ಚಿಕ್ಕಮಗಳೂರು l ಅರಣ್ಯ ಕಾಯ್ದೆಯಿಂದ ಮಲೆನಾಡಿನ ಜನತೆಯ ಬದುಕುಗಳು ಅತಂತ್ರ

Date:

ಅರಣ್ಯ ಕಾಯ್ದೆ ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿ ತಿರಸ್ಕಾರ ಮಾಡಿದ್ದರೂ ಕೂಡಾ ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ. ಇದರಿಂದ ಮಲೆನಾಡಿನ ಜನ ಆತಂಕದಿಂದ ಬದುಕುವಂತಾಗಿದೆ.

ಅರಣ್ಯ ಒತ್ತುವರಿ ಮಾಡಿದವರೆಂದು ಮಲೆನಾಡಿನ ರೈತರು ಕೃಷಿ ಮಾಡಿಕೊಂಡ ಭೂಮಿಯಿಂದ ತೆರವುಗೊಳಿಸಲು ಅರಣ್ಯ ಇಲಾಖೆ ತಯಾರಿ ನಡೆಸಿದ್ದಾರೆ. ಈ ಒತ್ತುವರಿ ತೆರವು ಹಾಗೂ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಮಲೆನಾಡಿನ ಜನತೆ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದೆ.

Screenshot 2024 11 12 12 33 03 66 680d03679600f7af0b4c700c6b270fe7

ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಜನ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಸೂರಿಗಾಗಿ ಹಾಗೂ ಈಗಾಗಲೇ ಸರ್ಕಾರಿ ಭೂಮಿಯಲ್ಲಿ ಮನೆ, ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ನಿವೇಶನ ಹಕ್ಕುಪತ್ರಕ್ಕಾಗಿ, ಎಷ್ಟೋ ಬಾರಿ ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ಭೂಮಿಯನ್ನು ಸೆಕ್ಷನ್ 4 ಎಂದು ಘೋಷಿಸಿ ಮೀಸಲು ಅರಣ್ಯ ಎಂದು ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಲೆನಾಡಿನಲ್ಲಿ ಸೆಕ್ಷನ್ 4 ಅಂದ್ರೆ ಏನು?

ಯಾವುದೇ ಸರ್ಕಾರಿ ಭೂಮಿಯನ್ನು ರಾಜ್ಯ ಸರ್ಕಾರಗಳು ಮೀಸಲು ಅರಣ್ಯ ಮಾಡಲು ಉದ್ಯೋಷಣೆ ಹೊರಡಿಸುವುದೇ ಸೆಕ್ಷನ್ 4 ಆಗಿದೆ. 2011ರಿಂದ ಮಲೆನಾಡಿನ ಬಹುತೇಕ ಕಂದಾಯ ಭೂಮಿಯನ್ನು ಸರ್ಕಾರ ಸೆಕ್ಷನ್ 4 ಎಂದು ಘೋಷಿಸಿದೆ. ಪ್ರತಿ ಗ್ರಾಮದಲ್ಲೂ ನೂರಾರು ಎಕರೆ ಕಂದಾಯ ಭೂಮಿ ಸೆಕ್ಷನ್ 4 ಎಂದು ಘೋಷಿಸಿ ಗಡಿ ನಿರ್ಮಿಸಿದ್ದಾರೆ. 

Screenshot 2024 11 12 12 33 57 99 680d03679600f7af0b4c700c6b270fe7

ಅರಣ್ಯ ಇಲಾಖೆ ಕನಿಷ್ಠ ಗ್ರಾಮಗಳ ಜನರನ್ನೂ ಕೇಳದೆ ಬಡವರ ನಿವೇಶನ, ರೈತರ ಕೃಷಿ ಭೂಮಿ, ಕೆರೆ, ಬಾವಿ, ರಸ್ತೆ ರೈತರ ಹಿಡುವಳಿಯನ್ನೂ ಬಿಡದೆ ಸೆಕ್ಷನ್ 4 ಎಂದು ಘೋಷಣೆ ಹೊರಡಿಸಿದೆ. ಮಲೆನಾಡಿನ ಜನತೆ ಸತ್ತರೂ ಸಮಾಧಿ ಮಾಡಲು ಅರಣ್ಯ ಇಲಾಖೆ ಒಪ್ಪಿಗೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಮೀಸಲು ಅರಣ್ಯ ಮಾಡಿದರೆ ಜನರಿಗೆ ಆಗುವ ತೊಂದರೆಗಳೇನು? ಮೀಸಲು ಅರಣ್ಯ ಎಂದು ಘೋಷಿಸಿದರೆ ಅಂತಹ ಭೂಮಿಯಲ್ಲಿ ಮಾನವ ಹಸ್ತಕ್ಷೇಪವನ್ನು ಸಂಪೂರ್ಣ ನಿಷೇದಿಸಿ, ನಿರ್ಬಂಧ ವಿಧಿಸಲಾಗುತ್ತದೆ. ಯಾವೂದೇ ಹೊಸ ಮಂಜೂರಾತಿ ಮಾಡಲಾಗುವುದಿಲ್ಲ, ರಸ್ತೆ ನಿರ್ಮಿಸುವಂತಿಲ್ಲ, ಸೊಪ್ಪು, ಸೆದೆ ಸೇರಿದಂತೆ ಸಂಪೂರ್ಣ ಅರಣ್ಯ ಉತ್ಪನ್ನಗಳನ್ನು ಉಪಯೋಗಿಸುವಂತಿಲ್ಲ. ಬೆಂಕಿ ಬಳಸುವಂತಿಲ್ಲ, ಹೊಸ ಕಟ್ಟಡ ನಿರ್ಮಿಸುವಂತಿಲ್ಲ, ವಿದ್ಯುತ್ ತಂತಿ ಎಳೆಯುವ ಹಾಗಿಲ್ಲ ಅಂತಹ ಜಾಗದಲ್ಲಿ ಹರಿಯುವ ನದಿಗಳಲ್ಲಿ ಮೀನು ಹಿಡಿಯುವುದೂ ಕೂಡಾ ಅಪರಾಧವಾಗುತ್ತದೆ.

Screenshot 2024 11 12 12 34 42 50 680d03679600f7af0b4c700c6b270fe7

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ತೋಟದಲ್ಲಿ ಪ್ರತ್ಯಕ್ಷವಾದ ಆನೆ ಗುಂಪು: ಜೀವ ಭಯದಿಂದ ಓಡಿದ ಕಾರ್ಮಿಕರು

ಕುದುರೆ ಮುಖ ರಾಷ್ಟ್ರೀಯ ಉದ್ಯಾನದ ಹೆಸರಲ್ಲಿ ಜನರ ಎತ್ತಂಗಡಿಯಾಗುತ್ತಿದೆ. ಒತ್ತುವರಿ ಖುಲ್ಲಾ ಹೆಸರಲ್ಲಿ ಸಾವಿರಾರು ರೈತರ ಹೆಸರು ಪಟ್ಟಿ ಮಾಡಿಕೊಂಡು ಅರಣ್ಯ ಇಲಾಖೆ ಕೋರ್ಟ್ ಆದೇಶದ ಹೆಸರಲ್ಲಿ ನಾವು ನೆಟ್ಟು ಬೆಳೆಸಿದ ಗಿಡ ಮರಗಳನ್ನು ಕಡಿಯಲು ತಯಾರಿ ನಡೆಸಿದೆ. ಕೇಂದ್ರ ಸರ್ಕಾರ ಜಗತ್ತಿನ ಪರಿಸರ ಸಮತೋಲನಕ್ಕೆ, ಪರಿಸರ ಉಳಿವಿಗಾಗಿ ಪರಿಸರ ಸೂಕ್ಷ್ಮ ವಲಯ, ಬಫರ್ ಜೋನ್ ಹೆಸರಲ್ಲಿ ಇಡೀ ಮಲೆನಾಡನ್ನೇ ಖಾಲಿ ಮಾಡಿಸುವ ಕಸ್ತೂರಿ ರಂಗನ್ ವರದಿ ಜಾರಿಗೆ ಅಧಿಸೂಚನೆ ಹೊರಡಿಸಿದೆ.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...