ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಕುರಿತು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೀಡಿದ ಹೇಳಿಕೆಗಳು ಪ್ರಚೋದನಕಾರಿ ಮತ್ತು ಶಾಂತಿ ಭಂಗಗೊಳಿಸುವಂತಿವೆ ಎಂದು ಸೈಯದ್ ಬಾಬಾ ಬುಡನ್ ಶಾ ಖಾದ್ರಿ ವಂಶಸ್ಥ ಫಕ್ರುದ್ದೀನ್ ಶಾ ಖಾದ್ರಿ ಅವರು ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾವು ಐತಿಹಾಸಿಕವಾಗಿ ಮೊಹಮ್ಮದೀಯ ಸಂಸ್ಥೆಯಾಗಿದ್ದು, ಮೈಸೂರು ಮಹಾರಾಜರ ಆಡಳಿತದಲ್ಲೂ ‘ಮುಹಮ್ಮದನ್ ಇನ್ಸ್ಟಿಟ್ಯೂಟ್’ ಎಂದೇ ಗುರುತಿಸಲ್ಪಟ್ಟಿದೆ. ಇಸ್ಲಾಂ ಧರ್ಮದಲ್ಲಿ ಆರತಿ, ಮೂರ್ತಿ ಪೂಜೆ ಇಲ್ಲ, ದತ್ತಪೀಠವನ್ನು ಮುಸ್ಲಿಮರು ಹೇಗೆ ಆಳುತ್ತಾರೆ ಎಂಬ ಮುತಾಲಿಕ್ ಹೇಳಿಕೆ ಪ್ರಚೋದನಕಾರಿಯಾಗಿದೆ. ದರ್ಗಾದಲ್ಲಿ ಯಾವುದೇ ಮೂರ್ತಿ ಪೂಜೆ ಅಥವಾ ಹಿಂದೂ ಪೂಜೆ ನಡೆದಿಲ್ಲ ಅಲ್ಲಿ ಚಿಲ್ಲಾ, ಪಾದುಕೆ, ಗಾದಿ ಮತ್ತು ಸಮಾಧಿಗಳಿವೆ. ಕೆಲವರು ರಾಜಕೀಯ ಉದ್ದೇಶದಿಂದ ಧಾರ್ಮಿಕ ಚಟುವಟಿಕೆಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಸೈಯದ್ ಬಾಬಾ ಬುಡನ್ ಶಾ ಖಾದ್ರಿ ವಂಶಸ್ಥ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಎಚ್ಐವಿ ಕುರಿತು ಅರಿವು ಕಾರ್ಯಕ್ರಮ
ಇತ್ತೀಚಿನ ದಿನಗಳಲ್ಲಿ ಹೊಸ ಆಚರಣೆಗಳನ್ನು ತರುವ ಪ್ರಯತ್ನಗಳು ಮುಜರಾಯಿ ಮ್ಯಾನ್ಯುವಲ್, ಪ್ಲೇಸಸ್ ಆಫ್ ವರ್ಸಿಪ್ ಆಕ್ಟ್-1991 ಮತ್ತು ಸುಪ್ರೀಂ ಕೋರ್ಟ್ ಆದೇಶಗಳಿಗೆ ವಿರುದ್ಧವಾಗಿವೆ. ದರ್ಗಾದ ಪವಿತ್ರತೆ ಮತ್ತು ಐತಿಹಾಸಿಕ ಸಾನ್ನಿಧ್ಯವನ್ನು ಸುರಕ್ಷಿತಗೊಳಿಸಲು ಮತ್ತು ಪ್ರಚೋದನಕಾರಿ ಚಟುವಟಿಕೆಗಳು ನಡೆಯದಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದು ಸೈಯದ್ ಬಾಬಾ ಬುಡನ್ ಶಾ ಖಾದ್ರಿ ವಂಶಸ್ಥ ಫಕ್ರುದ್ದೀನ್ ಶಾ ಖಾದ್ರಿ ಒತ್ತಾಯಿಸಿದ್ದಾರೆ.





