ಚಿಕ್ಕನಾಯಕನಹಳ್ಳಿ | ಸಮಗ್ರ ಚಿಕಿತ್ಸಾ ಅಭಿಯಾನ; ಕರುಣಾ ಕಾರ್ಯಕ್ರಮ ಚಾಲ್ತಿ ; ಡಾ ರೆ ಮಾ ನಾಗಭೂಷಣ್

Date:

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬಹುತೇಕ ಎಲ್ಲ ಭಾಗದಲ್ಲೂ ಕರುಗಳಿಗೋಸ್ಕರ ನೀಡಲಾಗುವ ಸಮಗ್ರ ಚಿಕಿತ್ಸಾ ಅಭಿಯಾನವಾದ “ಕರುಣಾ” ಕಾರ್ಯಕ್ರಮ ಚಾಲ್ತಿಯಲ್ಲಿದೆ ಎಂದು ಪಶು ಸಹಾಯಕ ನಿರ್ದೇಶಕ ಡಾ.ರೆ ಮಾ. ನಾಗಭೂಷಣ್ ತಿಳಿಸಿದರು.

ಇದರಂಗವಾಗಿ ಅರಳೀಕೆರೆ ಗ್ರಾಮದ 30 ಕರುಗಳಿಗೆ ಸಮಗ್ರ ಚಿಕಿತ್ಸೆ ನೀಡಲಾಗಿದೆ. ಗ್ರಾಮದ ಎಲ್ಲ ಕರುಗಳಿಗೂ ಜಂತುನಾಶಕ ಔಷಧಿಯನ್ನು ಕುಡಿಸಿ, ಸದೃಢ ಆರೋಗ್ಯ ವೃದ್ಧಿಗೆ ಪೂರಕವಾದ ಅಗತ್ಯ ಟಾನಿಕ್ ಮತ್ತು ಚುಚ್ಚುಮದ್ದುಗಳನ್ನು ನೀಡಲಾಯಿತು. ನಂತರ, ಕರುಗಳಿಗೆ ಪ್ರತಿದಿನ ಕೊಡಬಹುದಾದ ಮಾತ್ರೆ ಮತ್ತು ಟಾನಿಕ್’ಗಳನ್ನೂ ಪಾಲಕರಿಗೆ ವಿತರಿಸಲಾಯಿತು.

ಈ ಕರುಗಳಿಗೋಸ್ಕರ ನಡೆಸುವ ಕರುಣಾ ಕಾರ್ಯಕ್ರಮವನ್ನು ಪಾಲಕರಿಗೆ ಅನುಕೂಲಕರವಾದ ಸಂಜೆ ವೇಳೆಯ 6.00 ಗಂಟೆಗೆ ನಡೆಸಲಾಗಿರುತ್ತದೆ. ನಂತರ ಮಿಕ್ಕಿದ ರಾತ್ರಿ ಸಮಯದಲ್ಲಿ ಪಶುಪಾಲನೆ ಹಾಗೂ ಅದರ ಆಧುನಿಕ ಮತ್ತು ವೈಜ್ಞಾನಿಕ ವಿಧಾನಗಳ ಕುರಿತಾದ ವಿಶೇಷ ಉಪನ್ಯಾಸಗಳನ್ನು ಹಳ್ಳಿಗಳಲ್ಲಿ ನೀಡಲಾಗುತ್ತಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1001121569

ಬೆಳಗ್ಗೆಯೂ 8.30’ರ ಹೊತ್ತಿಗೆ ಅರಳೀಕೆರೆ ಗ್ರಾಮದ ಸುಮಾರು 100 ರಾಸುಗಳಿಗೆ ಜಂತುನಾಶಕ ಔಷಧಿ ಕುಡಿಸಿ, ಚರ್ಮಗಂಟು ರೋಗದ ಲಸಿಕೆಗಳನ್ನು ನೀಡಲಾಯಿತು. 10 ರಾಸುಗಳಿಗೆ ಬರಡು ಮತ್ತು ಗರ್ಭಸಂಬಂಧೀ ಚಿಕಿತ್ಸೆಯನ್ನು ನೀಡಲಾಯಿತು. 30 ರಾಸುಗಳಲ್ಲಿದ್ದ ಇತರೆ ಸಾಮಾನ್ಯ ತೊಂದರೆಗಳನ್ನೂ ಪರೀಕ್ಷಿಸಿ, ಚಿಕಿತ್ಸೆಯನ್ನು ನೀಡಲಾಯಿತು. ಜೊತೆಗೆ ಗರ್ಭಧರಿಸಿದ್ದ 30 ರಾಸುಗಳು ಹಾಗೂ ಕರುವಿಗೆ ಜನ್ಮ ನೀಡಿದ್ದ 15 ರಾಸುಗಳ ಪಾಲಕರಿಗೆ ಲವಣ ಮತ್ತು ಖನಿಜ ಮಿಶ್ರಣದ ಪ್ರಾಕೆಟ್’ಗಳನ್ನು ವಿತರಿಸಿ, ಅದನ್ನು ರಾಸುಗಳಿಗೆ ನೀಡುವ ಸರಿಯಾದ ಮಾರ್ಗಸೂಚಿ ಮತ್ತು ಸಲಹೆಗಳನ್ನೂ ಪಾಲಕರಿಗೆ ತಿಳಿಸಿಕೊಡಲಾಯಿತು.

ಅದೇ ರೀತಿ ‌ಗ್ರಾಮದ 600 ಕುರಿಗಳ ಕುರಿ ಸಾಕಣೆದಾರರಿಗೂ ಜಂತುನಾಶಕ ಔಷಧಿಯನ್ನು ವಿತರಿಸಿ, ಕುರಿಗಳಿಗೆ ಅದನ್ನು ನೀಡುವ ವಿಧಾನಗಳನ್ನು ತಿಳಿಸಿಕೊಡಲಾಯಿತು.

ಚಿಕ್ಕನಾಯಕನಹಳ್ಳಿ ತಾಲೂಕಿನ ಸೋರಲಮಾವು ಗ್ರಾಮದಲ್ಲೂ ಕರುಗಳಿಗೋಸ್ಕರ ಕರುಣಾ ಸಮಗ್ರ ಚಿಕಿತ್ಸಾ ಅಭಿಯಾನವನ್ನು ನಡೆಸಲಾಯಿತು. ಗ್ರಾಮದ 25 ಕರುಗಳಿಗೆ ಸಮಗ್ರ ಚಿಕಿತ್ಸೆ ನೀಡಲಾಯಿತು. ಇಲ್ಲಿಯೂ ಕೂಡ ಪಶು ಆರೋಗ್ಯ ಶಿಬಿರವನ್ನು ನಡೆಸಲಾಯಿತು.

ಗ್ರಾಮದ 50 ರಾಸುಗಳಿಗೆ ಜಂತುನಾಶಕ ಔಷಧಿ ಕುಡಿಸಿ, ಚರ್ಮಗಂಟು ರೋಗದ ಲಸಿಕೆ ನೀಡಲಾಯಿತು. ಇತರೆ ಸಾಮಾನ್ಯ ತೊಂದರೆಗಳಿದ್ದ 15 ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಇಲ್ಲಿನ 06 ರಾಸುಗಳಿಗೆ ಬರಡು ಮತ್ತು ಗರ್ಭಸಂಬಂಧಿ ಚಿಕಿತ್ಸೆಯನ್ನು ನೀಡಲಾಯಿತು. ಮತ್ತು ಇಲ್ಲಿ ಗರ್ಭಧರಿಸಿದ್ದ 15 ರಾಸುಗಳು ಹಾಗೂ ಕರುವಿಗೆ ಜನ್ಮ ನೀಡಿದ್ದ 15 ರಾಸುಗಳು ಎಲ್ಲಕ್ಕೂ ಲವಣ ಮತ್ತು ಖನಿಜ ಮಿಶ್ರಣಗಳ ಪ್ಯಾಕೆಟ್ಟುಗಳನ್ನು ಪಾಲಕರ ಕೈಗೆ ವಿತರಿಸಲಾಯಿತು. ಜೊತೆಗೆ ಗ್ರಾಮದ ಕುರಿ ಹಾಗೂ ಮೇಕೆಗಳ ಆರೋಗ್ಯಕರ ಬೆಳವಣಿಗೆಗಾಗಿ ಮಾತ್ರೆ, ಟಾನಿಕ್ಕು, ಜಂತುನಾಶಕ ಔಷಧಿ ಹಾಗೂ ಲಸಿಕೆ ಹಾಕಿಸಬೇಕಾದ ವೇಳಾಪಟ್ಟಿ ಎಲ್ಲವನ್ನೂ ಪಾಲಕ ಮತ್ತು ಸಾಕಣೆದಾರರ ಕೈಗೆ ತಿಳಿಸಿ ಕೊಡಲಾಯಿತು.

1001121568

ಕರುಗಳ ಲಾಲನೆ-ಪಾಲನೆ, ಒಂದು ವರ್ಷ ಅವಧಿಯ ಒಳಗೆ ಕರು ಬೆದೆಗೆ ಬರುವಂತೆ ಮಾಡಲು ಅಳವಡಿಸಿಕೊಳ್ಳಬೇಕಾದ ಅಂಶಗಳು, ಕೃತಕ ಗರ್ಭಧಾರಣೆಯ ಮಹತ್ವ, ಗರ್ಭಧರಿಸಿದ ರಾಸುಗಳ ಪಾಲನೆ-ಪೋಷಣೆಯ ನವ ವಿಧಾನಗಳು, ರೋಗಗಳ ನಿಯಂತ್ರಣ, ಲಸಿಕೆಗಳ ಪ್ರಾಮುಖ್ಯತೆ, ಕಂದು ರೋಗದ ಲಸಿಕೆ, ಚರ್ಮಗಂಟು ರೋಗದ ಲಸಿಕೆ, ಕಾಲು-ಬಾಯಿ ಜ್ವರದ ಲಸಿಕೆ ಹಾಗೂ ಮೇವಿನ ಬೆಳೆಗಳ ಪ್ರಾಮುಖ್ಯತೆ, ಒಣಮೇವು ಪೌಷ್ಠೀಕರಣ, ರಸಮೇವು ತಯಾರಿಕೆ, ಲಾಭದಾಯಕ ಹೈನುಗಾರಿಕೆಯ ತತ್ವಗಳು ಮತ್ತು ಅಭ್ಯಾಸಕ್ರಮಗಳೂ ಸೇರಿದಂತೆ, ಪಶು ಪಾಲನೆಯ ಸಮಗ್ರ ವಿಚಾರಗಳನ್ನು ಉಪನ್ಯಾಸ ಕಾರ್ಯಕ್ರಮಗಳಲ್ಲಿ ರೈತ ಮತ್ತು ಪಶುಪಾಲಕರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಪಶು ಸಹಾಯಕ ನಿರ್ದೇಶಕ ಡಾ.ರೆ ಮಾ ನಾಗಭೂಷಣ್ ತಿಳಿಸಿದರು.

ಕರುಗಳಿಗೋಸ್ಕರ ಕರುಣಾ ಅಭಿಯಾನದಲ್ಲಿ, ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎನ್ ವಿರೂಪಾಕ್ಷ, ಜಾನುವಾರು ಅಧಿಕಾರಿ ಜಗದೀಶ್, ಹಿರಿಯ ಪಶು ಪರೀಕ್ಷಕರುಗಳಾದ ಅತೀಕ್ ಅಹಮದ್ ಮತ್ತು ಮನೋಹರ್, ದಿಲೀಪ್, ಪ್ರಜ್ವಲ್, ಅತಾ ಉಲ್ಲಾ, ಸಿದ್ರಾಮಣ್ಣ, ನವೀನ್ ಹಾಗೂ ಪಶು ಸಖಿಯರಾದ ಕವಿತಾ, ಪ್ರಮೀಳಾ ಉಪಸ್ಥಿತರಿದ್ದರು.

1001121567

ಜೊತೆಗೆ, ರೈತರು, ಪಶು ಪಾಲಕರು, ಗ್ರಾಮಸ್ಥರು,
ಗ್ರಾಮಗಳ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಹಾಗೂ ಆಸಕ್ತ ಯುವಕ ಯುವತಿಯರು ಹಾಜರಿದ್ದರು.

ವರದಿ, ಸಂಚಲನ, ಚಿಕ್ಕನಾಯಕನ ಸೀಮೆಯಿಂದ

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...