ಚಿಕ್ಕನಾಯಕನಹಳ್ಳಿ | ಕಾಡುಹಂದಿ ಅಡ್ಡಬಂದು ಅಪಘಾತ ; ಗುಂಡಿಗೆ ಉರುಳಿಬಿದ್ದ ಪ್ರಯಾಣಿಕರ ಆಟೋ

Date:

 ಸೋಮವಾರ ಸಂಜೆ 7.00 ಗಂಟೆಯ ಸುಮಾರಿನಲ್ಲಿ ತರಬೇನಹಳ್ಳಿ-ಗೋಡೆಕೆರೆ ಗೇಟ್ ಮಧ್ಯದಲ್ಲಿ ಸಿಗುವ ಅರಣ್ಯ ಇಲಾಖೆಯ ನರ್ಸರಿ ಬಳಿ ಕಾಡುಹಂದಿ ಅಡ್ಡಬಂದ ಪರಿಣಾಮ ಚಿಕ್ಕನಾಯಕನಹಳ್ಳಿ ಕಡೆ ಸಾಗುತ್ತಿದ್ದ ಪ್ರಯಾಣಿಕರ ಆಟೋ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಗುಂಡಿಗೆ ಬಿದ್ದಿದೆ. ಆಟೋದಲ್ಲಿ ಚಾಲಕ ಚಂದ್ರಶೇಖರ್ ಸೇರಿದಂತೆ ಮೂವರು ಗಾರ್ಮೆಂಟ್ಸ್ ನೌಕರ ಮಹಿಳೆಯರು ಪ್ರಯಾಣಿಸುತ್ತಿದ್ದರು. 

1000758419

ಕಂದಿಕೆರೆ-ಸಾದರಹಳ್ಳಿ ಮೂಲದ ಆಟೋ ಚಾಲಕ ಚಂದ್ರಶೇಖರ್(35) ಹಾಗೂ ಗೌರಸಾಗರ-ತಿಮ್ಮನಹಳ್ಳಿ ಗ್ರಾಮದ ವಸಂತಮ್ಮ (33), ಮಂಜುಳ(29), ಶೋಭಾ(30) ಅಪಘಾತದಲ್ಲಿ ಗಾಯಗೊಂಡಿದ್ದಾರೆ. 

ಗಾಯಾಳುಗಳು ಚಿಕ್ಕನಾಯಕನಹಳ್ಳಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಿದ ಡಾ.ಉಮೇಶ್, ಆಟೊದಲ್ಲಿದ್ದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸಿ, ನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಅದನ್ನು ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1000758418

ಕಿಬ್ಬನಹಳ್ಳಿ ಕ್ರಾಸ್ ಬಳಿಯಿರುವ ಮ್ಯಾಫ್ ಗಾರ್ಮೆಂಟ್ಸ್ ಹೆಸರಿನ ಉಡುಪು-ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡಲು ಚಿಕ್ಕನಾಯಕನಹಳ್ಳಿ, ಹುಳಿಯಾರು, ತಿಮ್ಮನಹಳ್ಳಿ, ಕಂದಿಕೆರೆ ಹಾಗೂ ಶೆಟ್ಟಿಕೆರೆ ಭಾಗದಿಂದ ನಿತ್ಯ ಬೆಳಗ್ಗೆ ಸಾವಿರಾರು ಮಹಿಳೆಯರು ತೆರಳುತ್ತಾರೆ. ಅವರನ್ನು ಸಾಗಿಸಲು ಇರುವ ಏಕೈಕ ವ್ಯವಸ್ಥೆಯಂದರೆ, ಖಾಸಗಿ ಆಟೋಗಳು. ಆ ಆಟೋ ಚಾಲಕರು ಕೆಲಸದ ಸಮಯಕ್ಕೆ ಸರಿಯಾಗಿ ಫ್ಯಾಕ್ಟರಿಗೆ ತಲುಪುವುದಕ್ಕೋಸ್ಕರ ಪೈಪೋಟಿಯ ವೇಗದಲ್ಲಿ ಆಟೊ ಚಾಲನೆ ಮಾಡುತ್ತಾರೆ.‌ ಹೀಗಾಗಿ, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಕಿಬ್ಬನಹಳ್ಳಿ-ಚಿ ನಾ ಹಳ್ಳಿ-ಹುಳಿಯಾರು ಮಾರ್ಗದ ರಸ್ತೆಯಲ್ಲಿ ವಿಪರೀತ ವಾಹನ ದಟ್ಟಣೆ ಉಂಟಾಗುತ್ತಿದೆ. ಈ ರಸ್ತೆಯಲ್ಲಿ ಅಪಘಾತಗಳಿಗೆ ಕಾರಣವಾಗುವ ಹಲವು ಮುಖ್ಯ ಅಂಶಗಳಲ್ಲಿ ಇದೂ ಒಂದು ಮುಖ್ಯ ಅಂಶವಾಗಿದೆ.

ಆಟೊ ಅಧ್ಯಕ್ಷ ಮಂಜುನಾಥ್ ಆಕ್ರೋಶ :

1000758387

ನಿರುದ್ಯೋಗದ ಸಮಸ್ಯೆಯಿಂದ ‌ಕುಟುಂಬ ನಿರ್ವಹಣೆಗಾಗಿ ಪಡಿಪಾಟಲು ಪಡುತ್ತಿರುವ ಗ್ರಾಮೀಣ ಭಾಗದ ಮಹಿಳೆಯರು, ತಮ್ಮ ಆರ್ಥಿಕ ಸ್ವಾವಲಂಬನೆಗೆ ನೆಚ್ಚಿಕೊಂಡಿರುವ ಏಕೈಕ ಉದ್ಯೋಗವೆಂದರೆ, ಗಾರ್ಮೆಂಟ್ಸ್ ಕೆಲಸ. ಕಿಬ್ಬನಹಳ್ಳಿ ಸನಿಹದಲ್ಲೇ ಇರುವ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿ ದುಡಿಯುವ ಮಹಿಳೆಯರಿಗೆ ಸಕಾಲಕ್ಕೆ ಒದಗಿಬರುವ ಸಾರಿಗೆಯೇ ನಮ್ಮ ಆಟೊ-ರಿಕ್ಷಾಗಳು. ಹಾಗಾಗಿ, ಅವರು ದಿನಾಬೆಳಗ್ಗೆ ಮತ್ತು ಸಂಜೆ ಆಟೊಗಳಲ್ಲೇ ಕೆಲಸಕ್ಕಾಗಿ ಪ್ರಯಾಣ ಮಾಡುತ್ತಾರೆ. ಮತ್ತು ಆಟೊರಿಕ್ಷಾ ದುರಂತವೇನೆಂದರೆ, ಅವು ನಿಗದಿತ ಸಮಯಕ್ಕೆ ಸರಿಯಾಗಿ ತಲುಪಲು ವೇಗದ ಪೈಪೋಟಿಗಿಳಿಯುವುದು. ಹೀಗಾಗಿ, ಏಕಾಏಕಿ ಅಡ್ಡಬರುವ ಗುಡ್ಡಗಾಡು ಪ್ರಾಣಿಗಳು ಅಪಘಾತಕ್ಕೆ ಬಲಿಯಾಗುವುದಲ್ಲದೆ ಪ್ರಯಾಣಿಕರು ಬಲಿಯಾಗುತ್ತಾರೆ. ಇದು, ಆಟೊಚಾಲಕ ಮತ್ತು ಮಾಲೀಕ ಹಾಗೂ ಪ್ರಯಾಣಿಕ ಎಲ್ಲರ ದುರ್ದೈವ ಎಂದು ಆಟೊ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ್ ವ್ಯವಸ್ಥೆಯ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಪುರಸಭಾ ಸದಸ್ಯ ಮಹಮದ್ ಹುಸೇನ್ ಒತ್ತಾಯ :

1000758386

ಗಾರ್ಮೆಂಟ್ಸ್ ಫ್ಯಾಕ್ಟರಿಯ ನೌಕರರಿಗೆ ಸೂಕ್ತ ಪ್ರಯಾಣದ ವ್ಯವಸ್ಥೆಯನ್ನು ಆಯಾಯಾ ಫ್ಯಾಕ್ಟರಿಗಳೇ ಕಲ್ಪಿಸಿಕೊಡುವಂತಾಗಬೇಕು. ಅಕಸ್ಮಾತ್ ಅಪಘಾತಗಳಾದಾಗ ಶೀಘ್ರವೇ ಆ್ಯಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಮತ್ತು ಚಿಕಿತ್ಸಾ ಭತ್ಯೆ, ವಿಮಾ ಸೌಲಭ್ಯ ಒದಗಿಸಿಕೊಡಬೇಕು. ಅಂದಾಜಿನಂತೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆ ತಾಲ್ಲೂಕುಗಳಿಗೆ ಸೇರಿದ ಕಿಬ್ಬನಹಳ್ಳಿಯ ಸುತ್ತಮುತ್ತ ಇರುವ ಬಹುತೇಕ ಗ್ರಾಮಗಳಿಂದ ಸುಮಾರು 3000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಫ್ಯಾಕ್ಟರಿಗಳಿಗೆ ನಿತ್ಯ ಕೆಲಸಕ್ಕೆ ಬರುತ್ತಾರೆ. ಇವರೆಲ್ಲರ ಸುರಕ್ಷಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಯಾರೂ ಕಾಳಜಿ ವಹಿಸುತ್ತಿಲ್ಲ. ಇವರಲ್ಲಿನ ಹೆಚ್ಚಿನವರು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಬಡ ಹೆಣ್ಣುಮಕ್ಕಳು. ನಿತ್ಯದ ಮನೆ ಕೆಲಸ ಮುಗಿಸಿ ಫ್ಯಾಕ್ಟರಿಗೆ ದುಡಿಯಲು ಬರುವ ಮತ್ತು ಡ್ಯೂಟಿ ಮುಗಿದ ಮೇಲೆ ಮನೆ-ಮಕ್ಕಳು-ಕುಟುಂಬ ಸೇರಲು ಅವಸರಿಸುವ ಇವರ ಸುರಕ್ಷಿತ ಪ್ರಯಾಣದ ಬಗ್ಗೆ ಕಟ್ಟುನಿಟ್ಟಾದ ಎಚ್ಚರ ವಹಿಸಬೇಕಿದೆ. ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಮಹಿಳಾ ಹಕ್ಕುಗಳ ರಕ್ಷಣಾ ಆಯೋಗಗಳು ತಕ್ಷಣ ಇತ್ತ ಗಮನ ಹರಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು ಕಡೇಪಕ್ಷ, ನಮ್ಮ ಗ್ರಾಮೀಣ ಮಹಿಳೆಯರ ಆರ್ಥಿಕ-ಸ್ವಾವಲಂಬನೆಗೆ ಪುಷ್ಟಿ ನೀಡುವಂಥ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿಯೇ ಕಲ್ಪಿಸಿಕೊಡಲು ಪ್ರಯತ್ನಿಸಬೇಕು ಎಂದು ಕರ್ನಾಟಕ ರಾಜ್ಯ ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರ ಸಂಘದ ರಾಜ್ಯಕಾರ್ಯದರ್ಶಿ ಮತ್ತು ಪುರಸಭಾ ಸದಸ್ಯ ಮಹಮದ್ ಹುಸೇನ್ ಒತ್ತಾಯಿಸಿದರು.

ವರದಿ – ಸಂಚಲನ

ಚಿಕ್ಕನಾಯಕನ ಸೀಮೆಯಿಂದ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...