ಚಿಕ್ಕಮಗಳೂರು ನಗರದಲ್ಲಿ ಶ್ರೀ ಶಾರದಾ ಸ್ಕೂಲ್ ಆಫ್ ಲಾದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಶ್ರೀಗಳ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ರಾಜ್ಯದಲ್ಲಿ ಎಚ್ಐವಿ ಸೋಂಕು ತಡೆಗಟ್ಟುವಿಕೆ ಬಗ್ಗೆ ಜನ ಜಾಗೃತಿ ಮೂಲಕ ಕಾರ್ಯಕ್ರವನ್ನು ಯಶಸ್ವಿನಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಎಚ್ಐವಿ ತಡೆಗಟ್ಟುವಿಕೆ ಆರೈಕೆ ಬೆಂಬಲ ಮತ್ತು ಚಿಕಿತ್ಸಾ ಸೇವೆಗಳಿಗಾಗಿ ಸೇವೆ ಸಲ್ಲಿಸಿದ ಸೌಲಭ್ಯಗಳನ್ನು ಗೌರವಿಸಲಾಯಿತು ಮತ್ತು ICTC ಗಳಿಗೆ NACO ಮತ್ತು NABL ಪ್ರಮಾಣಪತ್ರಗಳನ್ನು ಸಹ ವಿತರಿಸಲಾಯಿತು ಎಂದು ದಸಂಸ ಮುಖಂಡ ರಾಜು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಬ್ರೇಕ್ ಫೇಲ್; ಲಾರಿ ಪಲ್ಟಿ
ಈ ವೇಳೆ ಕುಮಾರ್, ಪ್ರಾಂಶುಪಾಲರು. ಮಾನ್ಯ ಹನುಮಂತಪ್ಪ, ಹಿರಿಯ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಡಿ.ಎಲ್.ಎಸ್.ಎ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಆರ್ಡಿಎಫ್ ಅಧ್ಯಕ್ಷರಾದ ಶ್ರೀ ರಾಜು ನರಸಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ ಲಲಿತಾ ಡಿಹೆಚ್ಇಒ, ಡಿಎಚ್ಒ ಕಚೇರಿಯಲ್ಲಿ ಎಚ್ಐವಿ ಮತ್ತು ಶ್ರೀಮತಿ ಜಲಜಾಕ್ಷಿ ಡಿಎಚ್ಇಒ ಹಾಗೂ ಇನ್ನಿತರರಿದ್ದರು.





