ಕಾಫಿನಾಡಿನಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಮಲೆನಾಡಿನಲ್ಲಿ ರೈತರ ಬೆಳೆಗಳನ್ನು ನಾಶ ಮಾಡುತ್ತಿವೆಂದು ರೈತರು ಕಂಗಲಾಗಿದ್ದಾರೆ.
ಅರೇಬಿಕಾ ಕಟಾವು ಮುಗಿದು ರೋಬಸ್ಟಾ ಕಟಾವು ಆರಂಭವಾಗುವ ಈ ಸಮಯದಲ್ಲಿ ಹಿಂಡು ಹಿಂಡಾಗಿ ದಾಳಿ ಮಾಡುತ್ತಿರುವ ಮಂಗಗಳು, ಮಾಗಿದ ಕಾಫಿ ಹಣ್ಣುಗಳನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ಗಿಡಗಳಿಂದ ಕೆಡವಿ ಹಾಕಿ ಅಪಾರ ಪ್ರಮಾಣದ ನಷ್ಟ ಮಾಡುತ್ತಿವೆಂದು ರೈತರು ತಿಳಿಸಿದರು. ಕಾಫಿ ಮಾತ್ರವಲ್ಲದೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುವ ಅಡಿಕೆ, ಬಾಳೆ ಹಾಗೂ ಏಲಕ್ಕಿ ಗಿಡಗಳಿಗೂ ಮಂಗಗಳು ಲಗ್ಗೆ ಇಡುತ್ತಿವೆ. ಮಂಗಗಳನ್ನು ಓಡಿಸಲು ಪಟಾಕಿ ಸಿಡಿಸುವುದು ಸೇರಿದಂತೆ ನಾನಾ ಕಸರತ್ತುಗಳನ್ನು ಮಾಡುತ್ತಿದ್ದರೂ ಅವು ಯಾವುದಕ್ಕೂ ಹೆದರದೆ ಮನುಷ್ಯರನ್ನೇ ಎದುರಿಸುವಷ್ಟು ಧೈರ್ಯವಾಗಿ ವರ್ತಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿದ್ದೀರಾ?ತರೀಕೆರೆ l ಚಿರತೆ ದಾಳಿಗೆ ಸಾಕು ನಾಯಿ ಸಾವು; ಗ್ರಾಮಸ್ಥರು ಆತಂಕ
ಈ ಕುರಿತು ಅರಣ್ಯ ಇಲಾಖೆಯು ಮಂಗಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಹಾಗೂ ನಷ್ಟ ಅನುಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಬೆಳೆಗಾರರು ಆಗ್ರಹಿಸುತ್ತಿದ್ದಾರೆ





