ಚಿಕ್ಕಮಗಳೂರು | ಆನೆಗಳ ಹಾವಳಿ; ಸುತ್ತಲಿನ ಗ್ರಾಮಸ್ಥರಲ್ಲಿ ಭೀತಿ

Date:

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಸಮೀಪದಲ್ಲಿರುವ ಮುತ್ತಿನಕೊಪ್ಪ ಗ್ರಾಮ ಪಂಚಾಯತಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಕೊರಲುಕೊಪ್ಪ, ಹೊಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಆಜುಬಾಜಿನಲ್ಲಿ ತುಂಗಭದ್ರಾ ನೀರು ಹರಿಯುವುದರಿಂದ ನೀರಿನ ದಡದಲ್ಲಿ ಆನೆಗಳು ಯತೇಚ್ಛವಾಗಿವೆ. ಮುತ್ತೋಡಿ ಅಭಯಾರಣ್ಯಗಳಿಂದ ವಲಸೆ ಬಂದು ಈಗ ಊರಿನೊಳಗೆ ನುಗ್ಗುತ್ತಿವೆ.

“ಕಾಡಿನಲ್ಲಿ ಆನೆಗಳಿಗೆ ಆಹಾರವಿಲ್ಲದ ಕಾರಣ, ಆಹಾರ ಹುಡುಕಿಕೊಂಡು ನಾಡಿನೊಳಗೆ ನುಗ್ಗುತ್ತಿವೆ. ಬೆಳೆದಿರುವ ಬೆಳೆಗಳನ್ನು ಸಂಪೂರ್ಣವಾಗಿ ನಾಶಮಾಡುತ್ತಿವೆ. ಮೊದಲು ಆನೆ ಎನ್ನುವ ಸುಳಿವೇ ಇರಲಿಲ್ಲ. ಈಗ 2 ವರ್ಷದಿಂದ ಆನೆಗಳ ಹಾವಳಿ ಜಾಸ್ತಿ ಆಗಿದೆ” ಎಂದು ಸ್ಥಳೀಯ ನಿವಾಸಿ ಸುನಿಲ್ ಹಾಗೂ ತಮ್ಮಣ್ಣ ಈ ದಿನ.ಕಾಮ್‌ನೊಂದಿಗೆ ಅವಲತ್ತುಕೊಂಡಿದ್ದಾರೆ.

ಆನೆಗಳ ಹಾವಳಿ 1

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೊರಲು ಕೊಪ್ಪ ಗ್ರಾಮದ ನಿವಾಸಿ ಕೃಷ್ಣಮೂರ್ತಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ. ಸ್ಥಳಕ್ಕೆ ಧಾವಿಸಿ ಕೂಡಲೇ ಸಿಡಿಮದ್ದು, ಪಟಾಕಿ ಹಚ್ಚುತ್ತಾರೆ. ಆದರೂ ಕೂಡ ಆನೆಗಳು ಹೆದರುವುದಿಲ್ಲ. ಆನೆಗಳು ಭಯಬೀಳದೆ ಹೋದಾಗ ಕಾಡಿಗೆ ಓಡಿಸುತ್ತಾರೆ. ಆದರೆ, ಮರಳಿ ರಸ್ತೆ ಬದುಗಳಿಗೆ ಬರುತ್ತವೆ. ನಿಂಗಪುರದಿಂದ ಉಂಬಲೇಬೈಲುವರೆಗೂ ಆನೆಗಳು ಬರದಂತೆ ಆನೆಗಳ ಹೊಂಡ(ಟ್ರಂಚ್)ಗಳನ್ನು ತೋಡಿದ್ದಾರೆ. ಇದೇ ರೀತಿಯಲ್ಲಿ ನಮ್ಮ ಗ್ರಾಮಗಳ ಕಡೆಗೆ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ. ಇಲ್ಲವಾದರೆ ಆನೆಗಳು ಊರೊಳಗೆ ನುಗ್ಗಿ ಬರುತ್ತವೆ” ಎಂದು ಕಳವಳ ವ್ಯಕ್ತಪಡಿಸಿದರು.

ಆನೆಗಳ ಹಾವಳಿ

“ಅಡಕೆ, ಕಾಫಿ ಬೆಳೆ ಬೆಳೆಯಲು 5-10 ವರ್ಷ ಬೇಕು. ಭತ್ತ ಹಾಗೂ ಬಾಳೆ ಬೆಳೆಗಳು ಬೆಳೆದು ನಿಂತಿದ್ದು, ಫಸಲು ನೋಡುವ ಮುನ್ನವೇ ಆನೆಗಳು ಬೆಳೆಗಳನ್ನು ಒಂದೇ ಕ್ಷಣಕ್ಕೆ ನಾಶ ಮಾಡುತ್ತಿವೆ. ಇದಕ್ಕೆ ಸರ್ಕಾರ ಆದಷ್ಟು ಬೇಗ ಆನೆಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಉಂಟಾಗಿರುವ ಬೆಳೆನಷ್ಟಕ್ಕೆ ಪರಿಹಾರ ಕಟ್ಟಿಕೊಡಬೇಕು” ಎಂದು ವಿಠಲ್ ಹೆಗ್ಡೆ ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.

ಆನೆಗಳ ಹಾವಳಿ

ಮಕ್ಕಳು ಬೆಳಿಗ್ಗೆ ಶಾಲೆಗೆ ತೆರಳಬೇಕೆಂದರೆ 2 ರಿಂದ 3 ಕಿಮೀ ದೂರವಿರುವ ಬಸ್‌ ನಿಲ್ದಾಣಕ್ಕೆ ಕ್ರಮಿಸಬೇಕು. ಸಂಜೆ ಅಯಿತೆಂದರೆ ರಸ್ತೆಯಲ್ಲಿ ಆನೆಗಳು ಸಂಚಾರ ಮಾಡುತ್ತಿರುತ್ತವೆ. ನಾವು ಹೇಗೆ ರಸ್ತೆಗಳಲ್ಲಿ ಓಡಾಡುವುದು. ಮಕ್ಕಳಿಗೆ ಪ್ರಾಣಾಪಾಯವಾಗುವ ಸಾಧ್ಯತೆಗಳಿವೆ” ಎಂದು ಹೊಸೂರು ಗ್ರಾಮದ ನವೀನ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಈ ದಿನ.ಕಾಮ್ ಜೊತೆ ಮಾತಾಡಿದ್ದಾರೆ.

ಆನೆಗಳ ಹಾವಳಿ 1

“ಶಾಶ್ವತ ಪರಿಹಾರ ನೀಡಬೇಕು. ಬೆಳೆ ಹೋದರೆ ಪರಿಹಾರ ಕೊಡಬಹುದು, ಜನರ ಪ್ರಾಣ ಹೋದರೆ ಮತ್ತೆ ತರುವುದಕ್ಕೆ ಸಾಧ್ಯವೇ” ಎಂದು ಗ್ರಾಮಸ್ಥರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಆನೆ ಹಾವಳಿಯಿಂದಾಗಿ ಸಮಸ್ಯೆ ಎದುರಿಸುತ್ತಿರುವ ಜನರ ಪರಿಸ್ಥಿತಿ ಕುರಿತು ಈ ದಿನ.ಕಾಮ್ ಆರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, “ಆನೆ ಹಾವಳಿ ವಿಷಯ ತಿಳಿದ ಕೂಡಲೇ ಅಧಿಕಾರಿಗಳೂ ಕೂಡ ತಕ್ಷಣ ಸ್ಥಳಕ್ಕೆ ಧಾವಿಸಿ ಪಟಾಕಿ ಹಚ್ಚಿ ರೈತರಿಗೆ, ಜನರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಿ, ಆನೆಗಳು ಇರುವ ಜಾಗಕ್ಕೆ ಹೋಗಬೇಡಿ, ಆದಷ್ಟು ದೂರವಿರಿ ಎಂದು ಸೂಚಿಸುತ್ತಾರೆ. ಜತೆಗೆ ಆನೆ ರಕ್ಷಣಾ ಪಡೆಯನ್ನೂ ಕೂಡ ನೇಮಿಸಿದ್ದಾರೆ” ಎಂದು ಮುತ್ತಿನ ಕೊಪ್ಪ ಡೆಪ್ಯೂಟಿ ಅರಣ್ಯ ಅಧಿಕಾರಿ ಮಾರುತಿಯವರು ಪ್ರತಿಕ್ರಿಯೆ ನೀಡಿದ್ದಾರೆ.

ಆನೆಗಳ ಹಾವಳಿ

ಇಲ್ಲಿನ ಸಮಸ್ಯೆ ಬಗ್ಗೆ ಜಿಲ್ಲೆಯ ಸಚಿವ ಜಾರ್ಜ್ ಮತ್ತು ಈ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡರವರಿಗೆ ಮಾಹಿತಿ ತಿಳಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ 96 ಕಿಮೀ ದೂರ ಸೋಲಾರ್‌ ವಿದ್ಯುತ್‌ ತೂಗುತಂತಿ ಬೇಲಿ, ರೈಲ್ವೇ ಬ್ಯಾರಿಕೇಡ್, ಎಲಿಫೆಂಟ್ ಪ್ರೂಫ್‌ ಚಕಿಂಗ್‌ ನಿರ್ಮಾಣ ಮಾಡಲು ಸರ್ಕಾರದ ಗಮನಕ್ಕೆ ತಂದಿದ್ದೇವೆ” ಎಂದು ಆ ಭಾಗದ ವಲಯ ಮಟ್ಟದ ಅರಣ್ಯ ಅಧಿಕಾರಿ ಪ್ರವೀಣ್ ಕುಮಾರ್ ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿದ್ದೀರಾ? ಚಾಮರಾಜನಗರ | ಕೆಲಸ ಹರಸಿ ನೆರೆ ರಾಜ್ಯಕ್ಕೆ ಗುಳೆ ಹೊರಟ ಮಂದಿ; ಮಕ್ಕಳ ಶಿಕ್ಷಣ ಮೊಟಕು

“ಈಗ ಬೆಳೆಗಳಿಗೆ ಅಪಾಯ ಮಾಡುತ್ತಿವೆ. ಇನ್ನು ಸ್ವಲ್ಪ ದಿನಗಳಾದ ಬಳಿಕ ಮನುಷ್ಯರ ಮೇಲೆ ಎರಗುತ್ತವೆಂದು ಸುತ್ತಮುತ್ತಲಿನ ಗ್ರಾಮಸ್ಥರ ಆತಂಕವಾಗಿದೆ. ಆನೆ ದಾಳಿ ಹಾಗೂ ಆನೆಗಳಿಂದಾಗುತ್ತಿರುವ ಬೆಳೆನಷ್ಟ ಸೇರಿದಂತೆ ಇತರ ಸಮಸ್ಯೆಗಳನ್ನು ಆಲಿಸಿ ಆಡಳಿತಾಧಿಕಾರಿಗಳು ಹಾಗೂ ಸರ್ಕಾರ ಗಮನವಹಿಸಿ ಆನೆ ನಿಯಂತ್ರಣದ ಕೆಲಸವನ್ನು ಕಾರ್ಯ ರೂಪಕ್ಕೆ ತರಬೇಕು” ಎಂದು ಸ್ಥಳೀಯರ ಆಗ್ರಹವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಗಿರಿಜಾ ಎಸ್‌ ಜಿ
ಗಿರಿಜಾ ಎಸ್‌ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...