರೆಲ್ಲ ಸೇರಿ ಸಭೆ ಮಾಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹಾಲಿ ಅಧ್ಯಕ್ಷೆ ಅಶ್ವಿನಿ ತಿಳಿಸಿದರು.

IMG 20250203 WA0035
ಸೂಸಲವಾನಿ ಗ್ರಾಮದ ಕುರಿತು ಕಡಹಿನಬೈಲು ಗ್ರಾಮ ಪಂಚಾಯತಿ ಪಿಡಿಓ ವೀಣಾ ಅವರ ಪ್ರತಿಕ್ರಿಯೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಶಾಸಕರಿಗೆ ಪದೇಪದೆ ಮನವಿ ಮಾಡಿದರೂ, ಡಾಂಬರೀಕರಣವಾಗದ ರಸ್ತೆ

ಸೂಸಲವಾನಿ ಗ್ರಾಮ ಯಾವ ರೀತಿಯ ಸಮಸ್ಯೆ ಎದುರಿಸುತ್ತಿದೆ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆಂದು ಪಿಡಿಓ ವೀಣಾ ಮಾಹಿತಿ ನೀಡಿದರು.

ಹಗರಣ ಕುರಿತು ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎನ್ನುವ ಗ್ರಾಮಸ್ಥರ ಮನವಿಯನ್ನು ಸಂಬಂಧಪಟ್ಟವರು ಇನ್ನು ಮುಂದೆಯಾದರೂ ಆಲಿಸಲಿದ್ದಾರಾ.. ಸೂಸಲವಾನಿ ಗ್ರಾಮ ಈಗಲಾದರೂ ಡಾಂಬರ್‌ ರಸ್ತೆಯನ್ನು ನೋಡಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...