ಚಿಕ್ಕಮಗಳೂರು | ಮಾಧವ ಗಾಡ್ಗೀಳ್ ವೈಜ್ಞಾನಿಕ ವರದಿ ಜಾರಿಗೆ ಪ್ರಗತಿಪರ ಸಂಘಟನೆ ಆಗ್ರಹ

Date:

ಜೀವನೋಪಾಯಕ್ಕಾಗಿ 2ರಿಂದ 3 ಎಕರೆ ಸಾಗುವಳಿ ಮಾಡಿಕೊಂಡಿರುವ ಬಡ ಸಾಗುವಳಿದಾರರನ್ನು ಹೊರತುಪಡಿಸಿ ಭೂಮಾಲೀಕರ ಅರಣ್ಯ ಒತ್ತುವರಿಯನ್ನು ಕಡ್ಡಾಯವಾಗಿ ತೆರವುಗೊಳಿಸಿ ಮಾಧವ ಗಾಡ್ಗೀಳ್ ವೈಜ್ಞಾನಿಕ ವರದಿ ಜಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ಪ್ರಗತಿಪರ ಸಂಘಟನೆಯಿಂದ ಚಿಕ್ಕಮಗಳೂರು ತಾಲೂಕು ಕಚೇರಿಯಿಂದ ಅಜ಼ಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನೆ ನಡೆಸಿದರು.

“ಸರ್ವಾಡಳಿತ ನಡೆಸುತ್ತ ಭಾರೀ ಭ್ರಷ್ಟಾಚಾರಕ್ಕೆ ದಾರಿ ಮಾಡಿ ಬಹುರಾಷ್ಟ್ರೀಯ ಕಂಪೆನಿಗಳ ಲೂಟಿಕೋರ ನೀತಿಯಿಂದಾಗಿ ಪರಿಸರ ಸಂಪೂರ್ಣ ವಿನಾಶದ ಅಂಚಿಗೆ ತಲುಪಿದೆ. ಇದೇ ಪ್ರಕೃತಿ ವಿಕೋಪಗಳಿಗೆ ಕಾರಣವಾಗುತ್ತಿದೆ. ಭಾರೀ ಬಂಡವಾಳಶಾಹಿಗಳು, ಭೂಗಳ್ಳರಿಂದ ಪ್ರಕೃತಿಯ ಮೇಲೆ ಅತ್ಯಾಚ್ಯಾರ ನಡೆಯುತ್ತಿದ್ದು, ಖಾಸಗೀಕರಣ, ಉದಾರೀಕರಣದ ಮೂಲಕ ದೇಶದ ಸಂಪತ್ತಿನ ಲೂಟಿಗೆ ದಾರಿ ಮಾಡಿಕೊಟ್ಟಿರುವ ಆಳುವ ಪಕ್ಷಗಳು ನೇರ ಹೊಣೆಗಾರರಾಗಿದ್ದಾರೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮಾಧವ ಗಾಡ್ಗೀಳ್ ವೈಜ್ಞಾನಿಕ ವರದಿ

ಸಂಘಟನೆಯ ಸುರೇಶ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಗಿರಿಶ್ರೇಣಿ, ಬೆಟ್ಟಗುಡ್ಡಗಳಲ್ಲಿ ಜೀವವೈವಿಧ್ಯ ಸೃಷ್ಟಿಸುವ ಪಶ್ಚಿಮಘಟ್ಟಗಳಲ್ಲಿ ರೆಸಾರ್ಟ್, ಹೋಂ ಸ್ಟೇ, ಹೆದ್ದಾರಿಗಳಿಗೆ ಅನುಮತಿ ನೀಡಿ ಬೆಟ್ಟಗುಡ್ಡಗಳು ನಾಶವಾಗಿ ಪ್ರಾಕೃತಿಕ ಸಮತೋಲನದಿಂದ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಾಗಿ ಮಾನವ ಸಂತಾನ ಒಳಗೊಂಡಂತೆ ಇಡೀ ಜೀವಸಂಕುಲವೇ ವಿನಾಶದ ಅಂಚಿಗೆ ಬಂದುನಿಂತಿವೆ. ಪ್ರಕೃತಿ ನಾಶದ ಲಾಭವನ್ನು ಬಂಡವಾಳಶಾಹಿಗಳು ಅನುಭವಿಸಿದರೆ, ಅದರ ನಷ್ಟ ಮತ್ತು ಆಕ್ರೋಶವನ್ನು ಜನಸಾಮಾನ್ಯರು ಅನುಭವಿಸುವಂತಾಗಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“2009-10ರಲ್ಲಿ ಸರ್ಕಾರವೇ ನೇಮಿಸಿದ್ದ ಪರಿಸರ ತಜ್ಞ ಡಾ. ಮಾಧವ ಗಾಡ್ಗೀಳ್ ವರದಿಯನ್ನು ತಿರಸ್ಕಾರ ಮಾಡಲಾಯಿತು. ಬದಲಿಗೆ ಬಂಡವಾಳಶಾಹಿಗೆ ಅನುಕೂಲವಾದ ಕಸ್ತೂರಿ ರಂಗನ್ ವರದಿಯನ್ನು ತಯಾರು ಮಾಡಿಸಲಾಯಿತು. ಪ್ರಾಕೃತಿಕ ಅವಘಡಗಳಿಗೆ ಮಾಧವ ರಾಷ್ಟ್ರೀಯ ವರದಿಯನ್ನು ತಿರಸ್ಕರಿಸಿದ್ದೇ ಕಾರಣ ಎಂಬುದು ಸ್ಪಷ್ಟವಾಗುತ್ತಿದೆ. ಕೇರಳದಿಂದ ಗುಜರಾತ್‌ವರೆಗೆ ವ್ಯಾಪಿಸಿರುವ ಪಶ್ಚಿಮಘಟ್ಟ ಪ್ರದೇಶವನ್ನು ಕಾಪಾಡಬೇಕಾದರೆ ಗಾಡ್ಗೀಳ್ ವರದಿ ಜಾರಿಯಾಗಬೇಕಾಗಿದೆ. ಜತೆಗೆ ಕರ್ನಾಟಕದ ಅರಣ್ಯ ಸಚಿವರು ಅರಣ್ಯ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ತೀವ್ರಗೊಳಿಸಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಗಾಜನೂರು ತುಂಗಾ ಡ್ಯಾಮ್‌ನಲ್ಲೂ ಕ್ರಸ್ಟ್‌ಗೇಟ್ ರೋಪ್ ಜಾಮ್; ಅನಾಹುತವಾದಲ್ಲಿ ಹೊಣೆ ಯಾರು?

ಸಂದರ್ಭದಲ್ಲಿ ಉಮೇಶ್ ಕುಮಾರ್, ಜೆ ಡಿ ಪರಮೇಶ್, ಸುರೇಶ ಗಾಡಿಪೇಟೆ, ಪದ್ಮನಾಭ, ಉಮೇಶ್ ಕೆಳವಾಲ, ಸುರೇಶ ಸಿ ಬಿ, ಪ್ರೇಮ್ ಕುಮಾರ್, ಪೂರ್ಣೇಶ್, ನಿಂಗಯ್ಯ, ಪುಟ್ಟಸ್ವಾಮಿ ಕಣತಿ, ಸುಂದರೇಶ್, ಗುರುವಯ್ಯ, ಜೆ ಡಿ ಕುಮಾರ್ ಸೇರಿದಂತೆ ಬಹುತೇಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...