ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಧೀಶರಾದ ಬಿ.ಆರ್ ಗವಾಯಿಯವರಿಗೆ ನ್ಯಾಯವಾದಿ ಅವಮಾನ ಕುರಿತು ಚಿಕ್ಕಮಗಳೂರು ನಗರದ ತಾಲೂಕು ಕಚೇರಿ ಎದುರು ಎದ್ದೇಳು ಕರ್ನಾಟಕದಿಂದ ಪ್ರತಿಭಟನೆ ನಡೆಸಲಾಗಿದೆ.

ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿಯವರ ಮೇಲೆ ಬೂಟು ಎಸೆದು ರಾಕೇಶ್, ಕಿಶೋರ್ ಮತ್ತು ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಅಂಬೇಡ್ಕರ್ ಒಬ್ಬ ಸುಳ್ಳ. ಮೋಸಗಾರ. ಕೋಳಕ ಎಂದಿರುವ ಅನಿಲ್ ಮಿಶ್ರ ಇವರುಗಳನ್ನು ದೇಶದ್ರೋಹದ ಕಾಲಂ ನಲ್ಲಿ ಬಂಧಿಸಿ ಗಡಿಪಾರು ಮಾಡಬೇಕು. ಇಲ್ಲವಾದರೆ ಇನ್ನಷ್ಟು ಸಂವಿಧಾನ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ದೇಶದಲ್ಲಿ ಅಶಾಂತಿ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಇವರುಗಳನ್ನು ಗಡಿಪಾರು ಮಾಡಲೇಬೇಕೆಂದು ಮತ್ತೊಮ್ಮೆ ಒತ್ತಾಯಿಸುತ್ತೇವೆಂದು ಎದ್ದೇಳು ಕರ್ನಾಟಕ ಒತ್ತಾಯಿಸಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸುಗಮ ಪ್ರವಾಸೋದ್ಯಮದ ಕಾಲು ಮುರಿದ ʼಆನ್ಲೈನ್ ಬುಕ್ಕಿಂಗ್ʼ ನೀತಿ!
ಈ ವೇಳೆ ಎದ್ದೇಳು ಕರ್ನಾಟಕ ಸಂಘಟನೆಯ ಮುಖಂಡರು ಕಾರ್ಯಕರ್ತರು ಹಾಗೂ ಹಲವು ಸಂಘಟನಾ ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.





