ಮಳಲೂರು ಏತ ನೀರಾವರಿ ಯೋಜನೆಗೆ ಭೂಮಿ ವಶಪಡಿಸಿಕೊಂಡಿರುವ ರೈತರಿಗೆ ಪರಿಹಾರ ನೀಡಬೇಕೆಂದು ಚಿಕ್ಕಮಗಳೂರು ನಗರದಲ್ಲಿ ಮಳಲೂರು ಏತ ನೀರಾವರಿ ಹೋರಾಟ ಸಮಿತಿಯವರಿಂದ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.
ಮಳಲೂರು ಏತ ನೀರಾವರಿಗೆ ಮಳಲೂರು, ಬಿಗ್ಗನಹಳ್ಳಿ, ಕಂಬಿಹಳ್ಳಿ, ತಗಡೂರು, ಕದ್ರಿಮಿದ್ರಿ ವ್ಯಾಪ್ತಿಯ 90 ಜನರ ರೈತರ 13 ಎಕರೆಗೆ ಪರಿಹಾರ ನೀಡಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ. ನೀರಾವರಿಗೆ ಭೂಮಿ ವಶಪಡಿಸಿಕೊಂಡು 15 ವರ್ಷಗಳು ಕಳೆದರೂ ಪರಿಹಾರ ನೀಡಿಲ್ಲ, ಹಲವು ಬಾರಿ ಮನವಿ ಸಲ್ಲಿಸಿದರೂ ರೈತರ ಸಮಸ್ಯೆಗೆ ಜಿಲ್ಲಾಡಳಿತ ಇದುವರೆಗೂ ಸ್ಪಂದಿಸಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ರೈತರೊಂದಿಗೆ ಪರಿಹಾರದ ಬಗ್ಗೆ ಚರ್ಚಿಸಿ ಇತ್ಯರ್ಥಪಡಿಸದಿದ್ದಲ್ಲಿ ರಾಷ್ಟ್ರಪತಿ ಭವನದ ಮುಂದೆ ಪ್ರಾಣಬಿಡಲು ಸಿದ್ದರಿದ್ದೇವೆ. ಈ ಹಿಂದೆ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗಿತ್ತು ಎಂದು ಮಳಲೂರು ಏತನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸೋಮೇಗೌಡ ತಿಳಿಸಿದರು.

ರೈತರಿಗೆ ಹೆಚ್ಚಿನ ಬೆಲೆ ಪರಿಗಣಿಸಿ ಪರಿಹಾರ ಕೊಡಬೇಕು. ಭೂಸ್ವಾಧೀನ 2013 ಅಧಿನಿಯಮದ ಪ್ರಕಾರ 5 ಗುಂಟೆಯೊಳಗಿನ ಭೂಮಿಯನ್ನು ಪರಿಗಣಿಸಬಾರದು ಎಂದು ನಮೂದಿಸಲಿಲ್ಲ, ಈ ಹಿಂದೆ ಜಿಲ್ಲಾಡಳಿತ ರೈತರಿಗೆ ರೈಲ್ವೆ ಪರಿಹಾರದಲ್ಲಿ ಒಂದು ಗುಂಟೆಗಿಂತ ಮೇಲ್ಪಟ್ಟು ನೋಂದಣಿಯಾಗಿರುವ ಎಲ್ಲಾ ವ್ಯವಹಾರವನ್ನು ಪರಿಗಣಿಸುತ್ತೀರಿ, ರೈಲ್ವೆಗೆ ವಶಪಡಿಸಿಕೊಂಡಿರುವ ಭೂಮಿಗೆ ನೀಡಿರುವ ಪರಿಹಾರದಂತೆ ಮಳಲೂರು ಏತ ನೀರಾವರಿಗೆ ಪರಿಹಾರದಲ್ಲಿ ಅತಿಹೆಚ್ಚು ಬೆಲೆಯನ್ನು ಪರಿಗಣಿಸಬೇಕು ಎಂದು ಸೋಮೆಗೌಡ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ರಾಷ್ಟ್ರದಲ್ಲೇ ರೈತರ ಆತ್ಮಹತ್ಯೆ ಕರ್ನಾಟಕ ಎರಡನೇ ಸ್ಥಾನ; ಸಿ.ಟಿ ರವಿ
ಈ ವೇಳೆ ಮಳಲೂರು ಏತನೀರಾವರಿ ಹೋರಾಟ ಸಮಿತಿಯ ಮುಖಂಡರು, ಸದಸ್ಯರು, ಟಿ.ಎಲ್. ಗಣೇಶ್, ಧರ್ಮೇಗೌಡ, ರಘು ಭಾಗವಹಿಸಿದ್ದರು.





