ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಜ. 18ರಂದು ಭಾನುವಾರ ಸಂಜೆ 5.30ಕ್ಕೆ ಸುಗಮ ಸಂಗೀತ. ಭರತನಾಟ್ಯ ಹಾಗೂ ಕಥಕ್ ನೃತ್ಯ ಸಂಭ್ರಮವನ್ನು ಏರ್ಪಡಿಸಲಾಗಿದೆ ಎಂದು ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.
ಶ್ರೀ ರಂಗರಾಮ್ ಅರ್ಟ್ಸ್ ಫೌಂಡೇಶನ್ ನ ವಾರ್ಷಿಕ ಕಲಾ ಉತ್ಸವವನ್ನು ಸಂಸ್ಥೆಯ ಹೆಚ್ ಆರ್ ಸುರೇಶ್ ಅಧ್ಯಕ್ಷತೆಯಲ್ಲಿ ವಾಣಿಜ್ಯೋದ್ಯಮಿ ಡಿ.ಎಚ್. ನಟರಾಜ್ ಉದ್ಘಾಟನೆ ನಡೆಸುತ್ತಾರೆ. ಸುಗಮ ಸಂಗೀತ ವಿಭಾಗದಲ್ಲಿ ದೇಶ ವಿದೇಶದಲ್ಲಿ ಕಾರ್ಯಕ್ರಮ ನೀಡಿದ್ದಾರೆ.ಹಾಗೆಯೇ, ಗಾಯಕ ಎಚ್. ಎಸ್. ಕಿರಣ್ ಮತ್ತು ತಂಡದವರು ಹಾಡಲಿದ್ದಾರೆ. ಡಾ.ವಿದ್ಯಾಲಕ್ಷ್ಮಿ ಎಂ.ಎಸ್ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು, ಶಿಷ್ಯವೃಂದ ಭರತನಾಟ್ಯ ಸಮೂಹ ಪ್ರದರ್ಶನ ನೀಡಲಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ರಾಜ್ಯ ಮಟ್ಟದ ಆಲೂಗೆಡ್ಡೆ ಮೇಳ ಆಯೋಜನೆ; ಸಂಸದ ಶ್ರೇಯಸ್ ಪಟೇಲ್
ಬೆಂಗಳೂರಿನ್ನ ಪ್ರಸಿದ್ಧ ನೂರ್ಪು ಪರ್ಫಾರ್ಮಿಂಗ್ ಅರ್ಟ್ಟ ಸೆಂಟರ್ ನ ಶ್ರೀಹರಿ ನೂಪುರ್ ಶ್ರೀಮತಿ ಚೇತನಹರಿ ಮತ್ತು ಅವರ ರ ಶಿಷ್ಯರು/ ಕಥಕ್ ಪ್ರದರ್ಶನ ನಡೆಸಿಕೊಡಲಿದ್ದಾರೆ ಎಂದು ರಂಗರಾಮ್ ಅರ್ಟ್ಸ್ ಫೌಂಡೇಶನ್ ನ ಸಂಸ್ಥಾಪಕಿ ಡಾ. ವಿದ್ಯಾಲಕ್ಷ್ಮಿ ಎಂ ಎಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ವೇಳೆ ಸಾಹಿತಿ ಡಾ. ಬೆಳವಾಡಿ ಮಂಜುನಾಥ, ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್. ಕಿರಣ್ ಉಪಸ್ಥಿತರಿದ್ದರು.





