ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬೀರೂರು ವ್ಯಾಪ್ತಿಯ ಎಪಿಎಂಸಿ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ.
ಬಂಧಿತ ಆರೋಪಿ ಎಂ.ರಘು ಎಂಬಾತ ತರೀಕೆರೆ ತಾಲೂಕಿನ ಮುಂಡ್ರೆ ತಾಂಡ್ಯ ನಿವಾಸಿ ಎನ್ನಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಗಿದೆ. ಈ ವೇಳೆ 3 ಸಾವಿರ ರೂ. ಮೌಲ್ಯದ 240 ಗ್ರಾಂ ಗಾಂಜಾ, ಸ್ಕೂಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಆಕಸ್ಮಿಕ ಬೆಂಕಿ; ಕಾರು ಭಸ್ಮ
ಈ ವೇಳೆ ಸಬ್ ಇನ್ಸ್ಪೆಕ್ಟರ್ ಡಿ.ವಿ.ತಿಪ್ಪೇಶ್, ಸಿಬ್ಬಂದಿ ಶಿವಾನಂದ್, ಓಂಕಾರಸ್ವಾಮಿ, ಯತೀಶ್, ಚಂದ್ರನಾಯ್ಕ, ಪುರಸಭೆ ನೌಕರರಾದ ಕರಿಯಪ್ಪ, ಲೋಕೇಶಪ್ಪ, ಮೋಹನ್ ಕುಮಾರ್ ಹಾಗೂ ಇನ್ನಿತರರಿದ್ದರು.





