ಜಿಲ್ಲಾಡಳಿತ ವತಿಯಿಂದ ನಡೆಸುವ ಶ್ರೀ ಸವಿತಾ ಮಹರ್ಷಿ ಜಯಂತಿ ಹಾಗೂ ಹಡಪದ ಅಪ್ಪಣ ಜಯಂತಿ ಕಾರ್ಯಕ್ರಮಗಳ ತಯಾರಿಯ ಪೂರ್ವಭಾವಿ ಸಭೆಗೆ ಆಹ್ವಾನಿಸದೆ ನಿರ್ಲಕ್ಷಿಸುತ್ತಿದ್ದಾರೆಂದು ಸವಿತಾ ಸಮಾಜ ಜಿಲ್ಲಾಧ್ಯಕ್ಷರಾದ ವಿಶ್ವನಾಥ ತಿಳಿಸಿದರು.
ಸವಿತಾ ಸಮಾಜದ ಮಹರ್ಷಿಗಳಾದ ಶ್ರೀ ಸವಿತಾ ಮಹರ್ಷಿಯವರ ಜಯಂತಿ ಆಚರಣೆ ಹಾಗೂ ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಾಡಬೇಕೆಂದು ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಅಡಿಯಲ್ಲಿ ಜಿಲ್ಲಾ ಸವಿತಾ ಸಮಾಜದ ಸಂಘಟನೆಯ ಮುಖಂಡರುಗಳಾದ ನಾವುಗಳು ಆಜಾದ್ ಪಾರ್ಕ್ ವೃತ್ತದಲ್ಲಿ ಸಹಿಸಂಗ್ರಹ ಅಭಿಯಾನ ನಡೆಸಿದ ಪರಿಣಾಮ ನಮ್ಮ ಒತ್ತಾಯಕ್ಕೆ ಮಣಿದು ಘನ ಸರ್ಕಾರ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆಯನ್ನು ಜಾರಿಗೊಳಿಸಿತು. ಹಾಗೆಯೇ, ಸವಿತಾ ಸಮಾಜ ಜಿಲ್ಲೆಯಲ್ಲಿ ನೋಂದಣಿಯಾದ ಅಧಿಕೃತ ಸಂಘವಾಗಿದೆ. ನಮ್ಮ ಸಮಾಜದ ಬಂಧುಗಳ ಏಳಿಗೆಗಾಗಿ ಅನೇಕ ಹೋರಾಟ, ಕಾರ್ಯಕ್ರಮ, ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಈ ಶ್ರೀ ಸವಿತಾ ಮಹರ್ಷಿ ಜಯಂತಿ ಹಾಗೂ ಹಡಪದ ಅಪ್ಪಣ ಜಯಂತಿ ಕಾರ್ಯಕ್ರಮ ನಮ್ಮಂತ ಧಮನಿತ ಸಮುದಾಯಕ್ಕೆ ನಮ್ಮ ಅಹವಾಲು ತಿಳಿಸಲು ಮುಖ್ಯ ವೇದಿಕೆಯಾಗಿದೆ. ಆದರೆ ಈ ಜಯಂತಿಯ ನಿರ್ವಹಣೆಯನ್ನು ಮಾಡುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು, ಜಯಂತಿಯ ಪೂರ್ವಭಾವಿ ಸಭೆಗಳಿಗೆ ನಮ್ಮನ್ನು ಆಹ್ವಾನಿಸದೆ ಕಡೆಗಣಿಸುವ ಕೆಲಸ ಮಾಡುತ್ತಿದ್ದಾರೆಂದು ಸವಿತಾ ಸಮಾಜದ ಮುಖಂಡ ಸತೀಶ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಆನೆ ದಾಳಿ; ಕಾರ್ಮಿಕ ಮಹಿಳೆ ಸಾವು
ಈ ಬಗ್ಗೆ ಇಲ್ಲಿನ ಅಧಿಕಾರಿಗಳಾದ ಶ್ರೀಯುತ ಡಾ|| ಸಿ. ರಮೇಶ್, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಬಳಿ ಹಲವು ಬಾರಿ ಮೌಖಿಕವಾಗಿ ತಿಳಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಸವಿತ ಸಮಾಜದ ಜನಾಂಗಕ್ಕೆ ಅಪಮಾನ ಮಾಡಿದಂತಾಗಿದೆ. ಸವಿತಾ ಸಮಾಜದ ಶ್ರೀ ಸವಿತಾ ಮಹರ್ಷಿ ಜಯಂತಿಗೆ ನಮ್ಮನ್ನೇ ಆಹ್ವಾನಿಸದೆ ಪೂರ್ವಭಾವಿ ಸಭೆಯಾಗಲಿ, ಕಾರ್ಯಕ್ರಮವಾಗಲಿ ನಡೆಸಿದರೆ ಯಾರಿಗೆ ಲಾಭವಾಗುತ್ತಿದೆ ಗೊತ್ತಾಗುತ್ತಿಲ್ಲವೆಂದು ಸವಿತ ಸಮಾಜದ ಮುಖಂಡ ವಿಶ್ವನಾಥ ತಿಳಿಸಿದರು. ಈ ವೇಳೆ ಸವಿತಾ ಸಮಾಜ ಮುಖಂಡರು, ಗೌಸ್ ಮೋಹದ್ದಿನ್ ಹಾಗೂ ಇನ್ನಿತರರಿದ್ದರು.





