ಹೆಚ್ಚುತ್ತಲೇ ಇದೆ ಮಲೆನಾಡಿನ ಕೃಷಿ ಬಿಕ್ಕಟ್ಟು ಹಾಗೂ ಕಾರ್ಮಿಕರ ಬವಣೆ

Date:

ಹಿಂದೆ ಮಲೆನಾಡೆಂದರೆ ಸಮೃದ್ಧತೆಗೆ ಹೆಸರಾಗಿತ್ತು. ಆದರೆ, ಇಂದು ಆತಂಕಗಳ ಬೀಡಾಗಿದೆ. ಇದಕ್ಕೆ ಕಾರಣಗಳು ಹಲವಾರಿವೆ. ಅವುಗಳಲ್ಲಿ ಮುಖ್ಯವಾಗಿ ಆರ್ಥಿಕತೆಗೆ ಬೆನ್ನೆಲುಬಾಗಿದ್ದ ಕೃಷಿ ಇಂದು ತೀವ್ರ ಸ್ವರೂಪದ ಬಿಕ್ಕಟ್ಟಿಗೆ ಜಾರಿಕೊಳ್ಳುತ್ತಿರುವುದು ತುಂಬಾ ಆತಂಕ ಹುಟ್ಟಿಸುತ್ತದೆ. ಕೃಷಿಯನ್ನು ಅವಲಂಬಿಸಿರುವಂತಹ ಕಾರ್ಮಿಕರ ಸ್ಥಿತಿ ತೀರಾ ಸೋಚನೀಯವಾಗುತ್ತಿದೆ. ರೈತರ ಮನಸುಗಳಲ್ಲಿ ಮಲೆನಾಡಿನ ಕೃಷಿಗೆ ಇನ್ನು ಮುಂದೆ ಭವಿಷ್ಯ ಇಲ್ಲವೇನೋ ಎಂಬ ಆತಂಕ ಮನೆ ಮಾಡಿದೆ.

ಮಲೆನಾಡಿನ ಕಾರ್ಮಿಕರ ಬವಣೆಗೂ ಮಲೆನಾಡಿನ ಕೃಷಿ ಬಿಕ್ಕಟ್ಟಿಗೂ ಅವಿನಾಭಾವ ಸಂಬಂಧವಿದೆ. ಮಲೆನಾಡಿನ ಕೃಷಿ ಬಿಕ್ಕಟ್ಟಿನಲ್ಲಿದೆ ಎಂದರೆ, ಕಾರ್ಮಿಕರ ಸ್ಥಿತಿ ಕೂಡ ಹದಗೆಟ್ಟಿದೆ ಅಂತ ಅರ್ಥ. ಇತ್ತೀಚಿನ ದಿನಗಳಲ್ಲಿ ಈ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುತ್ತಿದೆ. ಇದರ ಪರಿಣಾಮ ರೈತರ ಮಕ್ಕಳು, ಕೂಲಿ ಕಾರ್ಮಿಕರು ಉದ್ಯೋಗ ಹರಸಿ ಪೇಟೆ-ಪಟ್ಟಣಗಳಿಗೆ ವಲಸೆ ಹೋಗುವ ದುಸ್ಥಿತಿ ಬಂದಿದೆ. ಗ್ರಾಮೀಣ ಜನರ ಈ ಬಿಕ್ಕಟ್ಟಿಗೆ ಸರ್ಕಾರಗಳೇ ನೇರ ಹೊಣೆ. ಸರ್ಕಾರಗಳು ತೆಗೆದುಕೊಂಡ ರೈತ ವಿರೋಧಿ, ಜನ ವಿರೋಧಿ ನೀತಿಗಳು ಹಾಗೂ ನವಉದಾರವಾದಿ ನೀತಿಗಳ ಪರಿಣಾಮ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಈ ನೀತಿಗಳಿಂದ ಕೃಷಿ ಕ್ಷೇತ್ರ ಕಾರ್ಪೊರೇಟ್ ಕುಳಗಳ ಕಪಿಮುಷ್ಠಿಯಲ್ಲಿ ಬಂದಿಯಾಗಿದೆ.

ಒಂದು ಕಡೆ ವಿದೇಶಿ ಕಂಪನಿಗಳ ಕೈಯಲ್ಲಿರುವ ಕೀಟನಾಶಕ, ರಾಸಾಯನಿಕ ಗೊಬ್ಬರಗಳ ಬೆಲೆ ವಿಪರೀತ ಹೆಚ್ಚಾಗಿದೆ. ಇನ್ನೊಂದು ಕಡೆ ಉತ್ಪನ್ನಗಳ ದರಗಳು ಸ್ಥಿರವಾಗಿಲ್ಲದೆ ಕುಸಿತ ಕಂಡಿದೆ. ಇದರ ನಡುವೆ ಮತ್ತೊಂದು ವಿಪರ್ಯಾಸವೆಂದರೆ, ರೈತರ ಕೃಷಿ ಭೂಮಿಯನ್ನು ಅವರ ಕೈಯಿಂದ ಕಸಿದುಕೊಂಡು ಬಂಡವಾಳಿಗರ ಕೈಗೆ ನೀಡುವ ಹುನ್ನಾರ ಕೂಡ ತೆರೆ ಮರೆಯಲ್ಲಿ ನಡೆಯುತ್ತಿದೆ. ಇದೆಲ್ಲದರ ನಡುವೆ ಹವಾಮಾನ ವೈಪರಿತ್ಯ ಕೂಡ ಮಲೆನಾಡನ್ನು ದೊಡ್ಡ ಮಟ್ಟದಲ್ಲಿ ಬಾಧಿಸುತ್ತಿದೆ. ಅಷ್ಟೇ ಅಲ್ಲದೆ, ಸಣ್ಣ ಹಾಗೂ ಮಧ್ಯಮ ರೈತರಿಗೆ ಕಾರ್ಮಿಕರ ಸಮಸ್ಯೆ ಕೂಡ ಗಂಭೀರವಾಗಿ ಕಾಡುತ್ತಿದೆ. ಈ ಹಿಂದೆ ಕಾಡುತ್ತಿದ್ದ ಹಳದಿ ರೋಗ, ಕೊಳೆ ರೋಗದ ಜೊತೆಗೆ ಎಲೆ ಚುಕ್ಕಿ ರೋಗ ರೈತರಿಗೆ ಕೃಷಿ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಇದೆಲ್ಲದರಿಂದ ಮಲೆನಾಡಿನ ರೈತ ಹೈರಾಣಾಗಿ ತುಂಬಾ ಝರ್ಜರಿತನಾಗುತಿದ್ದಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದೆಲ್ಲದಕ್ಕೆ ಒಂದು ಶಾಶ್ವತ ಪರಿಹಾರ ಹುಡುಕಿ ರೈತರ ರಕ್ಷಣೆ ಮಾಡಬೇಕಾದ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ. ಅಷ್ಟೇ ಅಲ್ಲದೆ ಮಲೆನಾಡಿನ ಜನರ ಬದುಕನ್ನು ಮೂರಾಬಟ್ಟೆ ಮಾಡುವ ದಿಸೆಯಲ್ಲಿ ಸೆಕ್ಷನ್-4, ಸೆಕ್ಷನ್-17ರಂತಹ ಜನ ವಿರೋಧಿ ಅರಣ್ಯ ಕಾಯ್ದೆಗಳನ್ನು ಜನರ ಮೇಲೆ ಏರುತಿದ್ದಾರೆಂದು ಕರ್ನಾಟಕ ಜನಶಕ್ತಿಯ ಕೆ.ಎಲ್ ಅಶೋಕ್ ಆರೋಪಿಸಿದ್ದಾರೆ.

ಮಲೆನಾಡಿನ ಕೃಷಿ ಬಿಕ್ಕಟ್ಟಿನ ನೇರ ಪರಿಣಾಮ ಇಲ್ಲಿನ ಕಾರ್ಮಿಕರ ಮೇಲೆ ಬೀಳುತ್ತಿದೆ. ಇಲ್ಲಿನ ಕಾರ್ಮಿಕರ ಪರಿಸ್ಥಿತಿ ಹೇಗಿದೆ ಎಂದರೆ, ಯಾವುದು ನಿಶ್ಚಿತವಾಗಿಲ್ಲ. ಸರಿಯಾದ ಕೂಲಿ ನಿರ್ಧಾರ ಇಲ್ಲ. ಸಮಯ ಖಾಯಂ ಕೆಲಸ ಇತ್ಯಾದಿ ಯಾವುದು ಆಗ್ತಾ ಇಲ್ಲ. ಕೆಲಸಕ್ಕೆ ಯಾವುದೇ ಭದ್ರತೆ ಇರುವುದಿಲ್ಲ. ತೋಟದ ಮಾಲೀಕರು ನಿರ್ವಹಣೆ ಕಷ್ಟ ಅಂತ ಹೇಳಿಕೊಂಡು ಬೇರೆ ಬೇರೆ ರಾಜ್ಯದ ಕೆಲಸಗಾರರನ್ನು ತೋಟಗಳಿಗೆ ಕರೆಸಿಕೊಳ್ಳುತ್ತಿದ್ದಾರೆಂದು ಮಲೆನಾಡಿನ ಕೂಲಿ ಕಾರ್ಮಿಕರು ಆರೋಪಿಸಿದ್ದಾರೆ.

WhatsApp Image 2023 10 30 at 9.07.07 AM

ಈದಿನ.ಕಾಮ್ ಜೊತೆ ಮಾತನಾಡಿದ ಕೃಷಿ ಕಾರ್ಮಿಕ ಮಂಜುನಾಥ್, “ಕೂಲಿ ಕೆಲಸ ಮಾಡುವ ಜನರು ಬಹಳ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಆ ವೇತನ ಕಾರ್ಮಿಕರ ಜೀವನ ನಿರ್ವಹಣೆಗೆ ಸಾಲದಾಗುತ್ತಿದೆ. ಇಲ್ಲಿನ ಕೃಷಿ ಕಾರ್ಮಿಕರು ಕಷ್ಟಪಟ್ಟು ದುಡಿದು ಸಂಘ-ಸಂಸ್ಥೆಗಳಲ್ಲಿ ಸಾಲ ಮಾಡಿ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರಗಳು ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಕಾಗುತ್ತಿಲ್ಲ. ಮಕ್ಕಳಿಗೆ ಮತ್ತಮ ಶಿಕ್ಷಣ ಕೊಡಿಸುವುದೂ ಸವಾಲಾಗಿದೆ” ಎಂದು ಹೇಳಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ಮಳೆಯೂ ಕೈಕೊಡುತ್ತಿದ್ದು, ಕೃಷಿ ಕೆಲಸಗಳು ಸಿಗುತ್ತಿಲ್ಲ. ಇದೆಲ್ಲದಕ್ಕೂ ಸರಿಯಾದ ಪರಿಹಾರ ಹುಡುಕಬೇಕಾಗಿದೆ. ಕೃಷಿ ಬಿಕ್ಕಟ್ಟುಗಳಿಗೆ ಪರಿಹಾರ ಹುಡುಕುವುದರೊಂದಿಗೆ ಕಾರ್ಮಿಕರ ಮಕ್ಕಳಿಗೆ ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗಬೇಕು. ಸರ್ಕಾರಗಳು ಭೂರಹಿತರಿಗೆ ಭೂಮಿ ನೀಡಬೇಕು. ಭೂಮಿ ವಸತಿ ಸೇರಿದಂತೆ ಅಭಿವೃದ್ಧಿ ಪರ ಜನಸ್ನೇಹಿ ಕೆಲಸಗಳಿಗೆ ಆದ್ಯತೆ ನೀಡಬೇಕಿದೆ” ಎಂದು ಅವರು ಒತ್ತಾಯಿಸಿದ್ದಾರೆ.

“ಮಲೆನಾಡಿನ ಕೃಷಿ ಬಿಕ್ಕಟ್ಟು ಮತ್ತು ಕಾರ್ಮಿಕರ ಬವಣೆಯನ್ನು ಮನಗಂಡು ಇದರಿಂದ ಹೊರಬರುವ ಪ್ರಯತ್ನವಾಗಿ ಎಲ್ಲ ಜಾತಿ ಧರ್ಮ ಸಮುದಾಯದವರು ಪಕ್ಷ ಬೇದ ಮರೆತು ಇದಕ್ಕೊಂದು ಸರಿಯಾದ ಶಾಶ್ವತವೆನಿಸುವ ಒಂದು ಗುಣಾತ್ಮಕವಾದ ಪರಿಹಾರಗಳನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ನಡೆಯಬೇಕು” ಎಂದು ಪರಿಸರ ಹೋರಾಟಗಾರ ಕಲ್ಕುಲಿ ವಿಠಲ್ ಹೆಗ್ಡೆ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಗಿರಿಜಾ ಎಸ್‌ ಜಿ
ಗಿರಿಜಾ ಎಸ್‌ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...