ಚಿಕ್ಕನಾಯಕನಹಳ್ಳಿ | ಸಡಗರದಿಂದ ಜರುಗಿದ ಹಳೆಯೂರು ಆಂಜನೇಯ ಬ್ರಹ್ಮರಥೋತ್ಸವ

Date:

ಎಪಿಗ್ರಾಫಿಯ ಆಫ್ ಕರ್ನಾಟಕದಲ್ಲಿ ದಾಖಲಿರುವ ಹಳೆಯೂರು ಆಂಜನೇಯ ದೇವಸ್ಥಾನವು ದ್ರಾವಿಡ ಶೈಲಿಗೆ ಹೋಲುವಂಥದ್ದು. ಇದು 800 ವರ್ಷಗಳಷ್ಟು ಹಳೆಯದು ಎಂದು ಅಂದಾಜಿದೆ. ಗತಕಾಲದ ಇಂಥ ಇತಿಹಾಸ ಪ್ರಸಿದ್ಧ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹಳೆಯೂರು ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಇತ್ತೀಚೆಗೆ ಜರುಗಿತು.

ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ತೇರುಬೀದಿಯುದ್ದಕ್ಕೂ ಭಕ್ತಾದಿಗಳ ಪೂಜೆ-ಪುನಸ್ಕಾರಗಳನ್ನು ಹಾದು ನೆಹರೂ ಸರ್ಕಲ್’ನಲ್ಲಿ ಗದ್ದಿಗೆಯಾಯಿತು. ಇಡೀ ದಿನ ತೇರುಬೀದಿಯ ಉದ್ದಕ್ಕೂ ತುಂಬಿ ತುಳುಕುತ್ತಿದ್ದ ಶ್ರದ್ಧಾಭಕ್ತಿಗೆ ಇಡೀ ಊರೇ ಸಾಕ್ಷಿಯಾಗಿತ್ತು. ನೆಹರೂ ಸರ್ಕಲ್’ನಿಂದ ಮರಳಿ ದೇವಸ್ಥಾನದವರೆಗೂ ತೇರನ್ನು ಎಳೆಯುವ ರಥೋತ್ಸವ ಪ್ರಾರಂಭವಾಗಿ, ಕೊನೆಗೆ ಸ್ವಸ್ಥಾನ ತಲುಪಿತು.

ಹಳೆಯೂರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಂದರ್ಭದಲ್ಲಿ, ಕ್ಷೇತ್ರದ ಪ್ರಮುಖರು, ಪುರಸಭಾ ಪ್ರಮುಖರು, ತಹಶೀಲ್ದಾರರು, ಪೊಲೀಸ್ ಪ್ರಮುಖರು, ದೇವಸ್ಥಾನ ಭಕ್ತಮಂಡಳಿ ಪ್ರಮುಖರು ಹಾಗೂ ಮುಜರಾಯಿ ಅಧಿಕಾರಾದಿ ಪ್ರಮುಖರು ಉಪಸ್ಥಿತರಿದ್ದರು.

ಹಳೆಯೂರು ಭಾಗದ ಸುತ್ತಮುತ್ತಲೆಲ್ಲ ಏಕಾದಶಿ ಪರಿಶೆ ಎಂದೇ ಹೆಸರಾಗಿರುವ ಹಳೆಯೂರು ಆಂಜನೇಯ ಸ್ವಾಮಿ ಜಾತ್ರೆಯಲ್ಲಿ, ನೆಲಸಂಸ್ಕೃತಿ, ಶ್ರಮಸಂಸ್ಕೃತಿಗಳ ಜನಸಂಪದ ಸಂಭ್ರಮಿಸುತ್ತದೆ. ತೇರು ಕಟ್ಟುವ, ತೇರನ್ನು ಸಿಂಗರಿಸುವ, ತೇರಿನ ರಥ ಚಕ್ರಗಳಿಗೆ ಸನ್ನೆ ಕೊಡುವ, ತೇರನ್ನು ಎಳೆಯುವ, ಇತ್ಯಾದಿ ಬಹುತೇಕ ಎಲ್ಲ ಕೆಲಸಗಳನ್ನು ಪರ್ಯಾಯ ಸಾಂಸ್ಕೃತಿಕ ಧಾರೆಗಳ ಜನಸಮೂಹ ಸಂಭ್ರಮಿಸುತ್ತಾ ನೆರವೇರಿಸುತ್ತದೆ. ಕಾಲ, ದೇಶ, ಸಮಾಜ, ಸಮೂಹಗಳಿಗೆ ಗ್ರಾಮೀಣ ಕರ್ನಾಟಕದ ಈ ವಿಶ್ವಬಂಧುರತೆ ಸಂದೇಶ ಕೂಡಿಬಾಳುವ ಸಾಮರಸ್ಯದ ತಿಳಿವನ್ನು ಜಗತ್ತಿಗೆ ಸಾರುತ್ತಿರುವಂತಿದೆ.

ಹಳೆಯೂರು 1

ದೇವಸ್ಥಾನ ಸಮಿತಿ ಹಾಗೂ ಜಾತ್ರಾ ಸಮಿತಿಗಳವರು ಊರಿನ ದಾಸಯ್ಯ ‌ಕುಲದವರಿಗೆ ಬಿನ್ನಕೊಟ್ಟು ಆಹ್ವಾನಿಸಿದ ನಂತರ ಆರಂಭಗೊಳ್ಳುವ ಜಾತ್ರೆ, ಹತ್ತು ದಿನಗಳ ಕಾಲ ನಡೆಯುತ್ತದೆ. ಜಾತ್ರೆಯ ಈ ಹತ್ತೂದಿನಗಳ ಕಾಲ ಪ್ರತಿದಿನವೂ ಉತ್ಸವ, ಪ್ರಕಾರೋತ್ಸವ, ವಿಶೇಷ ಪೂಜೆ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಇತ್ಯಾದಿ ಸೇವೆಗಳು ಸ್ವಾಮಿಯವರಿಗೆ ಸಲ್ಲುತ್ತವೆ.

ನಿತ್ಯ ಸರ್ವಪ್ರಕಾರದ ವಿಧಿ-ವಿಧಾನಗಳ ಅನುಸಾರ ಸಾಂಗೋಪಾಂಗವಾಗಿ ಧಾರ್ಮಿಕ ಆಚರಣೆಗಳು ಜರುಗುತ್ತವೆ. ಹೀಗೆ, ಅಭಯಹಸ್ತ ಹಳೆಯೂರು ಆಂಜನೇಯ ಸ್ವಾಮಿಯ ಏಕಾದಶಿ ಜಾತ್ರೆ ಸಡಗರ-ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ.

ತೇರನೆಳೆಯುತಾರೆ ತಂಗಿ, ತೇರನೆಳೆಯುತಾರೆ!!

ಜಾತ್ರೆ, ಪರಿಸೆ, ಉರೂಸು, ಉತ್ಸವಗಳು ಇಂಡಿಯಾದ ಶ್ರಮಣಧಾರೆಗಳು ಮುಂದಿಟ್ಟ, ನಿಸರ್ಗ ವಿವೇಕವನ್ನು ಮರುಸ್ಥಾಪಿಸುವ ಅವಕಾಶಗಳನ್ನು ಪ್ರಜ್ವಲಿಸುತ್ತವೆ! ಈ ನೆಲದ ಸಮೂಹಗಳು ಬಾಳುತ್ತಿರುವ ಜೀವನ ಮೀಮಾಂಸೆ, ಜನರ ಬದುಕಿನ ಜೀವನಾಡಿಯಾದ ಬಹುತ್ವದ್ದು.

ಹೀಗಾಗಿ, ಸಮೂಹದೊಳಗಿನ ವಿವೇಕ, ಬದುಕನ್ನು ಸಹನೀಯಗೊಳಿಸಿಕೊಳ್ಳಲು ತತ್ವಪದ, ಗುರುಕಾರ್ಯ, ಗುರುದೀಕ್ಷೆ, ಮುಂತಾಗಿ ಜಾತ್ರೆ, ಪರಿಸೆ, ಉರುಸು, ಉತ್ಸವಗಳನ್ನು ಸಂಭ್ರಮಿಸುತ್ತದೆ!

ನೆಲಮೂಲ ಸಮುದಾಯಗಳಿಗೆ ಇದು, ಅಧಿಕಾರದಾಚೆಗಿನ ಅಧಿಕಾರವಿದ್ದಂತೆ.

ವರದಿ: ಸಂಚಲನ, ಚಿಕ್ಕನಾಯಕನ ಸೀಮೆಯಿಂದ

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...