ಚಿಕ್ಕಮಗಳೂರು l ನ.10ರಂದು ಸೂಫಿ ಪರಂಪರೆಯ ಧಾರ್ಮಿಕ ಆಚರಣೆ; ಸೈಯದ್ ಫಕ್ರುದ್ದೀನ್ ಶಾ ಖಾದ್ರಿ 

Date:

ಶ್ರೀಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ನ.10ರಂದು ಸೋಮವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಶತಮಾನಗಳಿಂದ ನಡೆದು ಬರುತ್ತಿರುವ ಸೂಫಿ ಪರಂಪರೆಯ ಧಾರ್ಮಿಕ ಆಚರಣೆ ರೊಟ್ಟಿ ಭಾಜಿ ಫಾತಿಹಾ(ಮಾಮಾ ಜಿಗ್ನಿ ಫಾತಿಹಾ)ಸಹಜ ನಡೆಯಲಿದೆ ಎಂದು ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ  ತಿಳಿಸಿದ್ದಾರೆ.

ರೊಟ್ಟಿ ಭಾಜಿ ಧಾರ್ಮಿಕ ಆಚರಣೆ ಕಾರ್ಯಕ್ರಮ ಬಾಬಾ ಬುಡನ್‌ಗಿರಿ ದರ್ಗಾದಲ್ಲಿ ಶತಮಾನಗಳಿಂದ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಪರಂಪರೆಯಾಗಿದೆ. ಮುಹಮ್ಮದನ್ ರಾಜಕುಮಾರಿಯಾದ ಮಾಮಾ ಜಿಗ್ನಿ ಮಾಸಾಹಿಬ ಅವರ ಸ್ಮರಣಾರ್ಥವಾಗಿ ಈ ಧಾರ್ಮಿಕ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಅವರು ಆ ಕಾಲದಲ್ಲಿ ಫಕೀರ್‌ಗಳು ಮತ್ತು ಭಕ್ತರಿಗೆ ರೊಟ್ಟಿ ಹಾಗೂ ಭಾಜಿ ಹಂಚುವ ಶಾಂತಿಯುತ ಪರಂಪರೆ ಆರಂಭಿಸಿದ್ದು, ಅವರ ಶಾಂತಿ, ಐಕ್ಯತೆ ಮತ್ತು ಜ್ಞಾನದ ಸಂದೇಶ ಇಂದಿಗೂ ಎಲ್ಲ ಧರ್ಮಗಳ ಜನರಿಗೆ ಪ್ರೇರಣೆಯಾಗಿದೆ ಎಂದು ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದ್ದಾರೆ.

ಈ ದರ್ಗಾ ಶತಮಾನಗಳಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಗೌರವಿಸುತ್ತಿರುವ ಶಾಂತಿಯ ತಾಣವಾಗಿದ್ದು, ಇತ್ತೀಚಿನ ಕೆಲವು ಚಟುವಟಿಕೆಗಳಿಂದಾಗಿ ದರ್ಗಾದ ಧಾರ್ಮಿಕ ಸ್ವರೂಪಕ್ಕೆ ಧಕ್ಕೆಯಾಗುತ್ತಿದೆ. ಇದು ದರ್ಗಾದ ಭಕ್ತರ ಧಾರ್ಮಿಕ ನಂಬಿಕೆಗೆ ಕುಂದುಂಟು ಮಾಡಿದೆ. ಆದ್ದರಿಂದ ಶಾಂತಿಪ್ರಿಯ ನಾಗರಿಕರು, ಭಕ್ತರು ಮತ್ತು ಅಧಿಕಾರಿಗಳು ಶತಮಾನಗಳಿಂದ ನಡೆಯುತ್ತಿರುವ ಈ ಶಾಂತಿಯುತ ಫಾತಿಹಾ ಪರಂಪರೆಯನ್ನು ಬೆಂಬಲಿಸಬೇಕು. ದರ್ಗಾದ ಪವಿತ್ರತೆ ಮತ್ತು ಇತಿಹಾಸದ ಸತ್ಯವನ್ನು ಕಾಪಾಡಬೇಕು. ಹಾಗೆಯೇ, ಈ ದರ್ಗಾ ಅಧಿಕೃತವಾಗಿ ಮುಹಮ್ಮದನ್ ಇನ್‌ಸ್ಟಿಟ್ಯೂಟ್ ಎಂದು ಗುರುತಿಸಲ್ಪಟ್ಟಿದ್ದು, ಮುಜರಾಯಿ ಕೈಪಿಡಿಯ ಅಧ್ಯಾಯ 11ಪುಟ 571 ಹಾಗೂ ಸ್ಥಳಗಳ ಪೂಜಾ ವಿಧಾನ ಕಾಯ್ದೆ, 1991 (ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991) ಪ್ರಕಾರ ಇದರ ಧಾರ್ಮಿಕ ಸಂಪ್ರದಾಯ ಮತ್ತು ಸಂಸ್ಕೃತಿ ಕಾಪಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತ; ಐವರು ವಿದ್ಯಾರ್ಥಿಗಳು ಗಂಭೀರ

ಫಾತಿಹಾ ಸಂಪೂರ್ಣ ಶಾಂತಿಯುತವಾಗಿ ನಡೆಯಲಿದ್ದು, ಇದರ ಅಂಗವಾಗಿ ಹಜ್ರತ್ ದಾದಾ ಹಯಾತ್ (ದಾದಾ ಪೀರ್) ಅವರ ಪಾದುಕೆ (ಖಡವೇ) ದರ್ಶನ, ಚಿಲ್ಲಾ ಮತ್ತು ಪೀಠದ ದರ್ಶನ, ಮಾಮಾ ಜಿಗ್ನಿ ಮಾಸಾಹಿಬ ಅವರ ಪವಿತ್ರ ಚಿಲ್ಲಾ ಮತ್ತು ಪೀಠದ ದರ್ಶನ, ಪವಿತ್ರ ಕಲಿಮಾ ತಯ್ಯಿಬ ಇರುವ ದ್ವಾರದ ದರ್ಶನ, ಗುಹೆಯ ಹೊರಗಿನ ಪವಿತ್ರ ಚೌಕಿ ಮತ್ತು ಅರೇಬಿಕ್ ಹಾಗೂ ಫರ್ಶಿಯನ್ ಭಾಷೆಯ ತಾವೀಜ್ ದರ್ಶನ ಮತ್ತು ಜಮಾಲುಲ್ಲಾ ಮಘ್ರಿಬಿ ಶಾ ಖಾದ್ರಿ (ಕಾಫಿ ಗೋರಿ) ಅವರ ದರ್ಶನ ನಡೆಯಲಿದೆ. ಫಾತಿಹಾ ನಂತರ ನಿಯಾಜ್ (ರೊಟ್ಟಿ-ಭಾಜಿ ಆಹಾರ ವಿತರಣೆ) ಮಾಡಲಾಗುತ್ತದೆ. ಭಕ್ತರು ಪ್ರೀತಿ ಮತ್ತು ಧಾರ್ಮಿಕ ಐಕ್ಯತೆಯೊಂದಿಗೆ ಈ ದರ್ಗಾದ ಸಂರಕ್ಷಣೆ ಹಾಗೂ ಪಾವಿತ್ರö್ಯತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಬೇಕೆಂದು ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ 

ವಿನಂತಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...