ಕಾಡು ಪ್ರಾಣಿಯಾದ ಕಾಟಿಯನ್ನು ಬೇಟೆಯಾಡಿ ಮಾಂಸ ಹಂಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪ್ರಾದೇಶಿಕ ಅರಣ್ಯ ವಲಯದ ಭಾರತೀ ಬೈಲ್ ವ್ಯಾಪ್ತಿಯ ಬಾಳೂರು ಗ್ರಾಮದಲ್ಲಿ ನಡೆದಿದೆ.
ಕಾಡು ಪ್ರಾಣಿಯನ್ನು ಬೇಟೆಯಾಡಿದ ಆರೋಪದ ಹೊಂದಿರುವ ವ್ಯಕ್ತಿಗಳು, ಕಲ್ಮನೆ ಎಸ್ಟೇಟ್ ನ ಜೀವನ್, ಫೀಲ್ಡ್ ಆಫೀಸರ್ ಬಪ್ಪುಂಜಿಯ ರವೀಶ್, ರೈಟರ್ ಪ್ರದೀಪ್, ಮೇಸ್ತ್ರಿ ದೇಜಪ್ಪ, ಸೀನ, ಬಾಳೂರಿನ ಸುಂದ್ರೇಶ್, ದಿಲೀಪ್, ಕಲ್ಪನೆ ಎಸ್ಟೇಟ್ ಮಾಲೀಕ ಧೀರಜ್ ಎನ್ನಲಾಗಿದೆ. ಭಾರತೀ ಬೈಲ್ ವ್ಯಾಪ್ತಿಯ ಬಾಳೂರು ಗ್ರಾಮದ ಮಂಜಯ್ಯನ ಮನೆಯಲ್ಲಿ ಕಾಡುಪ್ರಾಣಿಯನ್ನು ಕಳ್ಳಬೇಟೆಯಾಡಿ 1 ಕೆ.ಜಿ.ಯಷ್ಟು ಮಾಂಸವನ್ನು ಕದ್ದು, ಶೇಖರಿಸಿರುವುದು ಪತ್ತೆಯಾಗಿದೆ. ನಿಡುವಾಳೆ ಗ್ರಾಮದ ಸೇಂಟ್ ಮೇರಿಸ್ ಕಲ್ಕನೆ ಎಸ್ಟೇಟ್ ನಲ್ಲಿ ಕಾಡುಕೋಣ ಬೇಟೆಯಾಡಿ ಮಾಂಸವನ್ನು ಮಾಡಿರುವುದಾಗಿ ತಿಳಿದು ಬಂದು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲಿಸಿದಾಗ ಘಟನೆ ವಿಚಾರ ಹೊರಗೆ ಬಂದಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಪುಂಡಾನೆ ಸೆರೆ; ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ಯಶಸ್ವಿ
ಕಳ್ಳತನ ಬೇಟೆ ಆರೋಪದಡಿ ರವೀಶ್, ಪ್ರದೀಪ್, ದೇಜಪ್ಪ, ಸೀನ, ಮಂಜಯ್ಯ, ಸುಂದರ, ರವರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಸುಂದರೇಶ್, ದಿಲೀಪ್, ಜೀವನ್, ಎಸ್ಟೇಟ್ ಮಾಲೀಕ ಧೀರಜ್ ಪ್ರಭು ತಲೆಮರೆಸಿಕೊಂಡಿದ್ದಾರೆ. ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ ಟಿ ಎಂ ಮಾರ್ಗದರ್ಶನದಲ್ಲಿ ವಲಯ ಅರಣ್ಯಯಾಧಿಕಾರಿ ಜಿ.ಮಂಜುನಾಥ್ ನೇತೃತ್ವದಲ್ಲಿ ನಡೆಸಲಾಗಿದ್ದು, ಡಿ ಅರ್ ಎಫ್ ಒ ಸುಹಾಸ್, ಲಕ್ಷ್ಮಣ್, ಉಮೇಶ್, ಅಶ್ವತ್, ಸುಧೀರ್, ಕೃಷ್ಣ ಮೂರ್ತಿ, ಗಿರೀಶ್ ಹಾಗೂ ಇನ್ನಿತರರಿದ್ದರು.





