ಮಹಿಳೆಯಗೆ ಕಿರುಕುಳ ನೀಡಿದರಿಂದ ಸಾವನಪ್ಪಿದ್ದಾರೆಂಬ ಆರೋಪ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಮೃತ ಮಹಿಳೆ ರಾಜೇಶ್ವರಿ ಎಂಬಾತೆ, ಗುಳೆದ ಗುಡ್ಡದ ವಾಸಿಯಾದ ದೊಡ್ಡಪ್ಪ ಕಂಠಿ ಎನ್ನುವರಿಗೆ 14 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ದಿ:22.10.2025 ರಂದು ಮಹಿಳೆ ಸಾವಿಗೀಡಾಗಿದ್ದಾರೆ. ಮೃತ ಮಹಿಳೆಯ ಪತಿ ಗುಳೇದಗುಡ್ಡದ ನಿವಾಸಿ, ಬಸವರಾಜ, ಮಾನಸಿಕ ಹಿಂಸೆ ಮತ್ತು ಕಿರುಕುಳ ಕಾರಣವಿದ್ದು ಆತನ ಕಿರುಕುಳ ತಾಳಲಾರದೇ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮೂಡಿಗೆರೆ ಕ್ಷೇತ್ರ; ಅವೈಜ್ಞಾನಿಕ ರಸ್ತೆ, ಅಭಿವೃದ್ಧಿ ಶೂನ್ಯ; ಪರಾಜಿತ ಅಭ್ಯರ್ಥಿ ದೀಪಕ್ ದೊಡ್ಡಯ್ಯ
ಚಿಕ್ಕಮಗಳೂರು ಸರ್ಕಾರಿ ಅಸ್ವತ್ರೆಗೆ ಹೋಗಿ ಅಲ್ಲಿ ಶವಾಗಾರದಲ್ಲಿದ್ದ ಮಹಿಳೆಯ ಶವವನ್ನು ನೋಡಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾವಿನ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ತನಿಖೆ ಮಾಡಿ ನಮಗೆ ನ್ಯಾಯ ದೊರಕಿಸಿ ಕೊಡುವಂತೆ ದೂರು ಮಹಿಳೆಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ, ಬಸವರಾಜ್ ಶೀಲವಂತರ್ ಮತ್ತು ಗೌರಿ ಎಂಬುವರ ಮೇಲೆ ಯುಡಿಆರ್ ನಂ:57-2025 ಕಲಂ 194 (3)(IV) ರೀತ್ಯಾ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ.





